– ಬೈರತಿ ಬಸವರಾಜ್ ಅವರಾಗೇ ಸರೆಂಡರ್ ಆದ್ರೆ ಒಳ್ಳೇದು: ವಾರ್ನಿಂಗ್
– ಗನ್ ಹಿಡಿದು ʻದುರಂಧರ್ʼ ಸ್ಟೈಲ್ನಲ್ಲಿ ʻಕೈʼ ಮುಖಂಡ ಡಾನ್ಸ್
ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ (Byrathi Suresh) ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ (G Parameshwar) ಆತಂಕ ವ್ಯಕ್ತಪಡಿಸಿದ್ರು.
ಬೆಂಗಳೂರಿನಲ್ಲಿ ಮಾತಾಡಿದ ಅವರು, ಈ ಪ್ರಕರಣದಲ್ಲಿ ಜಂಟಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ತನಿಖೆಗೆ (Investigation) ಆದೇಶ ಮಾಡಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಪಿಸ್ತೂಲ್, ಹಣದ ಜೊತೆ ಕಾಂಗ್ರೆಸ್ ಮುಖಂಡ ಡ್ಯಾನ್ಸ್ – ವಿಡಿಯೋ ವೈರಲ್
ವಿಧಾನಸೌಧದ (Vidhan Soudha) ಗೇಟ್ ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಯ್ತು? ಯಾವ ಗೇಟ್ ನಿಂದ ಒಳಗೆ ಹೋಯ್ತು ಅನ್ನೋದು ಮುಖ್ಯ. ಒಬ್ಬ ಸಚಿವರ ಕೊಠಡಿವರೆಗೆ ಆ ಬ್ಯಾಗ್ ಹೋಗುತ್ತೆ ಅಂದ್ರೆ, ಅದೂ ಯಾರಿಗೂ ಗೊತ್ತಾಗದೇ ಬ್ಯಾಗ್ ತಗೊಂಡ್ ಹೋಗಿದ್ದಾರೆ. ಅದನ್ನೆಲ್ಲ ಪತ್ತೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕಳವು ಆಗಿರೋದು 2ನೇ ವಿಚಾರ. ಆದ್ರೆ ಆ ಬ್ಯಾಗ್ ಹೇಗೆ ಒಳಗೆ ತಂದ್ರು ಅನ್ನೋದು ನೋಡಬೇಕು. ನವೀನ್ ಅನ್ನೋ ವ್ಯಕ್ತಿ ವಿಧಾನಸೌಧದ ಒಳಗೆ ಬ್ಯಾಗ್ ತಗೊಂಡ್ ಹೋಗಿರೋದು. ಇದರ ತನಿಖೆ ಮಾಡ್ತೇವೆ ಅಂದರು.
ದುರಂಧರ್ ಸ್ಟೈಲ್ನಲ್ಲಿ ಡಾನ್ಸ್ ಮಾಡಿದ ʻಕೈʼ ಮುಖಂಡ
ಇನ್ನೂ ಕಲಬುರಗಿಯಲ್ಲಿ ಗನ್ ಹಿಡಿದು ʻದುರಂಧರ್ʼ ಚಿತ್ರದ ಸ್ಟೈಲ್ನಲ್ಲಿ ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದ್ರು. ಇದನ್ನೂ ಓದಿ: ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 3.08 ಕೋಟಿ ರೂ. ಸಂಗ್ರಹ
ಯಾರೇ ಇದ್ರೂ ಕಾನೂನಿಗೆ ವಿರುದ್ಧವಾಗಿ ಚಟುವಟಿಕೆ ಮಾಡಿದ್ರೆ ಕ್ರಮ ತಗೋತೇವೆ. ಅವರು ಯಾವ ಪಕ್ಷದವ್ರು ಅನ್ನೋದು ಆಮೇಲೆ. ಕಾನೂನು ಕ್ರಮ ತಗೊಂಡೇ ತಗೊಳ್ತೇವೆ. ಅವರು ಯಾರಿಗೇ ಆಪ್ತರಿದ್ರೂ ಯಾರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಿ ಅಂತ ಆಪ್ತರು ಹೇಳಲ್ಲ. ಕಾನೂನಿನಲ್ಲಿ ಏನು ಕ್ರಮ ಇದೆಯೋ ಅದರಂತೆ ಪೊಲೀಸರು ಕ್ರಮ ತಗೋತಾರೆ ಅಂತ ಹೇಳಿದ್ರು.
ಇನ್ನು ಬೈರತಿ ಬಸವರಾಜು (Byrati Basavaraj) ತಲೆಮರೆಸಿಕೊಂಡಿರುವ ವಿಚಾರ ಬಗ್ಗೆ ಮಾತಾಡಿ, ಅವರಾಗಿ ಅವರೇ ಬಂದು ಸರೆಂಡರ್ ಆದ್ರೆ ಒಳ್ಳೇದು. ಇಲ್ಲಾಂದ್ರೆ ಪೊಲೀಸರು ಅವರನ್ನು ಹುಡುಕ್ತಾರೆ ಅಂತ ಪರಮೇಶ್ವರ್ ತಿಳಿಸಿದ್ರು. ಇದನ್ನೂ ಓದಿ: ಇನ್ಮುಂದೆ ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ – ಕೇಂದ್ರದಿಂದ ಹೊಸ ಮಾರ್ಗಸೂಚಿ



