ಬೆಂಗಳೂರು: ಮರ್ಯಾದೆಗೆ ಅಂಜಿ ಎಂಜಿನಿಯರ್ರೊಬ್ಬರು ಜ.18ರಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಲ್ಲೇಶ್ವರಂ ರೈಲ್ವೇ ಹಳಿ ಮೇಲೆ ತಲೆ ಕೊಟ್ಟು ಎಂಜಿನಿಯರ್ ರೋಹಿತ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹುಡುಗಿ ವೇಷದಲ್ಲಿ ವಂಚಕರು ರೋಹಿತ್ಗೆ ಪರಿಚಯವಾಗಿದ್ದರು. ಬಳಿಕ ವಂಚಕರು ಇದನ್ನು ವೀಡಿಯೋ ಮಾಡಿಕೊಂಡು ಹಣಕ್ಕಾಗಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದರು.
ರೋಹಿತ್ ವಂಚಕರ ಜಾಲಕ್ಕೆ ಸಿಲುಕಿ 3 ಬಾರಿ ಹಣ ನೀಡಿದ್ದರು. ಆದರೂ ಸಹ ಆರೋಪಿಗಳು ಮತ್ತಷ್ಟು ಹಣಕ್ಕಾಗಿ ಅವರನ್ನು ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ವೇಳೆ ಅವರು ಆರೋಪಿಗಳಿಗೆ ನೇರವಾಗಿ ಭೇಟಿಯಾಗಿ ನಾನು ನಿಮ್ಮ ಜೊತೆ ಮಾತನಾಡಬೇಕು ಅಂತ ಅಂಗಲಾಚಿದ್ದರು. ಆದರೂ ಆರೋಪಿಗಳು ಅವರ ಮಾತನ್ನು ಧಿಕ್ಕರಸಿ ಹಣ ಕೊಡದಿದ್ದರೆ ವೀಡಿಯೋ ಹೊರಗಡೆ ಬಿಡೋದಾಗಿ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ
ಕೊನೆಗೆ ರೋಹಿತ್ 2 ಪುಟಗಳ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ರೈಲ್ವೇ ಪೊಲೀಸ್ ಎಎಸ್ಐ ಗುರುಮೂರ್ತಿಯವರ ಪುತ್ರನಾಗಿದ್ದಾರೆ. ಈ ಹಿಂದೆ ಅವರ ತಂದೆ ಕೋವಿಡ್ನಿಂದ ನಿಧನರಾಗಿದ್ದು, ಇದೀಗ ಮಗನು ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೋಹಿತ್ ಎಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಲು ಹುಡುಕಾಟ ನಡೆಸುತ್ತಿದ್ದರು. ಇದನ್ನೂ ಓದಿ: ಶಕ್ತಿಧಾಮದ ಮಕ್ಕಳನ್ನ ಬಸ್ಸಿನಲ್ಲಿ ತಾವೇ ಡ್ರೈವ್ ಮಾಡಿ ರೌಂಡ್ ಹಾಕಿಸಿದ ಶಿವಣ್ಣ