ಚಾಮರಾಜನಗರ: ಭೂ ಮಂಡಲದಲ್ಲಿ ಸೂರ್ಯ ಚಂದ್ರ ಇರುವರೆಗೂ ಗುಂಡ್ಲುಪೇಟೆಯಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಸಚಿವೆ ಗೀತಾ ಮಹದೇವಪ್ರಸಾದ್ ಹೇಳಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಕಗ್ಗಳ ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದ ವೇಳೆ ಮಾತನಾಡಿದ ಗೀತಾ ಮಹದೇವ ಪ್ರಸಾದ್, ನಮ್ಮ ಕುಟುಂಬ ಇಲ್ಲಿಯವರೆಗೆ 10 ಚುನಾವಣೆ ಎದುರಿಸಿದೆ. ಆರಂಭದಲ್ಲಿ ನಾಲ್ಕರಲ್ಲಿ ಸೋತ್ರು, ಮುಂದಿನ 6 ಚುನಾವಣೆಗಳಲ್ಲಿ ಸತತ ಗೆಲುವು ಕಂಡಿದೆ. ನಾನು ನೋಡುತ್ತಿರೋದು ಏಳನೇ ಚುನಾವಣೆ, ಕ್ಷೇತ್ರದ ಜನರು ನಮ್ಮ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ನಮಗೆ ಮತ ಹಾಕಿ ಗೆಲ್ಲಿಸುತ್ತಿದ್ದಾರೆ ಅಂತಾ ಅಂದ್ರು.
ಮಹದೇವ್ ಪ್ರಸಾದ್ ಅವರ ಅಭಿವೃದ್ಧಿ ಕಾರ್ಯಗಳಿಂದ ನಮಗೆ ಗೆಲವು ನಿಶ್ಚಿತ. ನಮ್ಮ ಎದುರು ಯಾರೇ ಸ್ಪರ್ಧಿಸಿದರೂ ಗೆಲುವಿನ ಮಾಲೆ ನಮಗೆ ಲಭಿಸಲಿದೆ. ಇಲ್ಲಿಯ ಜನರು ಕುಟುಂಬ ರಾಜಕಾರಣ ಬೇಕು ಅಂತಾ ನಮಗೆ ಮತ ನೀಡುತ್ತಿದ್ದಾರೆ. ಮಹದೇವ ಪ್ರಸಾದರ ಬಳಿಕ ನಾನು ಹೀಗೆ ನಮ್ಮ ಪರಿವಾರ ಸಮಾಜಸೇವೆಯಲ್ಲಿ ತೊಡಗಿಕೊಳ್ಳಲಿದೆ. ಗುಂಡ್ಲುಪೇಟೆ ಕ್ಷೇತ್ರದಲ್ಲಿ ಕುಟುಂಬ ರಾಜಕಾರಣ ಮುಂದುವರೆಯಲಿದೆ ಅಂತಾ ಭವಿಷ್ಯ ನುಡಿದ್ರು.
1994, 1999, 2004, 2008, 2013ರಲ್ಲಿ ಮಹಾದೇವ ಪ್ರಸಾದ್ ಈ ಕ್ಷೇತ್ರದಿಂದ ಆಯ್ಕೆ ಆಗಿದ್ದರು. ಪತಿ ಅಕಾಲಿಕ ನಿಧನನದಿಂದಾಗಿ 2017ರಲ್ಲಿ ತೆರವಾದ ಕ್ಷೇತ್ರಕ್ಕೆ ್ಲ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಗೀತಾ ಮಹಾದೇವ ಪ್ರಸಾದ್ ಸ್ಪರ್ಧಿಸಿ ಗೆದ್ದಿದ್ದರು. ಗೀತಾ ಮಹಾದೇವ ಪ್ರಸಾದ್ ಅವರಿಗೆ 90,258 ಮತಗಳು ಬಿದ್ದಿದ್ದರೆ, ಬಿಜೆಪಿಯ ನಿರಂಜನ್ ಕುಮಾರ್ ಅವರಿಗೆ 79,381 ಮತಗಳು ಬಿದ್ದಿತ್ತು.