ಕೊಡಗು ಸಂತ್ರಸ್ತರಿಗೆ ನೆರವಾಗಲು 1 ಎಕ್ರೆ ಕಾಫಿ ತೋಟ ದಾನ ನೀಡಿದ್ರು ಜಿ.ಪಂ ಸದಸ್ಯ!

Public TV
1 Min Read
MDK MIDIDA HUDAYA

ಮಡಿಕೇರಿ: ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೀಕರ ಭೂಕುಸಿತಕ್ಕೆ ಸಿಲುಕಿದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಅವರೆಲ್ಲರಿಗೂ ಮಾದರಿ ಎಂಬಂತೆ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ತಮ್ಮ 1 ಎಕರೆ ಕಾಫಿ ತೋಟವನ್ನು ನಿರಾಶ್ರಿತರ ಮನೆಗಳ ನಿರ್ಮಾಣಕ್ಕೆ ದಾನವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಕೊಡಗಿನ ಕುಡಿಯರ ದಂಪತಿ ತಮ್ಮ 1 ಎಕರೆ ಜಾಗವನ್ನು ದಾನ ಮಾಡೋದಾಗಿ ಘೋಷಿಸಿದ್ದಾರೆ. ಇದೀಗ ಕೊಡಗು ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್ ಅವರು ತಮ್ಮ 5 ಎಕರೆ ಕಾಫಿ ತೋಟದಲ್ಲಿ 1 ಎಕರೆಯನ್ನು ನಿರಾಶ್ರಿತರ ಮನೆ ನಿರ್ಮಾಣಕ್ಕೆ ನೀಡಲು ಮುಂದಾಗಿದ್ದಾರೆ.

vlcsnap 2018 10 04 17h15m23s63

ಮಡಿಕೇರಿ ಮೈಸೂರು ಹೆದ್ದಾರಿ ಸಮೀಪದ ಸುಂಟಿಕೊಪ್ಪ ನಿವಾಸಿಯಾಗಿರೋ ಜಿಲ್ಲಾ ಪಂಚಾಯತ್ ಸದಸ್ಯ ಲತೀಫ್, ಸುಂಟಿಕೊಪ್ಪ ವ್ಯಾಪ್ತಿಯ ತಮ್ಮ 1 ಎಕರೆ ತೋಟವನ್ನು ದಾನವಾಗಿ ನೀಡುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಸುಂಟಿಕೊಪ್ಪ ಪಟ್ಟಣದಿಂದ 1 ಕಿಲೋ ಮೀಟರ್ ದೂರದಲ್ಲಿ ಈ ಜಾಗದಲ್ಲಿ ಲತೀಫ್ ಕಾಫಿ ಮತ್ತು ಕಾಳು ಮೆಣಸನ್ನು ಬೆಳೆಯುತ್ತಿದ್ದರು. ಈಗ ಈ ಜಾಗದಲ್ಲಿ 30 ಮನೆಗಳು ನಿರ್ಮಾಣವಾಗಲಿದೆ.

ಎಸ್‍ಎಸ್‍ಎಫ್ ಹಾಗೂ ಪಿಎಫ್‍ಐ ಸಂಘಟನೆ ವತಿಯಿಂದ ಈ ಜಾಗದಲ್ಲಿ ಮನೆ ನಿರ್ಮಿಸಿಕೊಡಲು ತೀರ್ಮಾನಿಸಲಾಗಿದೆ. ಹಿಂದೂ,ಮುಸ್ಲಿಂ ಹಾಗೂ ಕ್ರೈಸ್ತ ಸಮುದಾಯದ ನಿರಾಶ್ರಿತರನ್ನು ಗುರುತಿಸಿ ಮನೆ ನೀಡಲು ಮುಂದಾಗಿರೋ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

vlcsnap 2018 10 04 17h15m41s252

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *