ಬೆಂಗಳೂರು: ಇನ್ನು ಮುಂದೆ ವೈನ್ ಶಾಪ್ ನಲ್ಲೂ ಸಿಸಿಟಿವಿ ಕಣ್ಗಾವಲು ಇರಿಸಬೇಕು ಎಂದು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ರಾಜ್ಯದ ಎಲ್ಲ ಮದ್ಯಂದಂಗಡಿಯಲ್ಲೂ ಇನ್ಮುಂದೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ವೈನ್ ಶಾಪ್ ನಲ್ಲಿ ಪಾರ್ಸೆಲ್ ನ ಜೊತೆ ಕುಡಿಯುವ ವ್ಯವಸ್ಥೆ ಮಾಡಲಾಗುವುದರಿಂದ ಅಕ್ರಮಕ್ಕೆ ಕಡಿವಾಣ ಹಾಕಲು ಅಬಕಾರಿ ಆಯುಕ್ತರು ಈ ನಿರ್ಧಾರವನ್ನು ಮಾಡಿದ್ದಾರೆ.
- Advertisement 2
ಒಂದು ವೇಳೆ ಅಬಕಾರಿ ಇಲಾಖೆಯ ಆದೇಶವನ್ನು ಮೀರಿ ಸಿಸಿಟಿವಿ ಅಳವಡಿಸದಿದ್ದರೆ, ಇನ್ನು ಮುಂದೆ ಅಂತಹ ಶಾಪ್ ಗಳ ಲೈಸೆನ್ಸ್ ನವೀಕರಣ ಮಾಡಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ. ಆದರೆ ಅಬಕಾರಿ ಆಯುಕ್ತ ಮೌದ್ಗೀಲ್ ವಿರುದ್ಧ ಬಾರ್ ಮಾಲೀಕರ ಸಂಘ ಗರಂ ಆಗಿದೆ.
- Advertisement 3
ಅಬಕಾರಿ ಇಲಾಖೆ ಸಿಕ್ಕಾಪಟ್ಟೆ ಕಠಿಣ ಕಾಯ್ದೆಗಳನ್ನು ತರುತ್ತಿದೆ. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುತ್ತಾರೆ. ಈ ರೀತಿ ಹೊಸ ಕಾಯ್ದೆಗಳನ್ನು ತಂದು ತೊಂದರೆ ಕೊಡುತ್ತಿದ್ದಾರೆ. ಅಕ್ರಮಕ್ಕೆ ಕಡಿವಾಣ ಹಾಕುವುದೆಂದರೆ ಈ ರೀತಿ ತೊಂದರೆಗಳನ್ನು ಕೊಡುವುದಲ್ಲ ಅಂತ ಬಾರ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
- Advertisement 4