ಬೆಂಗಳೂರು: ನೈಸ್ ವಿಚಾರದಲ್ಲಿ ಸದನ ಸಮಿತಿ ಕೊಟ್ಟಿರೋ ವರದಿ ಅನ್ವಯ ನೈಸ್ ಯೋಜನೆಯನ್ನ (Nice Project) ಸರ್ಕಾರ ವಶಪಡಿಸಿಕೊಳ್ಳಬೇಕು ಅಂತ ದೆಹಲಿ ಪ್ರತಿನಿಧಿ, ಸದನ ಸಮಿತಿ ಅಧ್ಯಕ್ಷರಾಗಿದ್ದ ಟಿ.ಬಿ ಜಯಚಂದ್ರ (TB Jayachandra) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ನೈಸ್ ದಾಖಲಾತಿ ಬಿಡುಗಡೆ ವಿಚಾರವಾಗಿ ವಿಧಾನಸೌಧದಲ್ಲಿ (Vidhan Soudha) ಪ್ರತಿಕ್ರಿಯೆ ನೀಡಿದ ಅವರು, ಸದನ ಸಮಿತಿ ವರದಿ ಕೊಟ್ಟ ಮೇಲೆ ಮುಗಿದೋಯ್ತು. 2016ರ ಡಿಸೆಂಬರ್ನಲ್ಲೇ ವರದಿ ಕೊಟ್ಟಿದ್ದೇನೆ. ಮೂರು ಪಕ್ಷಗಳ ಶಾಸಕರು ಕುಳಿತು ವರದಿ ಕೊಟ್ಟಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ (Belagavi Session) ಚರ್ಚೆಗೆ ಒತ್ತಾಯಿಸಿದ್ದರು. ಸರ್ಕಾರ ಕೂಡ ಅದಕ್ಕೆ ಉತ್ತರ ಕೊಟ್ಟಿದೆ. ನಮ್ಮ ಶಿಫಾರಸು ಸಲಹೆ ಕೊಟ್ಟಿದ್ದೇವೆ ಅಂತ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಹಸ್ತ ಭೀತಿ; ವಲಸಿಗರ ಜೊತೆ ಸಮಾಲೋಚನೆ ನಡೆಸಲು ಬಿಎಸ್ವೈಗೆ ತಾಕೀತು
ನೈಸ್ ಯೋಜನೆ ಮೇಲೆ 101 ಕೇಸ್ ಇದಕ್ಕೆ ಸಂಬಂಧಿಸಿದಂತೆ ಇದ್ವು. ಮೂರು ಜನರ ಸಮಿತಿ ರಚನೆ ಮಾಡಬೇಕು. ಅವರ ನೇತೃತ್ವದಲ್ಲಿ ಇದರ ತನಿಖೆ ಆಗಬೇಕು ಎಂದಿದ್ದೆವು. ನಾವು ಸಮಿತಿಯಲ್ಲಿ ಚರ್ಚಿಸಿ ವರದಿ ಕೊಟ್ಟಿದ್ದೇವೆ. ಶಿಫಾರಸು ಮಾಡಿದ್ದನ್ನ ಸರ್ಕಾರ ತೀರ್ಮಾನಿಸಬೇಕು. ಯೋಜನೆಯ ಹೆಚ್ಚುವರಿ ಭೂಮಿ ಪಡೆದುಕೊಳ್ಳಬೇಕು. ನಮ್ಮ ವರದಿ ಮೇಲೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಚಂದ್ರಯಾನ-3: ನೆಹರೂ ತಾರಾಲಯದಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋ ದೃಶ್ಯ ನೇರಪ್ರಸಾರ
ಮನಿ ಲಾಂಡರಿಂಗ್ ಕೂಡ ಆಗಿದೆ ವರದಿಯಲ್ಲಿ ಹೇಳಿದ್ದೆವು, ಯೋಜನೆಯ ಮೂಲ ಒಪ್ಪಂದದ ಉಲ್ಲಂಘನೆ ಆದ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಆಗಿದೆ. ಅದಕ್ಕೆ ವರದಿ ಬಗ್ಗೆ ಕ್ರಮ ಆಗಲೇಬೇಕು. ಇಡೀ ಯೋಜನೆಯನ್ನೇ ಸರ್ಕಾರ ಟೇಕ್ ಓವರ್ ಮಾಡಬೇಕು ಅಂತ ಒತ್ತಾಯಿಸಿದ್ದಾರೆ.
Web Stories