ಆರ್.ಚಂದ್ರು ನಿರ್ದೇಶನದ ‘ಕಬ್ಜ’ ಸಿನಿಮಾ ಭಾರತೀಯ ಚಿತ್ರ ರಂಗದಲ್ಲೇ ಹೊಸ ಮನ್ವಂತರಕ್ಕೆ ಕಾರಣವಾಗುತ್ತಿದೆ. ಭಾರೀ ಬಜೆಟ್ ಮತ್ತು ಸಿನಿಮಾ ತಾರೆಯರಿಂದಾಗಿಯೇ ಚಿತ್ರ ನಿರೀಕ್ಷೆ ಮೂಡಿಸಿದೆ. ಉಪೇಂದ್ರ ಅವರಿಂದ ಶುರುವಾಗಿ ಕಲಾವಿದರ ಆಯ್ಕೆ, ಒಂದೊಂದೇ ತಿರುವು ಪಡೆದುಕೊಳ್ಳುತ್ತಿದೆ.
ಉಪೇಂದ್ರ ನಂತರ ಮತ್ತೊಬ್ಬ ಸ್ಟಾರ್ ಈ ಸಿನಿಮಾಗೆ ಎಂಟ್ರಿ ಕೊಟ್ಟರು. ಅವರೇ ಕಿಚ್ಚ ಸುದೀಪ್. ಕಿಚ್ಚ ಮತ್ತು ಉಪ್ಪಿ ಕಾಂಬಿನೇಷನ್ ನ ಚಿತ್ರಗಳು ಈಗಾಗಲೇ ಗೆದ್ದಿರುವುದರಿಂದ ಮತ್ತಷ್ಟು ಕುತೂಹಲಕ್ಕೆ ಕಬ್ಜ ಕಾರಣವಾಯಿತು. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು, ಮೊನ್ನೆಯಷ್ಟೇ ಒಬ್ಬ ನಾಯಕಿಯನ್ನು ಚಂದ್ರು ಪರಿಚಯಿಸಿದರು. ಇದನ್ನೂ ಓದಿ : ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್
- Advertisement
- Advertisement
ಹೌದು, ಉಪ್ಪಿ ಮತ್ತು ಸುದೀಪ್ ನಂತರ ನಾಯಕಿಯಾಗಿ ದಕ್ಷಿಣದ ಸ್ಟಾರ್ ನಟಿ ಶ್ರೀಯಾ ಶರಣ್ ತಾರಾಗಣದಲ್ಲಿ ಕಾಣಿಸಿಕೊಂಡ ಪ್ರಮುಖ ಕಲಾವಿದೆ. ಈ ಸಿನಿಮಾದಲ್ಲಿ ಶ್ರೀಯಾ ನಾಯಕಿಯಾಗಿ ನಟಿಸುತ್ತಿದ್ದು, ಹೊಸ ಬಗೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಈಗಾಗಲೇ ಶ್ರೀಯಾ ದೃಶ್ಯಗಳನ್ನು ನಿರ್ದೇಶಕರು ಸೆರೆ ಹಿಡಿಯುತ್ತಾರೆ. ಇದನ್ನೂ ಓದಿ : ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
ಮೊನ್ನೆಯಷ್ಟೇ ಶ್ರೀಯಾ ಅವರನ್ನು ಪರಿಚಯಿಸಿದ್ದ ನಿರ್ದೇಶಕ ಚಂದ್ರು, ಇದೀಗ ದಕ್ಷಿಣ ಸಿನಿಮಾ ರಂಗದಿಂದ ಮತ್ತಿಬ್ಬರು ಹೆಸರಾಂತ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇವತ್ತೇ ಈ ಕುರಿತು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮುರಳಿ ಶರ್ಮಾ ಮತ್ತು ಪೊಸನಿ ಕೃಷ್ಣ ಮುರಳಿ ಕಬ್ಜ ಸಿನಿಮಾದ ಮಹತ್ವದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.