ರಾಂಚಿ: ಗಿಫ್ಟ್ ಕೊಡಿಸಿದ್ದ ಮೊಬೈಲ್ ವಾಪಸ್ ಕೊಡದ ಪ್ರೇಯಸಿಯ ಕತ್ತು ಸೀಳಿ ಕೊಂದಿರುವ ಘಟನೆ ಜಾರ್ಖಂಡ್ನ ಪಾಕುರ್ನಲ್ಲಿ ನಡೆದಿದೆ.
ಮೃತ ಯುವತಿ ಮಹೇಶ್ಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ನಿವಾಸಿಯಾಗಿದ್ದಾಳೆ. ಈ ಜೋಡಿಗಳ ಮಧ್ಯೆ ಮೊಬೈಲ್ ವಿಚಾರವಾಗಿ ನಡೆದ ಗಲಾಟೆ ಸಾವಿನಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ
ನಡೆದಿದ್ದೇನು?: ಉಪವಿಭಾಗದ ಪೊಲೀಸ್ ಅಧಿಕಾರಿ ಹೇಳುವ ಪ್ರಕಾರ, ಆರೋಪಿಯು ಆಕೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಸಂಬಂಧ ಹೊಂದಿದ್ದ ಎಂದು ಯುವತಿಯ ಚಿಕ್ಕಪ್ಪ ತಿಳಿಸಿದ್ದಾರೆ. ಅವನು ಆಗಾಗ ಯುವತಿಯ ಮನೆಗೆ ಬರುತ್ತಿದ್ದನು. ಅವಳ ಮನೆಯಲ್ಲೇ ಕೆಲವು ರಾತ್ರಿಗಳನ್ನು ಕಳೆದಿದ್ದ. ಆದರೆ ಆರೋಪಿಯ ಮದುವೆಯನ್ನು ಆತನ ಮನೆಯವರು ಬೇರೊಬ್ಬರೊಂದಿಗೆ ನಿಶ್ಚಯಿಸಿದ್ದರು. ಹೀಗಾಗಿ ಆತ ತಾನು ತನ್ನ ಹಳೇ ಪ್ರೇಯಸಿಗೆ ಉಡುಗೊರೆಯಾಗಿ ನೀಡಿದ್ದ ಸ್ಮಾರ್ಟ್ಫೋನ್ ವಾಪಸ್ ಪಡೆಯಲು ಬಯಸಿದ್ದ. ಆದರೆ ಆಕೆ ಅದನ್ನು ವಾಪಸ್ ಕೊಡಲು ಒಪ್ಪಿರಲಿಲ್ಲ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಧ್ಯೆ ವಿದ್ಯುತ್ ಶಾಕ್ – ಯೂನಿಟ್ಗೆ 35 ಪೈಸೆ ಹೆಚ್ಚಳ
ಈ ವಿಚಾರವಾಗಿ ಜಗಳವಾಡಿ ನಂತರ ಅವರಿಬ್ಬರೂ ಫುಟ್ಬಾಲ್ ಪಂದ್ಯ ವೀಕ್ಷಿಸಲು ತೆರಳಿದ್ದರು. ಮಫಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂಕರಬೋನಾದಿಂದ ಬಂಧಿತ ಆರೋಪಿ, ಪಂದ್ಯ ಮುಗಿಸಿ ಹಿಂತಿರುಗುವಾಗ ಆಕೆ ಮೊಬೈಲ್ ಹಿಂದಿರುಗಿಸಲು ನಿರಾಕರಿಸಿದ್ದಾಳೆ. ಚೂಪಾದ ವಸ್ತುವಿನಿಂದ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ಆಕೆಯನ್ನು ಕೊಲೆ ಮಾಡಿದ ನಂತರ ಆತ ಮೊಬೈಲ್ ಫೋನ್ನೊಂದಿಗೆ ಆ ಸ್ಥಳದಿಂದ ಪರಾರಿಯಾಗಿದ್ದಾನೆ. ಯುವತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸದರ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.