ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ- ಅಮ್ಮನ ಶವದ ಮುಂದೆ ಪುಟ್ಟ ಮಕ್ಕಳ ಗೋಳಾಟ

Public TV
2 Min Read
RAMAMURTHYNAGAR 3

ಬೆಂಗಳೂರು: ಅದು ರಾಜಸ್ಥಾನ (Rajasthan) ಮೂಲದ ಪುಟ್ಟ ಕುಟುಂಬ. ಬೆಂಗಳೂರಿನಲ್ಲಿ ನೆಲೆಸಿದ್ದ ಆ ಕುಟುಂಬದಲ್ಲಿ ಪತಿ, ಪತ್ನಿ, ಇಬ್ಬರು ಮುದ್ದಾದ ಮಕ್ಕಳು. ಖುಷಿಗೇನು ಕಡಿಮೆಯಿಲ್ಲದ ಟೈಂನಲ್ಲಿ ಪತಿ ಮಾಡಿದ ಅದೊಂದು ನಂಬಿಕೆ ದ್ರೋಹದಿಂದ ಪತ್ನಿ ನೇಣಿಗೆ ಶರಣಾಗಿದ್ರೆ, ಇಬ್ಬರು ಮಕ್ಕಳು ಅನಾಥವಾಗಿವೆ.

RAMAMURTHYNAGAR 2

ರಾಜಸ್ಥಾನ ಮೂಲದ ನರೇಂದ್ರಸಿಂಗ್ ಮತ್ತು ಚಂದಾ ಪುರೋಹಿತ್ 10 ವರ್ಷಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದರು. ಸ್ಟೀಟ್ ಅಂಗಡಿ ತೆರೆದು ರಾಮಮೂರ್ತಿನಗರದಲ್ಲಿ ಜೀವನ ಕಟ್ಟಿಕೊಂಡಿದ್ರು. ದಂಪತಿಗೆ ಮುದ್ದಾದ ಇಬ್ಬರು ಗಂಡುಮಕ್ಕಳು ಕೂಡ ಇದ್ದಾರೆ. ಪ್ರೀತಿಯಿಂದ ನೋಡ್ಕೊಳ್ಳೋ ಗಂಡ, ಸದಾ ಖುಷಿ ಹಂಚುವ ಮಕ್ಕಳು. ಹೀಗೆ ಖುಷಿಯಾಗಿದ್ದ ವೇಳೆ ಪತಿ ನರೇಂದ್ರಸಿಂಗ್‍ಗೆ ಅವಳೊಬ್ಬಳ ಪರಿಚಯವಾಗಿ, ಆ ಪರಿಚಯ ಅನೈತಿಕ ಸಂಬಂಧವಾಗಿ ಬದಲಾಗಿತ್ತು. ಗಂಡನ ಅಕ್ರಮ ಸಂಬಂಧ ಹೆಂಡತಿ ಚಂದಾಗೆ ಗೊತ್ತಾಗೋಕೆ ಹೆಚ್ಚು ದಿನ ಹಿಡಿಯಲಿಲ್ಲ. ಇದೇ ವಿಚಾರಕ್ಕೆ ಆಗಾಗ ಮನೆಯಲ್ಲಿ ಗಲಾಟೆಯಾಗ್ತಿತ್ತು. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

RAMAMURTHYNAGAR 4

ಮೊದ ಮೊದಲು, ಆ ಯುವತಿಯ ಜೊತೆಗೆ ಓಡಾಡುತ್ತಿದ್ದ ಗಂಡ ನರೇಂದ್ರಸಿಂಗ್, ನಂತರದ ದಿನಗಳಲ್ಲಿ ಹೆಂಡತಿ ಮಕ್ಕಳನ್ನು ಬಿಟ್ಟು ದೂರದ ಊರುಗಳಿಗೆ ಟ್ರಿಪ್ (Trip) ಹೋಗೋ ಮಟ್ಟಕ್ಕೆ ಬಂದಿದ್ದ. ಈ ಸಂಬಂಧ ಸಾಕಷ್ಟು ಬಾರಿ ರಾಜಿ ಪಂಚಾಯ್ತಿ ಮಾಡಿದ್ರು. ಗಂಡ ಮಾತ್ರ ನಾನು ಇರೋದೇ ಹೀಗೆ ಅನ್ನೋ ರೀತಿ ವರ್ತಿಸಿದ್ದ. ಇದರಿಂದ ಬೇಸತ್ತ ಪತ್ನಿ ಚಂದಾಪುರೋಹಿತ್, ಕಳೆದ ಶನಿವಾರ ಮನೆಯಲ್ಲೇ ನೇಣಿಗೆ ಶರಣಾಗಿದ್ಳು. ಎಂದಿನಂತೆ ಬೆಳಗ್ಗೆ ಎದ್ದ ಮಕ್ಕಳು ಅಮ್ಮನ ಹುಡುಕಾಟ ನಡೆಸಿದರು. ಆದರೆ ಸತ್ತು ಮಲಗಿದ್ದ ಅಮ್ಮನನ್ನು ನೋಡಿದ ಮಕ್ಕಳು, ಸಾವನ್ನಪ್ಪಿದ್ದಾಳೆ ಅನ್ನೋ ಸಣ್ಣ ಅರಿವಿಲ್ಲದಂತೆ ಅಮ್ಮನ ಎದ್ದೇಳಿಸುವ ಪ್ರಯತ್ನದಲ್ಲಿ ಗೋಳಾಡುತ್ತಿದ್ದು, ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡುವಂತೆ ಮಾಡಿದವು.

RAMAMURTHYNAGAR 5

ವಿಷಯ ತಿಳಿದು ಸ್ಥಳಕ್ಕೆ ಬಂದ ರಾಮಮೂರ್ತಿನಗರ ಪೊಲೀಸರು, ಪತಿ ನರೇಂದ್ರಸಿಂಗ್‍ನನ್ನು ಬಂಧಿಸಿದ್ದಾರೆ. ಮೃತ ಚಂದಾಪೋರೋಹಿತ್ ಪೋಷಕರು (Parents) ಇದು ಆತ್ಮಹತ್ಯೆ ಅಲ್ಲ, ಕೊಲೆ ಅಂತಾ ಆರೋಪಿಸಿದ್ದಾರೆ. ಅಪ್ಪ ಜೈಲು ಸೇರಿದ್ರೆ, ಅಮ್ಮ ಬಾರದ ಲೋಕಕ್ಕೆ ಪಯಣ ಬೆಳಸಿದ್ದಾಳೆ. ಈ ಮಧ್ಯೆ ಪುಟ್ಟ ಮಕ್ಕಳು ಅನಾಥವಾಗಿದ್ದು ಮಾತ್ರ ದುರಂತ. ಇದನ್ನೂ ಓದಿ: ಪಾಕ್ ಪ್ರವಾಹ ಸಂತ್ರಸ್ತರನ್ನು ಹೊತ್ತೊಯ್ಯುತ್ತಿದ್ದ ಬಸ್‌ಗೆ ಬೆಂಕಿ- 18 ಮಂದಿ ದುರ್ಮರಣ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *