ಬಸ್‍ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ- ಆಟೋ ಚಾಲಕರಿಗೆ ಹೆಚ್ಚಾಯ್ತು ಆತಂಕ

Public TV
2 Min Read
AUTO DRIVERS

ತುಮಕೂರು: ಮಹಿಳೆಯರಿಗೆನೋ ರಾಜ್ಯ ಸರ್ಕಾರ ಉಚಿತ ಬಸ್ ಪ್ರಯಾಣ ಭಾಗ್ಯ ಕರುಣಿಸಿ “ಶಕ್ತಿ” ತುಂಬಿದೆ. ಆದರೆ ನಗರ ಪ್ರದೇಶದಲ್ಲಿ ಹೆಚ್ಚಾಗಿ ಮಹಿಳೆಯರ ಪ್ರಯಾಣವನ್ನೇ ನಂಬಿ ಬದುಕ್ತಿದ್ದ ಆಟೋ ಚಾಲಕರು (Auto Drivers) ನಿಶ್ಯಕ್ತರಾಗುವ ಆತಂಕದಲ್ಲಿದ್ದಾರೆ.

ಹೌದು. ಜೂನ್ 11ರಿಂದ ರಾಜ್ಯ ಎಲ್ಲಾ ಮಹಿಳೆಯರು ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು. ಜಿಲ್ಲೆಯಿಂದ ಜಿಲ್ಲೆಗೆ, ನಗರ ವ್ಯಾಪ್ತಿ ಎಲ್ಲಿಬೇಕಾದರೂ ಓಡಾಟ ಮಾಡಬಹುದು. ಈ ಉಚಿತ ಭಾಗ್ಯದಿಂದ ಮಹಿಳೆಯರಿಗೆ “ಶಕ್ತಿ” ತುಂಬಿದ್ದೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹೇಳುತ್ತಿದೆ. ಆದರೆ ಇದರ ಎಫೆಕ್ಟ್ ಒಂದೊಂದೇ ವಲಯದ ಮೇಲೆ ಬೀಳುವ ಲಕ್ಷಣ ಗೋಚರಿಸುತ್ತಿದೆ.

KSRTC

ನಗರ ಪ್ರದೇಶದಲ್ಲಿ ಮಹಿಳಾ ಪ್ರಯಾಣಿಕರನ್ನೇ ಹೆಚ್ಚು ಅವಲಂಬಿಸಿದ ಆಟೋ ಚಾಲಕರಲ್ಲಿ ಆತಂಕ ಶುರುವಾಗಿದೆ. ನಗರ ಪ್ರದೇಶದಲ್ಲಿನ ಮಹಿಳೆಯರು 5-8 ಕಿ.ಮಿ. ದೂರ ಆಟೋ ದಲ್ಲೇ ಪ್ರಯಾಣಿಸುತಿದ್ದರು. ತುಮಕೂರು ನಗರ ಅಂತರಸನಹಳ್ಳಿ ಮಾರುಕಟ್ಟೆ, ರೇಲ್ವೆ ನಿಲ್ದಾ, ಹೆಗ್ಗೆರೆ, ಸಿದ್ದಗಂಗಾ ಮಠ ಹೀಗೆ ಬಹುತೇಕ ಸಿಟಿ ವ್ಯಾಪ್ತಿಯಲ್ಲಿ ಆಟೋವನ್ನೇ ಅವಲಂಬಿಸಿದ್ರು. ಈ ಮಾರ್ಗವಾಗಿ ಸಂಚರಿಸುವ ಮಹಿಳಾ ಪ್ರಯಾಣಿಕರು (Free Bus Ticket For Women) ಆಟೋ ಚಾಲಕರ ಆದಾಯದ ಮೂಲವಾಗಿದ್ರು. ಇನ್ಮೇಲೆ ಈ ಆದಾಯದ ಮೂಲ ಕಳೆದುಕೊಳ್ಳುವ ಆತಂಕದಲ್ಲಿ ಆಟೋ ಚಾಲಕರಿದ್ದಾರೆ. ಇದನ್ನೂ ಓದಿ: ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಕಾರ್ಡ್‌ ಹೊಂದಿದ ಯಜಮಾನಿಗೆ ಮಾತ್ರ 2 ಸಾವಿರ ರೂ.

ನಗರದಿಂದ ಸಿದ್ದಗಂಗಾ ಮಠಕ್ಕೆ ಹೋಗಲು ಆಟೋ ಪ್ರಯಾಣಕ್ಕೆ 150 ದರ ನಿಗದಿ ಇದೆ. ಈಗ ಬಸ್ ಫ್ರಿ ಇರೊದ್ರಿಂದ ಎಲ್ಲರೂ ಬಸ್ಸಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ತುಮಕೂರು ನಗರದಿಂದ ಕ್ಯಾತಸಂದ್ರ, ಬಸ್ ನಿಲ್ದಾಣದಿಂದ ಹನುಮಂತಪುರ, ಹೀಗೆ ಬೇರೆ ಮಾರ್ಗದಲ್ಲಿ ಸೀಟ್ ಆಟೋಗಳು ಇದೆ. ಸೀಟ್ ಲೆಕ್ಕದಲ್ಲಿ 10-20 ರೂ ಕೊಟ್ಟು ಮಹಿಳೆಯರು ಪ್ರಯಾಣಿಸುತಿದ್ದರು. ಈಗ ಎಲ್ಲಾ ಮಾರ್ಗದಲ್ಲೂ ಬಸ್‍ಗಳ ಓಡಾಟ ಇದ್ದು ಮಹಿಳೆಯರು ಶುಲ್ಕ ರಹಿತವಾಗಿ ಪ್ರಯಾಣ ಮಾಡಲಿದ್ದಾರೆ. ಹಾಗಾಗಿ ಆಟೋದವರ ಆದಾಯ ತಗ್ಗಲಿದೆ. ಆಟೋ ಮಾರಿ ಕೂಲಿ ಕೆಲಸಕ್ಕೆ ಹೋಗಬೇಕಾಗುತ್ತದೆ ಅನ್ನುವ ಭಯ ಶುರುವಾಗಿದೆ.

ಸರ್ಕಾರ ಕೊಟ್ಟ ಐದು ಗ್ಯಾರಂಟಿಯಲ್ಲಿ ಉಚಿತ ಬಸ್ ಪ್ರಯಾಣ ಅತ್ಯಂತ ಅಪಾಯಕಾರಿ. ಸಿ.ಎಂ. ಸಿದ್ದರಾಮಯ್ಯ ಈ ಯೋಜನೆ ಕೈ ಬಿಟ್ಟರೆ ನಾವು ಬದುಕಬಹುದು. ಇಲ್ಲಾ ಅಂದರೆ ನಮ್ಮ ಬದುಕು ಮೂರಾಬಟ್ಟೆಯಾಗಲಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.

Share This Article