ಸಾರ್ವಜನಿಕವಾಗಿ ಕಣ್ಣೀರಿಟ್ಟ ನಟ ದ್ವಾರಕೀಶ್

Public TV
1 Min Read
DWARKISH copy

ಬೆಂಗಳೂರು: ನಟ ಹಾಗೂ ನಿರ್ದೇಶಕ ದ್ವಾರಕೀಶ್ ತಮ್ಮ ಆತ್ಮೀಯ ಸ್ನೇಹಿತನನ್ನು ನೆನಪಿಸಿಕೊಂಡು ಸಾರ್ವಜನಿಕವಾಗಿ ಕಣ್ಣೀರಿಟ್ಟಿದ್ದಾರೆ.

ಶನಿವಾರ ‘ಪಡ್ಡೆಹುಲಿ’ ಸಿನಿಮಾದ ಸಾಂಗ್ ಬಿಡುಗಡೆಯ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ನಟ ದ್ವಾರಕೀಶ್ ಆಗಮಿಸಿದ್ದು, ಈ ವೇಳೆ ಮಾತನಾಡವಾಗ ದಿವಂಗತ ಡಾ. ವಿಷ್ಣುವರ್ಧನ್ ಅವರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

5H2A2353

ಈ ವೇಳೆ ಮಾತನಾಡಿದ ದ್ವಾರಕೀಶ್ ಅವರು, ವಿಷ್ಣುವರ್ಧನ್ ಅಭಿಮಾನಿಗಳಿಗೆ ನನ್ನ ನಮಸ್ಕಾರಗಳು, ವಿಷ್ಣುವರ್ಧನ್ ಬಗ್ಗೆ ಕೊಂಡಾಡಿ, ಅವನ ಬಗ್ಗೆ ಹೇಳಿ, ಸೊಗಸಾಗಿ ಹಾಡನ್ನು ಪಡ್ಡೆಹುಲಿ ಚಿತ್ರತಂಡ ಮಾಡಿದೆ. ವಿಷ್ಣುವರ್ಧನ್ ಜೊತೆ ನಾನು ಸುಮಾರು 19 ಸಿನಿಮಾಗಳನ್ನು ಜೊತೆ ಮಾಡಿದ್ದೇನೆ. ಅವನನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ವಿಷ್ಣುವರ್ಧನ್ ಬಗ್ಗೆ ಮಾತನಾಡುವುದು ಎಂದರೆ ನನಗೆ ಬಹಳ ದುಃಖವಾಗುತ್ತದೆ. ಎಂದಿಗೂ ನಾನು ವಿಷ್ಣುವರ್ಧನ್ ಇಲ್ಲ ಅಂತ ತಿಳಿದುಕೊಂಡಿಲ್ಲ. ಇಲ್ಲೇ ನನ್ನ ಜೊತೆಯಲ್ಲೇ ಇದ್ದಾನೆ. ಈ ವೇದಿಕೆಯಲ್ಲಿ ಒಂದು ಸತ್ಯ ಹೇಳುತ್ತೇನೆ ಅಂತ ವಿಷ್ಣುವರ್ಧನ್ ನನ್ನು ನೆನಪಿಸಿಕೊಳ್ಳದ ಒಂದು ದಿನ ನನ್ನ ಜೀವನದಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪ್ರತಿನಿತ್ಯವೂ ನೆನಪಿಸಿಕೊಳ್ಳುತ್ತೇನೆ. ವಾರಕ್ಕೆ ಒಮ್ಮೆ ನನ್ನ ಕನಸಲ್ಲಿ ಬರುತ್ತಾನೆ. ಅವನನ್ನು ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಸುಂದರ ನಟ ನನ್ನ ವಿಷ್ಣುವರ್ಧನ್ ಎಂದು ಭಾವುಕರಾಗಿ ಆನಂದದಿಂದ ದ್ವಾರಕೀಶ್ ಹೇಳಿದ್ದಾರೆ.

padde huli

ವಿಷ್ಣುವರ್ಧನ್ ನನ್ನ ಮನದಲ್ಲಿ ಸದಾ ಇರುತ್ತಾರೆ. ಕನ್ನಡ ಸಿನಿಮಾರಂಗದಲ್ಲಿ ಅದು ದ್ವಾರಕೀಶ್ 53 ಸಿನಿಮಾ ಮಾಡಿದ್ದೇನೆ ಎಂದರೆ ಅದಕ್ಕೆ ಕಾರಣ ವಿಷ್ಣುವರ್ಧನ್, ಅವನು ಯಾವತ್ತು ನನ್ನ ಬಳಿ ಬಂದು ಕಥೆ ಏನು ಅಂತ ಕೇಳುತ್ತಿರಲಿಲ್ಲ. ನಾನು ಹೇಳಿದರೆ ಸಾಕು ಅದೇ ವೇದವಾಕ್ಯ. ನಾನು ಕರೆದಾಗೆಲ್ಲ ಏನೇ ಕೆಲಸ ಇದ್ದರು ಬರುತ್ತಿದ್ದನು ಎಂದು ನೋವಿನಿಂದ ಹೇಳಿದ್ದಾರೆ.

ಪಡ್ಡೆಹುಲಿ ಚಿತ್ರತಂಡ ಅವನಿಗಾಗಿ ಅರ್ಪಣೆ ಮಾಡಿ ಈ ಹಾಡನ್ನು ಮಾಡಿದ್ದಾರೆ. ಹಾಡು ಸೊಗಸಾಗಿ ಚೆನ್ನಾಗಿದೆ ಎಂದು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *