ಉಡುಪಿ: ಭಾರತ್ ಬಂದ್ ಆಗಿರುವುದರಿಂದ ಊಟ ಸಿಗದ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕುಡುಕರು ರಂಪಾಟ ಮಾಡಿದ್ದಾರೆ. ಊಟ ಇಲ್ಲ ಅಂತ ಮಾಜಿ ಸಿಎಂ ಬಂಗಾರಪ್ಪ ಅವರನ್ನು ನೆನಪು ಮಾಡಿಕೊಂಡಿದ್ದಾರೆ.
ಭಾರತ್ ಬಂದ್ ಹಿನ್ನೆಲೆಯಲ್ಲಿ ಉಡುಪಿಯಲ್ಕಿ ಹೋಟೆಲ್ ಎಲ್ಲಾ ಬಂದ್ ಆಗಿದೆ. ಸಿಟಿ ಬಸ್ ನಿಲ್ದಾಣ ಸಮೀಪ ಐದಾರು ಕುಡುಕರು ಹೊಟ್ಟೆ ಹಸಿವಿನಿಂದ ಗೋಳಾಡಿದ್ದಾರೆ. ಕುಡುಕರಿಗೆ ಬಂದ್ ಎಫೆಕ್ಟ್ ನೇರವಾಗಿ ತಟ್ಟಿದೆ. ಹಸಿವು, ಹಸಿವು ಅಂತ ಗೋಳಾಟ ಮಾಡಿದ ಜನ, ಹೊಟೇಲ್ ಓಪನ್ ಮಾಡಿ ಅಂತ ರಂಪಾಟ ಮಾಡಿದರು.
ಹೊಟೇಲ್, ಅಂಗಡಿ ಓಪನ್ ಮಾಡಿ. ಊಟ ಕೊಡಿ ಅಂತ ಅಂಗಲಾಚಿದರು. ಉಡುಪಿ ಬಸ್ ಸಮೀಪ ಹೈಡ್ರಾಮಾ ನಡೆಸಿದರು. ರಸ್ತೆ ಮಧ್ಯದಲ್ಲಿ ಮಾಧ್ಯಮಗಳ ಕಾಲಿಗೆ ಬಿದ್ದು ಊಟ ಬೇಕು ಅಂತ ಕೇಳಿಕೊಂಡರು. ನಮ್ಮ ಬಂಗಾರಪ್ಪನವರ ಕಾಲದಲ್ಲಿ ಹೀಗೆ ಇರಲಿಲ್ಲ. ಎಲ್ಲವೂ ಚೆನ್ನಾಗಿತ್ತು ಅಂತ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರನ್ನು ನೆನಪಿಸಿಕೊಂಡರು.
ನಮ್ಮ ಬಂಗಾರಪ್ಪನವರು ಅಧಿಕಾರದಲ್ಲಿದ್ದಾಗ ಹೀಗೆಲ್ಲ ಇರಲಿಲ್ಲ. ರಾಜ್ಯ ಸುಗಮವಾಗಿ ಸಾಗುತ್ತಿತ್ತು ಅಂತ ಬೇಸರ ವ್ಯಕ್ತಪಡಿಸಿದರು. ನಿನ್ನೆಯಿಂದ ಊಟವೇ ಮಾಡಿಲ್ಲ ಅಂತ ಗುರುವಪ್ಪ ಕುಡಿದ ಮತ್ತಿನಲ್ಲಿತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv