ಮಲೆಮಹದೇಶ್ವರ ಬೆಟ್ಟದಲ್ಲಿ ಕಾಡಾನೆಗೆ ಗುಂಡಿಟ್ಟ ಪಾಪಿಗಳು..!

Public TV
1 Min Read
160911kpn51 1
A wild elephant which was injured while crossing the fence spotted at Manchanabele Dam, Magadi taluk in Bangalore Rural District on Sunday, September 11, 2016.-KPN ### Magadi: injured wild elephant spotted at Manchanabele Dam

ಸಾಂದರ್ಭಿಕ ಚಿತ್ರ

ಚಾಮರಾಜನಗರ: ದಂತಕ್ಕಾಗಿ ಕಾಡೆನೆಯೊಂದಕ್ಕೆ ನಾಡ ಬಂದೂಕಿನಿಂದ ಗುಂಡಿಟ್ಟು ಕೊಂದು ಆನೆಯ ಎರಡು ದಂತಗಳನ್ನು ಅಪಹರಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದ ಕೊತ್ತನೂರು ವಲಯದ ಚಿಕ್ಕಲ್ಲೂರು ಗಸ್ತಿನಲ್ಲಿ ಜರುಗಿದೆ.

ವೀರಪ್ಪನ್ ಅಟ್ಟಹಾಸದ ನಂತರ ಇದೀಗ ಮತ್ತೆ ಮಲೆಮಹದೇಶ್ವರ ಬೆಟ್ಟದ ಭಾಗದಲ್ಲಿ ದಂತ ಚೋರರು ಹುಟ್ಟಿಕೊಂಡಿದ್ದಾರೆ. ಸುಮಾರು 50 ವರ್ಷದ ಗಂಡಾನೆಯ ದಂತಕ್ಕಾಗಿ ಚೋರರು ನಾಡಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ.

cng danta

ಆನೆಯ ದಂತದ ಭಾಗಕ್ಕೆ ಆ್ಯಸಿಡ್ ಹಾಕಿ ಎರಡು ದಂತವನ್ನು ತೆಗೆದುಕೊಂಡು ಹೋಗಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಆನೆಯ ಕಳೆ ಬರಹ ಪತ್ತೆಯಾಗಿದೆ. 2015ರಿಂದ ಇದೂವರೆಗೆ 5 ಆನೆಗಳನ್ನು ಕೊಂದು ದಂತಗಳನ್ನು ದಂತ ಚೋರರು ಅಪಹರಿಸಿದ್ದಾರೆ.

ಒಟ್ಟಿನಲ್ಲಿ ವೀರಪ್ಪನ್ ಬಳಿಕ ಮತ್ತೆ ದಂತಚೋರರು ಆನೆಗಳನ್ನು ಕೊಲ್ಲುತ್ತಿರೋದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *