ಬಳ್ಳಾರಿ: ಇದು ಯಾವುದೋ ಕೆರೆಯಲ್ಲ. ಜೋರಾಗಿ ಬಂದ ಮಳೆಯ ನೀರು ಸಹ ಅಲ್ಲ. ಬದಲಾಗಿ ಒಳಚರಂಡಿ ನೀರಿನ ದೃಶ್ಯವಿದು. ಬಳ್ಳಾರಿಯ ರಾಯಲ್ ಕಾಲೋನಿಯ ನೂರಾರು ಮನೆಗಳು ಇದೀಗ ಒಳಚರಂಡಿ ನೀರಿನಲ್ಲೇ ಮುಳುಗಿ ಹೋಗಿವೆ.
ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಒಂದು ವಾರದಿಂದ ಚೇಂಬರ್ ಹಾಳಾಗಿ ನೂರಾರು ಮನೆಗೆ ಕೊಳಚೆ ನೀರು ನುಗ್ಗುತ್ತಿದೆ. ಈ ಚರಂಡಿ ನೀರನ್ನ ಹೊರ ಹಾಕುವುದೇ ಜನರಿಗೆ ಕಾಯಕವಾಗಿಬಿಟ್ಟಿದೆ.
ಈ ಬಗ್ಗೆ ಈಗಾಗಲೇ ಪಾಲಿಕೆಗೆ ದೂರು ನೀಡಿದ್ರೂ ಪಾಲಿಕೆ ಅಧಿಕಾರಿಗಳು ಮಾತ್ರ ಒಳಚರಂಡಿ ಸರಿಪಡಿಸೋ ಕೆಲಸಕ್ಕೆ ಇದುವರೆಗೂ ಕೈಹಾಕಿಲ್ಲ. ಇದರಿಂದ ನೆಮ್ಮದಿಯಾಗಿ ಮನೆಯಲ್ಲಿ ಅಡುಗೆ ಮಾಡೋಕೆ ಆಗ್ತಿಲ್ಲ ಅಂತಾರೆ ಸ್ಥಳೀಯರು.
ಇದೇ ರೀತಿ ಹಿಂದೆ 2-3 ಬಾರಿ ರಾಯಲ್ ಕಾಲೋನಿಯಲ್ಲಿ ಒಳಚರಂಡಿ ಸಮಸ್ಯೆಯಾದಾಗಲೇ ಜನ ದೂರು ಕೊಟ್ಟಿದ್ರು. ಆದ್ರೂ ಒಳಚರಂಡಿ ಸಮಸ್ಯೆಗೆ ಮುಕ್ತಿ ಕೊಡಿಸಿಲ್ಲ.