– ವಿದ್ಯಾರ್ಥಿಗಳೊಂದಿಗೆ ನಮೋ ಸಂವಾದ
ನವದೆಹಲಿ: ದೇಶದಲ್ಲಿ ವಿದ್ಯಾರ್ಥಿಗಳಿಗೆ (Students) ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ʻಪರೀಕ್ಷಾ ಪೇ ಚರ್ಚಾʼ ಕಾರ್ಯಕ್ರಮ ನಡೆಯುತ್ತಿದೆ. ಇಂದು 9ನೇ ಪರೀಕ್ಷಾ ಪೇ ಚರ್ಚಾ (Pariksha Pe Charcha) ಅಂಗವಾಗಿ ಪ್ರಧಾನಿ ಮೋದಿ (PM Modi) ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು.
ಮಕ್ಕಳಲ್ಲಿ ಪರೀಕ್ಷೆ ಭಯ ಹೋಗಲಾಡಿಸಲು ಆತ್ಮಸ್ಥೈರ್ಯ ತುಂಬಿಸುವ ಸಲುವಾಗಿ ಪ್ರತಿವರ್ಷ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಡಿ ಸಂವಾದ ಕಾರ್ಯಕ್ರಮ ನಡೆಸುತ್ತಾರೆ. ಈ ವರ್ಷವೂ ದೆಹಲಿಯ ಲೋಕ ಕಲ್ಯಾಣ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಗುಜರಾತ್ ನ ದೇವಮೋಗ್ರ, ತಮಿಳುನಾಡಿನ ಕೊಯಮತ್ತೂರು, ಛತ್ತೀಸ್ಗಢನ ರಾಯಪುರ ಸೇರಿದಂತೆ ವಿವಿಧ ಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಆತ್ಮ ವಿಶ್ವಾಸ ತುಂಬಲು, ಪರೀಕ್ಷೆ ಭಯ, ಒತ್ತಡ ನಿವಾರಣೆ ಕಲಿಕೆಗೆ ಸಂಬಂಧಿಸಿದ ವಿಚಾರ ಶಿಕ್ಷಣಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು. ಇದನ್ನೂ ಓದಿ: ವಿಪಕ್ಷಗಳು ನನ್ನ ಸಮಾಧಿ ಅಗೆಯಲು ಬಯಸಿವೆ – ರಾಜ್ಯಸಭೆಯಲ್ಲಿ ಗುಡುಗಿದ ಮೋದಿ
ಸಮಯ ವ್ಯರ್ಥ ಮಾಡಬೇಡಿ
ಆನ್ಲೈನ್ ಬೆಟ್ಟಿಂಗ್ ಹಾಗೂ ಗೇಮಿಂಗ್ ಅಪ್ಲಿಕೇಷನ್ (Online Gaming Apps) ಬಳಕೆ ಕುರಿತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ, ಸೋಷಿಯಲ್ ಮೀಡಿಯಾಗಳನ್ನ ಜವಾಬ್ದಾರಿಯುತವಾಗಿ ಬಳಸಿ, ಇಂಟರ್ನೆಟ್ ಹಾಗೂ ತಂತ್ರಜ್ಞಾನವನ್ನ ಲಾಭಕ್ಕಾಗಿ ಬಳಸುವಂತೆ ಕಿವಿಮಾತು ಹೇಳಿದ್ರು. ಅಲ್ಲದೇ ಇಂದು ಯಾವುದು ಚೀಪಾಗಿ ಸಿಗುತ್ತೋ ಅದನ್ನ ಸುಲಭವಾಗಿ ಪ್ರವೇಶಿಸಬಹುದಾಗಿದ. ಹಾಗಾಗಿ ಸಮಯವನ್ನ ವ್ಯರ್ಥ ಮಾಡಬೇಡಿ ಎಂದು ತಿಳಿವಳಿಕೆ ನೀಡಿದರು. ಇದನ್ನೂ ಓದಿ: ಹಿಂದಿನ ದಿನ 103 ಡಿಗ್ರಿ ಜ್ವರ, ಮರುದಿನ ಸ್ಫೋಟಕ ಬ್ಯಾಟಿಂಗ್ – ಸ್ಮೃತಿಯ ಬೆಂಕಿ ಆಟ, ಆರ್ಸಿಬಿ ಚಾಂಪಿಯನ್
ಪ್ರಶ್ನೆ 1. ನಾವು ಆಗಾಗ್ಗೆ ಏನು ಅಧ್ಯಯನ ಮಾಡಬೇಕು ಎನ್ನುವ ಗೊಂದಲಗಳಿದೆ, ಕೌಶಲ್ಯ ಮತ್ತು ಶಿಕ್ಷಣ ಎಲ್ಲದರಲ್ಲೂ ಸಮತೋಲನವನ್ನು ಕಾಯ್ದುಕೊಳ್ಳುವುದು ಹೇಗೆ?
ಉತ್ತರ: ಎರಡು ರೀತಿಯ ಕೌಶಲ್ಯಗಳಿವೆ ಎಂದು ಪ್ರಧಾನಿ ವಿವರಿಸಿದರು. ಜೀವನ ಕೌಶಲ್ಯ ಮತ್ತು ಕೆಲಸದ ಕೌಶಲ್ಯಗಳು. ಜೀವನ ಕೌಶಲ್ಯಗಳಲ್ಲಿ ಸರಿಯಾದ ದಿನಚರಿ ಕಾಪಾಡಿಕೊಳ್ಳುವುದು, ಆರೋಗ್ಯವಾಗಿರುವುದು, ಪ್ರತಿದಿನ ವ್ಯಾಯಾಮ ಮಾಡುವುದು ಮತ್ತು ಉತ್ತಮವಾಗಿ ಸಂವಹನ ನಡೆಸುವುದು ಸೇರಿವೆ. ಕೆಲಸದ ಕೌಶಲ್ಯಗಳ ಬಗ್ಗೆ, ಕೇವಲ ಪುಸ್ತಕಗಳನ್ನು ಓದುವುದು ಸಾಕಾಗುವುದಿಲ್ಲ, ಹಿರಿಯರಿಂದ ಕಲಿಯುವುದು, ಪ್ರತಿದಿನ ಹೊಸದನ್ನು ಕಲಿಯುವುದು ಮತ್ತು ಹೊಸ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ.
ಪ್ರಶ್ನೆ 2. ಬೋರ್ಡ್ ಪರೀಕ್ಷೆಗಳ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗುವುದು ಅಗತ್ಯವೇ?
ಉತ್ತರ: ಬೋರ್ಡ್ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಆದ್ಯತೆಯಾಗಿರಬೇಕು, ಬೋರ್ಡ್ ಪರೀಕ್ಷೆಗಳು, ಶೈಕ್ಷಣಿಕ ವೃತ್ತಿಜೀವನದ ಅಡಿಪಾಯವಾಗಿದೆ. ಬೋರ್ಡ್ ಪಠ್ಯಕ್ರಮಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನ ನೀವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದರೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಶ್ರಮ ಹಾಕುವ ಅಗತ್ಯವಿಲ್ಲ
ಪ್ರಶ್ನೆ 3. ಸಣ್ಣ ಮನೆ ಮತ್ತು ಕೆಲಸದ ವಾತಾವರಣದಲ್ಲಿ ಅಧ್ಯಯನ ಮಾಡುವುದು ಏಕೆ ಕಷ್ಟ..?
ಉತ್ತರ: ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನ ಗಳಿಸುವ ಅನೇಕ ವಿದ್ಯಾರ್ಥಿಗಳು ಸೌಲಭ್ಯಗಳು ಸೀಮಿತವಾಗಿರುವ ಸಣ್ಣ ಹಳ್ಳಿಗಳಿಂದ ಬಂದಿದ್ದಾರೆ, ಕಠಿಣ ಪರಿಶ್ರಮ, ಸಮರ್ಪಣೆಯಿಂದ ಯಾವುದೇ ವಿದ್ಯಾರ್ಥಿ ಪ್ರಗತಿ ಸಾಧಿಸಬಹುದು
ಪ್ರಶ್ನೆ 4. ಕನಸುಗಳನ್ನು ನನಸಾಗಿಸಲು ಯಾವ ಸಣ್ಣ ಅಭ್ಯಾಸ ಸಹಾಯ ಮಾಡುತ್ತದೆ?
ಉತ್ತರ: ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳನ್ನು ಓದುವುದು, ಇಂದು ಶ್ರೇಷ್ಠರು ಮತ್ತು ಯಶಸ್ವಿಯಾಗಿರುವವರು ಒಂದು ಕಾಲದಲ್ಲಿ ಸಾಮಾನ್ಯ ಪರಿಸ್ಥಿತಿಯಲ್ಲಿದ್ದರು
ಪ್ರಶ್ನೆ 5. ಕೆಲವೊಮ್ಮೆ ಶಿಕ್ಷಕರ ಬೋಧನಾ ವೇಗಕ್ಕೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ
ಉತ್ತರ: ಶಿಕ್ಷಕರು ಯಾವಾಗಲೂ ತಮ್ಮ ವಿದ್ಯಾರ್ಥಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು, ನಮ್ಮ ಗುರಿಗಳು ನಮ್ಮ ವ್ಯಾಪ್ತಿಯಲ್ಲಿರಬೇಕು, ಆದರೆ ಸ್ವಲ್ಪ ಪ್ರಯತ್ನದ ಅಗತ್ಯವಿದೆ, ಗುರಿಯು ನಾವು ನಿರುತ್ಸಾಹಗೊಳ್ಳುವಷ್ಟು ದೂರವಿರಬಾರದು.
ಚೀಪ್ ಆಗಿ ಸಿಗುತ್ತೆ ಅಂತ ಸಮಯ ವೇಸ್ಟ್ ಮಾಡಬೇಡಿ
ಇನ್ನು ಇದೇ ಸಮಯದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ. ಸಮಯದ ಮಹತ್ವವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಭಾರತೀಯ ಪ್ರಮಾಣಿತ ಸಮಯದ ಬಗ್ಗೆ ಯೋಚಿಸುವಲ್ಲಿ ಬದಲಾವಣೆ ತರಬೇಕೆಂದು ಕರೆ ನೀಡಿದರು. ವಿದೇಶಿ ಸರಕುಗಳ ಬಗ್ಗೆ ಚರ್ಚಿಸುತ್ತಾ, ಪ್ರಧಾನಿ ಮೋದಿ, ನಮ್ಮ ದೈನಂದಿನ ಜೀವನದಲ್ಲಿ ನಾವು ಬಳಸುವ ಅನೇಕ ವಸ್ತುಗಳು ವಿದೇಶಗಳಲ್ಲಿ ತಯಾರಾಗುತ್ತವೆ ಎಂದು ಹೇಳಿದರು. ಭಾರತೀಯ ಉತ್ಪನ್ನಗಳನ್ನು ಕ್ರಮೇಣ ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಾವು ನಮ್ಮ ಸ್ವಂತ ಉತ್ಪನ್ನಗಳನ್ನು ನಂಬಿದಾಗ ಮಾತ್ರ ಜಗತ್ತು ಅವುಗಳನ್ನು ಗೌರವಿಸುತ್ತದೆ ಎಂದು ಅವರು ಒತ್ತಿ ಹೇಳಿದರು.


