ಬಹುಭಾಷಾ ನಟಿ ನಯನತಾರಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಜೊತೆಗಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ಗಾಗಿ ನಯನ ಮುಂಬೈಗೆ ಹಾರಿದ್ದು, ಇವರ ಶೆಡ್ಯೂಲ್ ಮುಗಿಯುವ ಹಂತದಲ್ಲಿದೆ. ನಯನ ಅಭಿಮಾನಿಗಳು ಇವರ ಸಿನಿಮಾಗಾಗಿ ಕಾಯುತ್ತಿದ್ದು, ಅವರ ಅಪ್ಡೇಟ್ಗಾಗಿ ಹದ್ದಿನ ಕಣ್ಣು ಇಟ್ಟಿದ್ದಾರೆ.
ಶಾರುಖ್ ಖಾನ್ ಮತ್ತು ನಯನತಾರಾ ಅಭಿನಯದ ‘ಲಯನ್’ ಸಿನಿಮಾ ಶೂಟಿಂಗ್ ಭರ್ಜರಿಯಿಂದ ಸಾಗುತ್ತಿದೆ. ಈ ಸಿನಿಮಾದಲ್ಲಿ ದಕ್ಷಿಣ ಮತ್ತು ಉತ್ತರ ಸಿನಿಮಾ ಸ್ಟಾರ್ ನಟ-ನಟಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಗಮನ ಸೆಳೆಯುವಂತೆ ಮಾಡಿದೆ. ಸಿನಿಮಾ ಯಾವ ರೀತಿ ಇರುತ್ತೆ ಎಂದು ಎಲ್ಲರೂ ಕಾತುರತೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ:ಬಿಯರ್ ದಾನ ಮಾಡಿ ಎಂದ ಅಭಿಮಾನಿ – ಬಿಯರ್ ಜೊತೆ ಆಲೂ ಭುಜಿಯಾ ಮಿಕ್ಸ್ಚರ್ ಸಾಕಾ ಎಂದ ಸೋನು
ಈ ನಡುವೆ ನಯನತಾರಾ ಏಪ್ರಿಲ್ 18 ರಂದು ಮುಂಬೈ ಶೆಡ್ಯೂಲ್ ಮುಗಿಸುತ್ತಾರೆ ಎಂಬ ಸುದ್ದಿ ಬಿ’ಟೌನ್ನಲ್ಲಿ ಕೇಳಿಬರುತ್ತಿದೆ. ಈ ಸಿನಿಮಾ ಶೂಟಿಂಗ್ ಮುಗಿದ ಮೇಲೆ ಈ ನಟಿ ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾ ಬಿಡುಗಡೆಗಾಗಿ ಚೆನ್ನೈಗೆ ಹಿಂತಿರುಗುತ್ತಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಚಿತ್ರತಂಡ, ಶಾರೂಖ್ ಖಾನ್ ಅವರು ರಾಜ್ಕುಮಾರ್ ಹಿರಾನಿ ಮತ್ತು ಅಟ್ಲಿ ಚಿತ್ರದಲ್ಲಿ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಯನತಾರಾ. ಅವರು ಏಪ್ರಿಲ್ 18 ರೊಳಗೆ ಮುಂಬೈ ಶೆಡ್ಯೂಲ್ ಪೂರ್ಣಗೊಳಿಸಬೇಕು. ಏಕೆಂದರೆ ಇವರು ತಮ್ಮ ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾ ಬಿಡುಗಡೆಗೆ ಸಜ್ಜಗಿದ್ದು, ಈ ಸಿನಿಮಾಗೆ ರೆಡಿಯಾಗಬೇಕಿದೆ. ಈ ಸಿನಿಮಾದಲ್ಲಿ ಅವರು ತನಿಖಾ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭುವನ ಸುಂದರಿ ಶ್ರೀದೇವಿ ಮಗಳು ಈಗ ಬ್ಯಾಕ್ಲೆಸ್ ಸುಂದರಿ