ಹಣ್ಣಿನ ವಾಹನ ಪಲ್ಟಿ- ದಾಳಿಂಬೆ ದೋಚಿದ ಜನ

Public TV
1 Min Read
KWR

ಕಾರವಾರ: ದಾಳಿಂಬೆ ತುಂಬಿದ ವಾಹನ ಪಲ್ಟಿಯಾಗಿದ್ದು, ಸಾರ್ವಜನಿಕರು ಬಿದ್ದ ವಾಹನದಿಂದ ದಾಳಿಂಬೆ ದೋಚಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯ ಬಿಸಗೋಡು ಕ್ರಾಸ್ ಬಳಿ ನಡೆದಿದೆ.

ದಾಳಿಂಬೆ ತುಂಬಿದ ವಾಹನ ಮಹಾರಾಷ್ಟ್ರದ ಸಾಂಗ್ಲಿಯಿಂದ ಯಲ್ಲಾಪುರ ಮಾರ್ಗವಾಗಿ ಮಂಗಳೂರಿಗೆ ಹೋಗುತಿತ್ತು. ಆದರೆ ಬಿಸಗೋಡು ಕ್ರಾಸ್ ಬಳಿ ತಿರುವಿನಲ್ಲಿ ವಾಹನ ಪಲ್ಟಿಯಾದ ಪರಿಣಾಮ ವಾಹನದಲ್ಲಿ ತುಂಬಿದ್ದ ದಾಳಿಂಬೆ ರಸ್ತೆ ಮಧ್ಯದಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿವೆ. ಇದನ್ನು ನೋಡಿದ ಸ್ಥಳೀಯ ಜನರು ಹಣ್ಣುಗಳನ್ನು ಎತ್ತಿಕೊಂಡು ಹೋಗುವುದರಲ್ಲಿ ಬ್ಯುಸಿಯಾಗಿದ್ದರು.

ವಾಹನ ಪಲ್ಟಿಯಾಗಿದ್ದರಿಂದ ಚಾಲಕರಿಬ್ಬರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *