ಕಸ್ಟಡಿಯಲ್ಲಿ ಕರಗಿದ ಕನಕಪುರ ಬಂಡೆ- ಕಣ್ಣೀರಿಡುತ್ತಾ ಫ್ಯಾಮಿಲಿಯೆದ್ರು ಊಟ ಮಾಡಿದ ಡಿಕೆ

Public TV
2 Min Read
dkshi

ನವದೆಹಲಿ: ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತು ಇಡಿ ಕಸ್ಟಡಿಯಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ಭಾನುವಾರ ರಾತ್ರಿ ಕುಟುಂಬ ಭೇಟಿ ಮಾಡಿದೆ. ಡಿ.ಕೆ ಶಿವಕುಮಾರ್ ಪತ್ನಿ ಉಷಾ, ಪುತ್ರಿ ಐಶ್ವರ್ಯ ನಾದಿನಿ ಸುಮಾ, ಸಹೋದರ ಡಿ.ಕೆ ಸುರೇಶ್ ಸಮ್ಮುಖದಲ್ಲಿ ಭೇಟಿಯಾದರು. ದೆಹಲಿಯ ಲೋಕನಾಯಕ್ ಭವನದಲ್ಲಿರುವ ಇಡಿ ಕಚೇರಿಯಲ್ಲಿ ಸಂಜೆ ಆರು ಗಂಟೆಗೆ ಭೇಟಿಯಾಗಿ ಸುಮಾರು ಒಂದೂವರೆ ಗಂಟೆ ಕೌಶಲ್ಯ ವಿಚಾರಿಸಿದರು.

ಇಡಿ ಕಚೇರಿಯಲ್ಲಿ ಕುಳಿತಿದ್ದ ತಂದೆಯನ್ನು ನೋಡುತ್ತಿದ್ದಂತೆಯೇ ಪುತ್ರಿ ಐಶ್ವರ್ಯ ಅಪ್ಪಿ ಕಣ್ಣೀರಿಟ್ಟಿದ್ದಾರೆ. ಪತಿಯ ಪರಿಸ್ಥಿತಿ ಕಂಡು ಪತ್ನಿ ಉಷಾ ಭಾವುಕರಾಗಿದ್ದು, ಕುಟುಂಬಸ್ಥರ ಕಣ್ಣೀರ ಕಟ್ಟೆ ಒಡೆದು ಹೋಗಿತ್ತು. ರಾಜನಂತೆ ಮೆರೆದ ಡಿ.ಕೆ ಶಿವಕುಮಾರ್ ಪರಿಸ್ಥಿತಿ ಕಂಡು ಮರಗಿದರು. ಉಮ್ಮಳಿಸುವ ದುಃಖದ ನಡುವೆಯೂ ಬೇಗ ಮನೆಗೆ ಬರುವಂತೆ ಉಷಾ ಮತ್ತು ಪುತ್ರಿ ಐಶ್ವರ್ಯ ಸಾಂತ್ವನದ ಮಾತುಗಳನ್ನು ಆಡಿದ್ದಾರೆ.

DK Family

ಫ್ಯಾಮಿಲಿ ಭೇಟಿ ವೇಳೆ ಡಿ.ಕೆ ಶಿವಕುಮಾರ್ ಗಾಗಿ ರಾತ್ರಿ ಏಳು ಗಂಟೆಗೆ ಸಹೋದರ ಡಿ.ಕೆ ಸುರೇಶ್ ನಿವಾಸದಿಂದ ಊಟ ತರಲಾಗಿತ್ತು. ಈ ವೇಳೆ ಒಳಗಿದ್ದ ಕುಟುಂಬಸ್ಥರು ಡಿ.ಕೆ ಶಿವಕುಮಾರ್ ಗೆ ಊಟ ಮಾಡಿಸಿದ್ದಾರೆ. ಪತ್ನಿ ಮತ್ತು ಪುತ್ರಿ ವಾತ್ಸಲ್ಯ ಕಂಡು ಕನಕಪುರದ ಬಂಡೆ ಡಿಕೆ ಕರಗಿ ನೀರಾದರು. ಕಣ್ಣಾಲಿಗಳನ್ನು ಒದ್ದೆಯಾಗಿಸಿಕೊಂಡು ಡಿ.ಕೆ ಭಾವುಕರಾದರು. ಇತ್ತ ಅಣ್ಣನ ಕುಟುಂಬದ ಪರಿಸ್ಥಿತಿ ಕಂಡು ಸಹೋದರ ಡಿ.ಕೆ ಸುರೇಶ್ ಕೂಡ ಗದ್ಗದಿತರಾದರು.

ಕೋರ್ಟ್ ಮೆಟ್ಟಿಲೇರಲಿರುವ ಡಿಕೆಶಿ:
ಇಡಿ ಅಧಿಕಾರಿಗಳು ಕಸ್ಟಡಿಗೆ ತೆಡಗೆದುಕೊಂಡಾಗಿನಿಂದ ಶೇವ್ ಮಾಡಿಕೊಂಡಿಲ್ಲ. ಶೇವ್ ಮಾಡಲು ಶೇವಿಂಗ್ ಬ್ಲೇಡ್ ಕೊಡಿ ಎಂದು ಡಿ.ಕೆ ಕೇಳಿದರೂ ದೆಹಲಿ ಪೊಲೀಸರು ನಿರಾಕರಿಸಿದ್ದಾರೆ. ಕನಿಷ್ಠ ಪೆನ್ನು ಪೇಪರ್ ಆದರೂ ಕೊಡಿ ಪಾಯಿಂಟ್ಸ್ ಮಾಡಬೇಕು ಅಂದರೂ ಇಡಿ ಅಧಿಕಾರಿಗಳು ಕೊಟ್ಟಿಲ್ಲ. ಬ್ಲೇಡ್ ನಿಂದ ಮುಂದೆ ಅನಾಹುತವಾದರೆ ಯಾರು ಜವಾಬ್ದಾರಿ ಎಂದು ಇಡಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

dk family 1

ಇಡಿ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಡಿಕೆಶಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೇವಿಂಗ್ ಮಾಡಿಕೊಳ್ಳಲು ಅವಕಾಶ ಕೊಡಬೇಕು ಮತ್ತು ಪೆನ್ನು ಪೇಪರ್ ನಂತಹ ಅಗತ್ಯ ವಸ್ತುಗಳನ್ನು ನೀಡಲು ಸೂಚಿಸುವಂತೆ ಮನವಿ ಮಾಡಿದ್ದಾರೆ. ಈ ಅರ್ಜಿ ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ.

 

Share This Article
Leave a Comment

Leave a Reply

Your email address will not be published. Required fields are marked *