ಅಮರಾವತಿ: ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಎಲಮಂಚಿಲಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಚಿಂಟು ಚಿನಮಣಿ (45), ಅವರ ಪುತ್ರಿ ಜಾಹ್ನವಿ (18) ಎಂದು ಗುರುತಿಸಲಾಗಿದೆ. ಮಹಿಳೆ ಮತ್ತು ಆಕೆಯ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಗಳಿಗೆ ಗಂಭೀರವಾಗಿ ಸುಟ್ಟಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಕೆದಕಿದ್ದ ಎಂಇಎಸ್ ಮುಖಂಡನ ವಿರುದ್ಧ FIR ದಾಖಲು
ಕುಟುಂಬದಲ್ಲಿ ಆಸ್ತಿವಿವಾದ ಏರ್ಪಟ್ಟಿದ್ದು, ಇದು ತಾರಕಕ್ಕೇರಿದ್ದರಿಂದ ಆಸ್ಪತ್ರೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪತಿ ಕಣ್ಣೆದುರೇ ಪ್ರಿಯಕರನೊಂದಿಗೆ ಪತ್ನಿ ಸೆಕ್ಸ್ – ಸ್ಕ್ರೂಡ್ರೈವರ್ನಿಂದ ಇಬ್ಬರನ್ನು ಇರಿದು ಕೊಂದ
ಚಿನಮಣಿ ಅವರ ಅತ್ತೆ ಆಸ್ತಿಯಲ್ಲಿ ತನ್ನ ಪಾಲು ನೀಡಲು ನಿರಾಕರಿಸಿದ್ದಾರೆ. ಆಕೆ, ಆಸ್ತಿಯ ಬಹುಪಾಲನ್ನು ತನ್ನ ಮಗಳಿಗೆ ನೀಡಿ, ಉಳಿದ ಪಾಲನ್ನು ಮಗನಿಗೆ ನಿಡಲು ಬಯಸಿದ್ದಳು. ಇದರಿಂದಾಗಿ ಅತೃಪ್ತಿಗೊಂಡ ಚಿನಮಣಿ ಆಹತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಎಂದು ಜಾಲ್ಮುರು ಎಸ್ಐ ಪಾರಿ ನಾಯ್ಡು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.