ಚಿಕ್ಕಬಳ್ಳಾಪುರ: ಸರ್ಕಾರ ನೀಡುವ ಉಚಿತ ಜಮೀನಿಗಾಗಿ ಹೆತ್ತ ಮಗಳನ್ನೇ ಪತ್ನಿಯೆಂದು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತಂದೆಯೊಬ್ಬ ಜಮೀನು ಮಂಜೂರು ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಅಬ್ಬರವಾರಿಪಲ್ಲಿ ಗ್ರಾಮದಲ್ಲಿ
ಅಬ್ಬರವಾರಿಪಲ್ಲಿ ಗ್ರಾಮದ ನಿವಾಸಿ ವೆಂಕಟರವಣಪ್ಪ, ಪರಿಶಿಷ್ಟ ಕಲ್ಯಾಣ ವರ್ಗಗಳ ಕಲ್ಯಾಣ ಇಲಾಖೆಯಿಂದ ಭೂ ರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಮಾತ್ರವೇ ನೀಡುವ ಭೂ ಒಡೆತನ ಯೋಜನೆ ಮುಖಾಂತರ ತನ್ನ ಹೆತ್ತ ಮಗಳಾದ ರಂಜಿತಾ (ಹೆಸರು ಬದಲಾಯಿಸಿದೆ)ಯನ್ನೇ ಹೆಂಡತಿ ಎಂದು ದಾಖಲೆಗಳನ್ನು ಸೃಷ್ಟಿಸಿ 1 ಎಕರೆ ಜಮೀನನ್ನು ಮಂಜೂರು ಮಾಡಿಸಿಕೊಂಡಿದ್ದಾನೆ.
5 ವರ್ಷಗಳ ಹಿಂದೆಯೇ ಮಗಳು ರಂಜಿತಾ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಆಗ ತಂದೆ ನಕಲಿ ದಾಖಲೆಗಳನ್ನ ಕೊಟ್ಟು, ಮಗಳಿಗೆ ನೀಟಾಗಿ ಸೀರೆ ಉಡಿಸಿ, ಕತ್ತಿಗೆ ಕಪ್ಪು ಮಣಿ ಸರದ ತಾಳಿ ಹಾಕಿಸಿ ವೆಂಕಟರವಣಪ್ಪ ತನ್ನ ಗಂಡ ಅಂತ ಹೇಳಿಸಿ ಸರ್ಕಾರದಿಂದ ಮಂಜೂರಾದ ಭೂಮಿಯನ್ನ ನೊಂದಣಿ ಮಾಡಿಸಿಕೊಂಡಿದ್ದಾನೆ.
ಒಂದು ಕುಟುಂಬಕ್ಕೆ ಕೇವಲ ಒಬ್ಬ ಫಲಾನುಭವಿಗೆ ಮಾತ್ರ ಒಂದು ಬಾರಿ ಉಚಿತ ಜಮೀನು ಪಡೆದುಕೊಳ್ಳಲು ಅವಕಾಶವಿದೆ. ಆದರೆ ವೆಂಕಟರವಣಪ್ಪ ತನ್ನ ತಾಯಿ-ತಂದೆ ಹೆಸರಲ್ಲಿ ಒಂದು ಎಕರೆ, ತನ್ನ ಸೊಸೆ-ಮಗನ ಹೆಸರಲ್ಲಿ ಒಂದು ಎಕರೆ, ತನ್ನ ಹೆಂಡತಿ ಹೆಸರಲ್ಲಿ ಒಂದು ಎಕರೆ ಸೇರಿದಂತೆ ತನ್ನ ಮಗಳನ್ನ ತನ್ನ ಹೆಂಡತಿ ಅಂತ ಹೇಳಿ ಒಟ್ಟು 4 ಬಾರಿ 4 ಎಕರೆ ಜಮೀನು ಮಂಜೂರು ಮಾಡಿಸಿಕೊಂಡಿದ್ದಾನೆ ಎಂದು ವೆಂಕಟರವಣಪ್ಪ ಅಳಿಯ ರವಣಪ್ಪ ತಿಳಿಸಿದ್ದಾರೆ.
ಮಗಳು ರಂಜಿತಾಗೆ ವೆಂಕಟರವಣಪ್ಪನ ಜೊತೆ ವಿವಾಹವಾದ ಕೆಲ ವರ್ಷಗಳ ನಂತರ ಅಳಿಯ ರವಣಪ್ಪನಿಗೆ ಈ ರೀತಿ ವಂಚನೆ ಮಾಡಿರುವ ವಿಷಯ ತಿಳಿದಿದೆ. ಹೀಗಾಗಿ ತನ್ನ ಮಗಳನ್ನೇ ಹೆಂಡತಿ ಅಂತ ಸರ್ಕಾರಕ್ಕೆ ಮೋಸ ಮಾಡಿರುವ ಮಾವನ ವಿರುದ್ಧ ತಿರುಗಿಬಿದ್ದಿರುವ ಅಳಿಯ ರವಣಪ್ಪ ಈಗ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv