ಕಾನ್ ಸಿನಿಮೋತ್ಸವದಲ್ಲಿ ಕನ್ನಡಿಗ ಗಾಯಕ ರಘು ದೀಕ್ಷಿತ್ ಭಾಗಿಯಾಗಿದ್ದರು. ವಿಶ್ವದ ಎಲ್ಲ ಚಿತ್ರರಂಗದ ಸ್ಟಾರ್ಗಳ ಸಿನಿಮೋತ್ಸವದಲ್ಲಿ ಭಾಗಿಯಾಗಿದ್ದರು. ಕನ್ನಡತಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡಿದ್ದರು. ಕಾನ್ ಫೆಸ್ಟಿವಲ್ನಲ್ಲಿ ಕನ್ನಡ ಚಿತ್ರರಂಗದಿಂದ ರಘು ದೀಕ್ಷಿತ್ಗೆ ಹಾಡಲು ಅವಕಾಶ ಸಿಕ್ಕಿತು. ಬಳಿಕ ಕಾನ್ ಸಿನಿಮೋತ್ಸವದ ಕುರಿತು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಮಾತನಾಡಿದ್ದಾರೆ.
ಇದೇ ಸಿನಿಮೋತ್ಸವದಲ್ಲಿ ಕನ್ನಡಿಗ ರಘು ದೀಕ್ಷಿತ್ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ರು, ಕನ್ನಡದ ಕಂಪನ್ನು ಪಸರಿಸಿದ್ರು. ಮೇ 17ರಿಂದ ಮೇ 29ರ ವರೆಗೆ ಪ್ರಾರಂಭವಾದ ಈ ಕಾನ್ ಫೆಸ್ಟಿವಲ್ನಲ್ಲಿ ರಘು ದೀಕ್ಷಿತ್ ಭಾಗಿವಹಿಸಿದ್ದರ ಹಿಂದಿನ ಕಥೆಯನ್ನ ಹೇಳಿಕೊಂಡಿದ್ದಾರೆ.
ಕಾನ್ ಫೆಸ್ಟಿವಲ್ಗೆ ಹೋಗುವ ಸಮಯದಲ್ಲಿ ರಘು ದೀಕ್ಷಿತ್ ಮತ್ತು ಅವರ ತಂಡಕ್ಕೆ ಫ್ರಾನ್ಸ್ ರೀಚ್ ಆಗುವಾಗ ತಡವಾಗಿತ್ತಂತೆ. ಆದ್ರೆ ಮೇ 21ರಂದು ನಡೆಯುವ ಕಾರ್ಯಕ್ರಮದಲ್ಲಿ ಸರಿಯಾದ ಸಮಯಕ್ಕೆ ರಘು ದೀಕ್ಷಿತ್ ತಲುಪಿದ್ದರು. ಆದರೆ ಸಮಯದ ಅಭಾವದಿಂದ ಸ್ನಾನ ಮಾಡದೇ ಪ್ರದರ್ಶನ ನೀಡಿದ್ದರಂತೆ. ಇಂತಹ ಸಮಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ಗಾಯಕ ರಘು ಅವರು ಹಾಡಿ ರಂಜಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.ಇದನ್ನೂ ಓದಿ:ಪವನ್ ಕಲ್ಯಾಣ್ಗೆ ರಾಜಮೌಳಿ ಆ್ಯಕ್ಷನ್ ಕಟ್
ರಘು ದೀಕ್ಷಿತ್ ಕಾನ್ ಸಿನಿಮೋತ್ಸವದಿಂದ ಇದೀಗ ಹಿಂತಿರುಗಿದ್ದು, ಬ್ಯಾಕ್ ಟು ಬ್ಯಾಕ್ ಮೂರು ಆಲ್ಬಂಗಳನ್ನು ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಬಿಡುಗಡೆಗೆ ಸಜ್ಜಾಗಿವೆ.