Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: PublicTV Explainer: ಕಡು ಬಡತನ ಮುಕ್ತ ಮೊದಲ ರಾಜ್ಯ ಕೇರಳ –  ಸರ್ಕಾರ ಹೇಳಿದ್ದೇನು? ವಿಪಕ್ಷಗಳು ಹೇಳಿದ್ದೇನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Special | PublicTV Explainer: ಕಡು ಬಡತನ ಮುಕ್ತ ಮೊದಲ ರಾಜ್ಯ ಕೇರಳ –  ಸರ್ಕಾರ ಹೇಳಿದ್ದೇನು? ವಿಪಕ್ಷಗಳು ಹೇಳಿದ್ದೇನು?

Special

PublicTV Explainer: ಕಡು ಬಡತನ ಮುಕ್ತ ಮೊದಲ ರಾಜ್ಯ ಕೇರಳ –  ಸರ್ಕಾರ ಹೇಳಿದ್ದೇನು? ವಿಪಕ್ಷಗಳು ಹೇಳಿದ್ದೇನು?

Public TV
Last updated: November 13, 2025 7:24 pm
Public TV
Share
3 Min Read
Kerala Poverty 3
SHARE

ಕೇರಳದ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ರಾಜ್ಯದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಕಡು ಬಡತನ (Extreme Poverty) ಮುಕ್ತ ರಾಜ್ಯ ಎಂದು ಘೋಷಿಸಿದ್ದಾರೆ. ಈ ಮೂಲಕ ಬಡತನ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡ ಭಾರತದ ಮೊದಲ ರಾಜ್ಯ ಕೇರಳ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಕೇರಳದ ಈ ಸಾಧನೆಗೆ ಸರ್ಕಾರ ಕೈಗೊಂಡ ಕ್ರಮವೇನು? ಇದು ಹೇಗೆ ಸಾಧ್ಯವಾಯಿತು. ಈ ಬಗ್ಗೆ ವಿಕ್ಷಗಳು ಹೇಳಿದ್ದೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. 

ಬಡತನ ಮುಕ್ತಕ್ಕೆ 5 ವರ್ಷಗಳ ಪ್ರಯತ್ನ
ಕಡು ಬಡತನ ಮುಕ್ತಗೊಳಿಸಲು 2021 ರಲ್ಲಿ ಕೇರಳ ಸರ್ಕಾರ ಬಡತನ ನಿರ್ಮೂಲನೆ ಯೋಜನೆಯನ್ನು ಪ್ರಾರಂಭಿಸಿತ್ತು. ತಳಮಟ್ಟದ ಸಮೀಕ್ಷೆ ಮೂಲಕ ಬಡತನ ನಿರ್ಮೂಲನೆಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ವಿಜಯನ್‌ ಅವರು ಹೇಳಿದ್ದಾರೆ. 

Kerala Poverty 2

ವಿಶ್ವ ಬ್ಯಾಂಕ್‌ ಮಾನದಂಡವೇನು? 
ವಿಶ್ವ ಬ್ಯಾಂಕ್ ನಿಗದಿ ಪಡಿಸಿದ ಮಾನದಂಡದ ಪ್ರಕಾರ ದಿನಕ್ಕೆ ಒಬ್ಬ ವ್ಯಕ್ತಿಗೆ 180 ರೂ. ಕ್ಕಿಂತ ಕಡಿಮೆ ಆದಾಯದಲ್ಲಿ ಜೀವನ ನಡೆಸುವುದು ಕಡು ಬಡತನವಾಗಿದೆ. ಇದರ ಜೊತೆ ಭಾರತದ ಬಹು-ಆಯಾಮದ ಬಡತನ ಸೂಚ್ಯಂಕ, ಪೌಷ್ಟಿಕಾಂಶ, ವಸತಿ, ನೈರ್ಮಲ್ಯ, ಶಿಕ್ಷಣ ಮತ್ತು ಮೂಲ ಸೇವೆಗಳ ಲಭ್ಯತೆಯಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ನೀತಿ ಆಯೋಗದ 2023ರ ಬಡತನ ಸೂಚ್ಯಂಕ ವರದಿಯ ಪ್ರಕಾರ, ಕೇರಳದ ಜನಸಂಖ್ಯೆಯಲ್ಲಿ ಕೇವಲ 0.55% ಮಾತ್ರ ಬಡವರಿದ್ದರು. ಇದು ದೇಶದಲ್ಲೇ ಅತಿ ಕಡಿಮೆ ಪ್ರಮಾಣವಾಗಿತ್ತು. 

ಗ್ರಾಮೀಣ ಜನಸಂಖ್ಯೆಯ 1% ರಷ್ಟು ಮತ್ತು ನಗರ ಜನಸಂಖ್ಯೆಯ 2% ರಷ್ಟು ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ ಜನರ ಪ್ರಗತಿಯಿಂದ ತೀವ್ರ ಬಡತನ ನಿರ್ಮೂಲನೆ ಮಾಡಿದ ಮೊದಲ ಭಾರತೀಯ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಸಿಎಂ ವಿಜಯನ್ ಹೇಳಿಕೊಂಡಿದ್ದಾರೆ. 

‌ಸರ್ಕಾರ ಕೈಗೊಂಡ ಕ್ರಮಗಳೇನು?
ಕೇರಳ ಸರ್ಕಾರ 2021 ರಲ್ಲಿ ಕಡು ಬಡತನ ನಿರ್ಮೂಲನೆಗಾಗಿ ಯೋಜನೆ ರೂಪಿಸಿತ್ತು. ಕುಟುಂಬಶ್ರೀ, ಮಹಿಳಾ ಸ್ವ-ಸಹಾಯ ನೆಟ್‌ವರ್ಕ್, ಆಶಾ-ಅಂಗನವಾಡಿ ಕಾರ್ಯಕರ್ತರು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ತಳಮಟ್ಟದ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯು ಕಡು ಬಡತನದಲ್ಲಿರುವ 64,006 ಕುಟುಂಬಗಳನ್ನು ಗುರುತಿಸಿತು. 

Kerala Poverty

ಪ್ರತಿ ಕುಟುಂಬದ ಸಮಸ್ಯೆಯಾದ ವಸತಿ, ಜಮೀನು ಕೊರತೆ, ದೀರ್ಘಕಾಲದ ಅನಾರೋಗ್ಯ, ಆದಾಯದ ಕೊರತೆ ಮತ್ತು ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸಲು ಯೋಜನೆಗಳನ್ನು ರೂಪಿಸಲಾಯಿತು. ಸರ್ಕಾರಿ ಅಂಕಿ ಅಂಶಗಳ ಪ್ರಕಾರ 5,422 ಹೊಸ ಮನೆಗಳ ನಿರ್ಮಾಣ, 5,522 ಮನೆಗಳ ನವೀಕರಣ, 439 ಕುಟುಂಬಗಳಿಗೆ 28.32 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ. 

34,672 ಕುಟುಂಬಗಳಿಗೆ ಕೌಶಲ್ಯ ರಹಿತ ಕಾರ್ಮಿಕರ ಕೆಲಸದಿಂದ 77 ಕೋಟಿ ರೂ. ಹೆಚ್ಚುವರಿ ಆದಾಯ ಸಿಕ್ಕಿದೆ. 4,394 ಕುಟುಂಬಗಳಿಗೆ ಸ್ವ-ಉದ್ಯೋಗ ಒದಗಿಸಿ ಬೆಂಬಲ ನೀಡಲಾಗಿದೆ. 8,438 ಕುಟುಂಬಗಳಿಗೆ ಆಹಾರ ಕಿಟ್‌ಗಳು, 20,648 ಕುಟುಂಬಗಳಿಗೆ ದೈನಂದಿನ ಊಟ ಒದಗಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. 

Kerala Poverty 1

 ಮತ್ತೆ ಕಡು ಬಡತನ ಮರುಕಳಿಸಬಾರದು
ಬಡತನ ನಿರ್ಮೂಲನೆ ಹೇಗೆ ಸವಾಲಾಗಿದೆಯೋ ಹಾಗೆ ಅದನ್ನು ನಿರ್ಮೂಲನೆ ಮಾಡಿದ ಮೇಲೆ ಮತ್ತೆ ಅದು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿರುವುದು ಸಹ ಅಷ್ಟೇ ಮುಖ್ಯ. ಇದಕ್ಕೆ ನಿರಂತರ ಶ್ರಮ ಅಗತ್ಯವಿದೆ.

ಕೌಶಲ್ಯ ತರಬೇತಿ, ಮೈಕ್ರೋಕ್ರೆಡಿಟ್ ಮತ್ತು ಸ್ವ-ಉದ್ಯೋಗ ಬೆಂಬಲದ ಮೂಲಕ ಈ ಉಪಕ್ರಮವು ಪರಿಹಾರದಿಂದ ದೀರ್ಘಾವಧಿಯ ಜೀವನೋಪಾಯ ಯೋಜನೆಗಳು ವಿಕಸನಗೊಳ್ಳಬೇಕು. ಡಿಜಿಟಲ್ ಟ್ರ್ಯಾಕಿಂಗ್‌ನೊಂದಿಗೆ ಪಂಚಾಯತ್‌ಗಳು, ಕಲ್ಯಾಣ ಇಲಾಖೆಗಳು ದುರ್ಬಲ ಕುಟುಂಬಗಳು ಮತ್ತೆ ಬಡತನಕ್ಕೆ ಜಾರುವುದನ್ನು ತಡೆಯಬಹುದು.

ಇತರ ರಾಜ್ಯಗಳಿಗೆ ಪಾಠ
ಕೇರಳದ ಯಶಸ್ಸು ಇತರ ರಾಜ್ಯಗಳು ಒಂದು ಪಾಠವಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಕಡುಬಡವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಂಡರೆ ಭಾರತ ಬಡತನ ಮುಕ್ತ ರಾಷ್ಟ್ರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. 

ವಿಪಕ್ಷಗಳು ಹೇಳಿದ್ದೇನು?
ಸಿಎಂ ವಿಜಯನ್‌ ಮಾಡಿರುವ ಕಡುಬಡತನ ಘೋಷಣೆಯನ್ನು ವಿರೋಧ ಪಕ್ಷಗಳು ತಳ್ಳಿಹಾಕಿವೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಇದನ್ನು ವಂಚನೆ ಎಂದು ಹೇಳಿದೆ. 

ವಿಪಕ್ಷ ನಾಯಕ ವಿ. ಡಿ. ಸತೀಶನ್ ನಿಯಮ 300ರ ಅಡಿಯಲ್ಲಿ ಸಿಎಂ ಹೇಳಿಕೆ ನೀಡಿರುವುದು ಸದನದ ನಿಯಮಗಳ `ಉಲ್ಲಂಘನೆ’ ಎಂದು ಟೀಕಿಸಿದ್ದಾರೆ.

TAGGED:Extreme PovertykeralaPinarayi Vijayanpoverty
Share This Article
Facebook Whatsapp Whatsapp Telegram

Cinema news

The Devil
10,500ಕ್ಕೂ ಹೆಚ್ಚು ಪೈರಸಿ ಲಿಂಕ್ ಡಿಲಿಟ್ – ಡೆವಿಲ್ ಚಿತ್ರತಂಡ ಅಧಿಕೃತ ಪೋಸ್ಟ್
Bengaluru City Cinema Latest Main Post Sandalwood
Samantha Ruth Prabhu 1
ಮೊದಲು ನಿಧಿ ಅಗರ್ವಾಲ್‌, ನಂತ್ರ ಸಮಂತಾ – ಫ್ಯಾನ್ಸ್‌ನಿಂದಲೇ ಕಸಿವಿಸಿ
Cinema Latest South cinema Top Stories
Darshan Fans
ವಿಜಯಲಕ್ಷ್ಮಿ ದರ್ಶನ್‌ ಬೆಂಕಿ ಮಾತು – ಕಿಚ್ಚನ ವಿರುದ್ಧ ಮಾತಿನ ಯುದ್ಧಕ್ಕೆ ನಿಂತ ಡಿಬಾಸ್‌ ಫ್ಯಾನ್ಸ್‌
Bengaluru City Cinema Latest Main Post Mandya Sandalwood
sudeep vijayalakshmi
ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್
Cinema Latest Sandalwood Top Stories

You Might Also Like

First driverless Pink Metro train arrives in Bengaluru
Bengaluru City

ಬೆಂಗಳೂರಿಗೆ ಬಂದಿಳಿದ ಮೊದಲ ಚಾಲಕರಹಿತ ಪಿಂಕ್ ಮೆಟ್ರೋ ರೈಲು

Public TV
By Public TV
57 seconds ago
Greater Bengaluru
Bengaluru City

ಸಲ್ಲಿಸಿದ್ದು 3,000 ಅರ್ಜಿ, ವಿತರಣೆ ಆಗಿದ್ದು 35; ಎ-ಖಾತಾ ವಿತರಣೆ ಶುರು ಮಾಡಿದ ಜಿಬಿಎ

Public TV
By Public TV
7 minutes ago
Accident
Belgaum

ಬೆಳಗಾವಿ | ವಿಶ್ವ ರೈತ ಸಮಾವೇಶಕ್ಕೆ ತೆರಳುತ್ತಿದ್ದ ವಾಹನ ಪಲ್ಟಿ – 30 ಮಂದಿಗೆ ಗಾಯ

Public TV
By Public TV
51 minutes ago
Bangladesh Hindu Man
Latest

ಅಲ್ಪಸಂಖ್ಯಾತರ ಮೇಲೆ ಹಿಂಸಾಚಾರ – ಭಾರತದ ಆರೋಪ ತಿರಸ್ಕರಿಸಿದ ಬಾಂಗ್ಲಾ ವಿದೇಶಾಂಗ ಸಚಿವಾಲಯ

Public TV
By Public TV
1 hour ago
India Bangal Clash
Latest

ಹಾದಿ ಹತ್ಯೆ ಬಳಿಕ ಭುಗಿಲೆದ್ದ ಹಿಂಸಾಚಾರ – ಬಾಂಗ್ಲಾದಲ್ಲಿ ಭಾರತೀಯ ವೀಸಾ ಸೇವೆ ಸ್ಥಗಿತ

Public TV
By Public TV
2 hours ago
Sheikh Hasina 1
Latest

ಬಲವಿಲ್ಲದ ಯೂನಸ್ ಸರ್ಕಾರದಿಂದ ಕಾನೂನು ಸುವ್ಯವಸ್ಥೆ ವಿಫಲ – ಬಾಂಗ್ಲಾ ಹಿಂಸಾಚಾರಕ್ಕೆ ಮಾಜಿ ಪ್ರಧಾನಿ ಶೇಖ್ ಹಸೀನಾ ಕಿಡಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?