ಬೆಂಗಳೂರು: ಇತ್ತೀಚೆಗಷ್ಟೇ ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ `ಇಂದಿರಾ ಕ್ಯಾಂಟೀನ್’ ಯೋಜನೆಗೆ ಚಾಲನೆ ನೀಡಿದ್ದು, ಎರಡೇ ದಿನದಲ್ಲಿ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ನಲ್ಲಿ ಸರ್ಕಾರದ ಬಣ್ಣ ಬಯಲಾಗಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ಜನ ತಿನ್ನುವ ಅನ್ನ, ಸಾಂಬಾರು, ಬೆಳಗ್ಗಿನ ಪಲಾವ್, ಖಾರಬಾತ್ ಇವೆಲ್ಲವನ್ನೂ ಮದುವೆ ಮನೆಯಲ್ಲಿ ತಯಾರಿಸಲಾಗುತ್ತಿದೆ ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಇಂದಿರಾ ಕ್ಯಾಂಟೀನ್ ಊಟ ಅರಮನೆ ಮೈದಾನದಲ್ಲಿ ತಯಾರಾಗುತ್ತಿದೆ. ಯಾವುದೇ ಗುಣಮಟ್ಟ ಪರೀಕ್ಷೆ ಮಾಡದೆ ಬಿಬಿಎಂಪಿ ಅಡುಗೆ ಮಾಡಿಸುತ್ತಿದೆ.
ಅರಮನೆ ಮೈದಾನದ ವೈಟ್ ಪೆಟಲ್ ಅಡುಗೆ ಮನೆಯಲ್ಲಿ ಊಟ ತಯಾರಿ ಮಾಡುತ್ತಿರುವ ಕುರಿತು ರಿಯಾಲಿಟಿ ಚೆಕ್ ಮಾಡೋಕೆ ಹೋದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಮಧು ಗೌಡ ಎಂಬವರು ವರದಿಗಾರರ ಮೊಬೈಲ್ ಕಸಿದುಕೊಂಡು ಗೂಂಡಾ ವರ್ತನೆ ತೋರಿದ್ದಾರೆ. ಅಲ್ಲದೇ ಟೆಂಡರ್ ಪಡೆಯದೇ ಅಡುಗೆ ಬೇಯಿಸುತ್ತಿರೋ ಸೋಮಣ್ಣ ಅಂಡ್ ಮಧುಗೌಡಾ ಟೀಮ್ ದೌರ್ಜನ್ಯವೆಸಗಿದ್ದಾರೆ.
ಬಿಬಿಎಂಪಿ ಕಮೀಷನರ್ ಮನವಿ ಮೇರೆಗೆ ಶಾಮ್ ಅನ್ನೋರ ಆರ್ಡರ್ ಮೇರೆಗೆ ಈ ಊಟ ತಯಾರಾಗ್ತಿದೆ. ಯಾವ ಕ್ಷೇತ್ರದಲ್ಲೂ ಇಂದಿರಾ ಕಿಚನ್ಸ್ ಇನ್ನೂ ರೆಡಿಯಾಗಿಲ್ಲ.
ಪರಮೇಶ್ವರ್ ಕೈಯಿಂದ 10ರೂ. ತಗೊಂಡು ಅಜ್ಜಿ ಕ್ಯಾಂಟೀನ್ ನಲ್ಲಿ ಊಟ ಸವಿದ ರಾಹುಲ್! https://t.co/7y3jkCuRh5#RahulGandhi #Siddaramaiah #IndiraCanteen pic.twitter.com/5MUd9PpLJD
— PublicTV (@publictvnews) August 16, 2017
ಮನ್ಕೀ ಬಾತ್ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್ನಿಂದ ತುಂಬುತ್ತೆ: ಸಿಎಂ https://t.co/g1CZfswCpf#Bengaluru #IndiraCanteen pic.twitter.com/XK54hS0Lbr
— PublicTV (@publictvnews) August 16, 2017