ಅಣ್ಣಾ ನೀವು ಎವರ್‌ಗ್ರೀನ್‌ ಸಿಎಂ ಎಂದಿದ್ದಕ್ಕೆ ಏ ಹೋಗೋ ಮೂದೇವಿ ಎಂದ ಸಿದ್ದು

Public TV
1 Min Read
mys cm collage

ಮೈಸೂರು: ನೀವು ಎವರ್ ಗ್ರೀನ್ ಸಿಎಂ ಎಂದ ಅಭಿಮಾನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಏ ಹೋಗೋ ಮೂದೇವಿ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಇಂದು ಕಾರ್ಯಕರ್ತರ ಸಭೆಗಾಗಿ ಮೈಸೂರಿನ ಜೆ.ಪಿ ಫಾರ್ಚುನ್ ಹೋಟೆಲಿಗೆ ಆಗಮಿಸಿದ್ದರು. ಸಿದ್ದರಾಮಯ್ಯ ಕಾರಿನಿಂದ ಇಳಿಯುತ್ತಿದ್ದಂತೆ ಅಭಿಮಾನಿ ಅವರನ್ನು ನೋಡಿ, ‘ಅಣ್ಣ ನೀವು ಎವರ್‌ಗ್ರೀನ್‌ ಸಿಎಂ’ ಎಂದು ಹೇಳಿದ್ದಾರೆ.

siddu

ಅಭಿಮಾನಿ ಆ ರೀತಿ ಹೇಳುತ್ತಿದ್ದಂತೆ ಸಿದ್ದರಾಮಯ್ಯ ಏ ಹೋಗೋ ಮೂದೇವಿ ಎಂದು ಅಭಿಮಾನಿಯ ಕೆನ್ನೆಗೆ ಪ್ರೀತಿಯಿಂದ ತಟ್ಟಿದ್ದಾರೆ. ಸಿದ್ದರಾಮಯ್ಯ ಹೋಟೆಲಿಗೆ ಬರುವಾಗ ಗೋಲ್ಡನ್ ಕಲರ್ ಗ್ಲಾಸ್ ಹಾಕಿಕೊಂಡು ಸ್ಟೈಲಿಶ್ ಆಗಿ ಬಂದಿದ್ದರು.

ಸಿದ್ದರಾಮಯ್ಯ ಅವರನ್ನು ಕಂಡ ಅಭಿಮಾನಿ ಪುಳಕಿತನಾಗಿ ಎವರ್ ಗ್ರೀನ್ ಸಿಎಂ ಎಂದು ಹೇಳಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *