ಚಿಕ್ಕಮಗಳೂರು: ಕಳೆದೊಂದು ವಾರದಿಂದ ರಾಜ್ಯಾದ್ಯಂತ ಅಲ್ಲಲ್ಲೇ ಕಾಡಾನೆಗಳ ಹಿಂಡು ನಿರಂತರ ದಾಳಿ ಮಾಡ್ತಿವೆ. ಆದರೆ ಕಾಫಿನಾಡಿನಲ್ಲಿರುವ ಇಂತಹ ಗಜರಾಜ ಇದ್ದರೆ ಅಧಿಕಾರಿಗಳಿಗೆ ತಲೆನೋವಿಲ್ಲ, ಸ್ಥಳಿಯರಿಗೆ ಆತಂಕವಿಲ್ಲ, ಬೆಳೆಗಳು ಹಾಳಾಗೋದಿಲ್ಲ. ನೋಡೋಕೆ ದೈತ್ಯಾಕಾರದ ಈ ಕಾಡಾನೆ ಮಗುವಿನಂತೆ ವರ್ತಿಸುತ್ತಿದ್ದು ಅಧಿಕಾರಿಗಳ ದೃಷ್ಠಿಯಲ್ಲಿ ಗುಡ್ ಎಲಿಫೆಂಟ್ ಆಗಿದೆ.
ಚಿಕ್ಕಮಗಳೂರಿನ ಮುತ್ತೋಡಿ ದಟ್ಟಾರಣ್ಯದಲ್ಲಿ ವಾಸ ಮಾಡುತ್ತಿರುವ ಈ ಕಾಡಾಣೆ ತಾನಾಯ್ತ, ತನ್ನ ಆಹಾರವಾಯ್ತೆಂದು ಬದುಕುತ್ತಿದೆ. ಈ ಆನೆಯ ಪಕ್ಕದಲ್ಲೇ ಜನ ಹಾಗೂ ವಾಹನಗಳು ಓಡಾಡಿದರು ಇದು ಏನೂ ಮಾಡುವುದಿಲ್ಲವಂತೆ.
ಮುತ್ತೋಡಿಯ ಅರಣ್ಯದ ಮಧ್ಯ ಭಾಗದಲ್ಲಿರೋ ಕಳ್ಳ ಭೇಟಿ ನಿಗ್ರಹ ದಳದ ವಸತಿ ಹಾಗೂ 1924ರಲ್ಲಿ ಬ್ರಿಟಿಷರು ನಿರ್ಮಿಸಿದ ಅತಿಥಿ ಗೃಹದ ಪಕ್ಕದಲ್ಲೇ ನಿಂತು ಗಂಟೆಗಟ್ಟಲೇ ಪೋಸ್ ನೀಡಿ ಶಾಂತಿಯಿಂದ ವರ್ತಿಸುತ್ತಿರೋದು ಆಶ್ಚರ್ಯ ತಂದಿದೆ.
ಕಾಡಾನೆಗಳು ಅಪಾಯಕಾರಿ ಎಂಬ ಮಾತಿಗೆ ವಿರುದ್ಧವಾಗಿರುವ ಈ ಗಜರಾಜ ಮಗುವಿನಂತೆ ಬಂದು ಹೊಟ್ಟೆ ತುಂಬಿದ ಮೇಲೆ ಸೈಲೆಂಟಾಗಿ ವಾಪಸ್ಸಾಗುತ್ತಿದ್ದು, ಅಧಿಕಾರಿಗಳಲ್ಲೇ ಆಶ್ಚರ್ಯ ತಂದಿದೆ.
https://www.youtube.com/watch?v=7BLPaWBAVlE&feature=youtu.be
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv