ಕಲಬುರಗಿ: ಕ್ಷುಲ್ಲಕ ಕಾರಣಕ್ಕೆ ಓರಗಿತ್ತಿಯರು ಪರಸ್ಪರ ಕಿತ್ತಾಡಿಕೊಂಡು ಮಕ್ಕಳೊಂದಿಗೆ ಇಬ್ಬರು ಬಾವಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆ ಕಮಲಾಪುರ ತಾಲೂಕಿನ ದೇವಲುನಾಯಕ್ ತಾಂಡಾದಲ್ಲಿ ನಡೆದಿದೆ. ಘಟನೆಯಲ್ಲಿ ಗರ್ಭಿಣಿ (Pregnant) ಮಹಿಳೆ ಮೃತಪಟ್ಟಿದ್ದು, ಉಳಿದವರನ್ನು ರಕ್ಷಣೆ ಮಾಡಲಾಗಿದೆ.
ರೇಷ್ಮಾ ಚಹ್ವಾಣ್ (26) ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಗರ್ಭಿಣಿ ಮಹಿಳೆ ಹಾಗೂ ಕಲ್ಪನಾ ಚಹ್ವಾಣ್ ಹಾಗೂ ಈಕೆಯ ಇಬ್ಬರು ಮಕ್ಕಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮೃತ ರೇಷ್ಮಾ ಹಾಗೂ ಕಲ್ಪನಾ ಓರಗಿತ್ತಿಯರು (ಅಣ್ಣ ತಮ್ಮಂದಿಯರ ಪತ್ನಿಯರು). ರೇಷ್ಮಾ ಪತಿ ಮಾರುತಿ ಹಾಗೂ ಕಲ್ಪನಾ ಪತಿ ಸಂತೋಷ್ ಇಬ್ಬರು ಸಹೋದರರು ಕುವೈತ್ನಲ್ಲಿ ಕೆಲಸ ಮಾಡ್ತಿದ್ದಾರೆ. ಸಹೋದರರ ಇಬ್ಬರು ಪತ್ನಿಯರು ಕಮಲಾಪುರದ ದೇವಲುನಾಯಕ್ ತಾಂಡಾದಲ್ಲಿ ಪತಿಯ ಕುಟುಂಬದವರೊಂದಿಗೆ ವಾಸ ಮಾಡುತ್ತಿದ್ದಾರೆ. ಆದರೆ ಇಬ್ಬರು ಸಹೋದರರ ಪತ್ನಿಯರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಕಳೆದ ಕೆಲ ದಿನಗಳಿಂದ ಗಲಾಟೆ ನಡೆದಿದೆ. ಇದನ್ನೂ ಓದಿ: ಈ ಬಾರಿ ಸಂಪುಟ ವಿಸ್ತರಣೆಯೋ, ಪುನರ್ ರಚನೆಯೋ ಕಾದು ನೋಡಿ: ಬೊಮ್ಮಾಯಿ
ನಿನ್ನೆ ಕೂಡಾ ಇಬ್ಬರ ನಡುವೆ ಜಗಳ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ದೇವಲುನಾಯಕ್ ತಾಂಡಾ ಹೊರವಲಯದ ಬಾವಿಗೆ ಜಿಗಿದು ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೇಷ್ಮಾ ಆತ್ಮಹತ್ಯೆಯ ಬೆನ್ನಲ್ಲೆ ಅದೇ ಬಾವಿಗೆ ಕಲ್ಪನಾ ತನ್ನ ಇಬ್ಬರು ಮಕ್ಕಳೊಂದಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಲ್ಪನಾ ಮಕ್ಕಳೊಂದಿಗೆ ಬಾವಿಗೆ ಹಾರಿದ್ದನ್ನ ಗಮನಿಸಿದ ಪಕ್ಕದ ಹೊಲದವರು ತಕ್ಷಣ ಬಾವಿಗೆ ಜಿಗಿದು ತಾಯಿ ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿದ್ದಾರೆ. ಕಮಲಾಪುರ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ಮೂಲಕ ರಾಜ್ಯದಲ್ಲಿ 150 ಕ್ಷೇತ್ರ ಗೆಲ್ಲುತ್ತೇವೆ: ಡಿಕೆಶಿ