ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

Public TV
1 Min Read
First special train leaves bengaluru for Ayodhya Dham with over 1450 devotees 2

ಬೆಂಗಳೂರು: ಅಯೋಧ್ಯೆ ದರ್ಶನಕ್ಕೆ (Ayodhya Darshan) ಬೆಂಗಳೂರಿನಿಂದ (Bengaluru) ವಿಶೇಷ ರೈಲು ಹೊರಟಿದೆ. ಅಯೋಧ್ಯೆ ಶ್ರೀರಾಮ ದರ್ಶ‌ನ ಅಭಿಯಾನದಡಿ ಬಿಜೆಪಿ ಕಾರ್ಯಕರ್ತರು ದರ್ಶನಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 5 ವರ್ಷ: 2019ರ ಫೆ.14 ರಂದು ನಡೆದಿದ್ದು ಏನು?

First special train leaves bengaluru for Ayodhya Dham with over 1450 devotees 1

ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಸಂಸದ ಪಿಸಿ ಮೋಹನ್‌ (PC Mohan) ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ 1450 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

ಇಂದು ಬೆಳಗ್ಗಿನ ಜಾವ 3:40ಕ್ಕೆ ಹೊರಟ ರೈಲು ಫೆ.16ರ ಮಧ್ಯಾಹ್ನ ಅಯೋಧ್ಯೆ ಧಾಮವನ್ನು (Ayodhya Dham) ತಲುಪಲಿದೆ. ಫೆ. 17ರ ಬೆಳಗ್ಗೆ ರೈಲು ಅಯೋಧ್ಯೆ ಧಾಮದಿಂದ ಹೊರಟು ಫೆ.20ರ ಬೆಳಗ್ಗೆ ಬೆಂಗಳೂರು ತಲುಪಲಿದೆ.

Share This Article