ಸಿದ್ದರಾಮಯ್ಯ ಕಾರಿನಲ್ಲಿ ಗೊಂಬೆ ಪತ್ತೆ

Public TV
1 Min Read
SIDDU CAR copy

ದಾವಣಗೆರೆ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಸಿದ್ದರಾಮಯ್ಯ ದಾವಣಗೆರೆಗೆ ಆಗಮಿಸುತ್ತಿದ್ದು, ಸಿಬ್ಬಂದಿ ಹೆಲಿಪ್ಯಾಡ್ ಮತ್ತು ಸಿದ್ದರಾಮಯ್ಯ ಪ್ರಯಾಣ ಮಾಡುವ ಕಾರು ತಪಾಸಣೆ ಮಾಡಿದ್ದಾರೆ.

ತಪಾಸಣೆಯ ವೇಳೆ ಸಿದ್ದರಾಮಯ್ಯ ಕಾರಿನಲ್ಲಿ ಒಂದು ಸಣ್ಣ ಆಟ ಸಾಮಾನಿನ ಗೊಂಬೆ ಪತ್ತೆಯಾಗಿದೆ. ಅದನ್ನು ಸಿಬ್ಬಂದಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

vlcsnap 2019 04 20 11h35m44s096

ಸಿದ್ದರಾಮಯ್ಯ ದಾವಣಗೆರೆ ಲೋಕಸಭಾ ಅಭ್ಯರ್ಥಿ ಹೆಚ್.ಬಿ ಮಂಜಪ್ಪರ ಪರ ಮತಯಾಚಿಸಲಿದ್ದಾರೆ. ಮಧ್ಯಾಹ್ನದ ವೇಳೆಗೆ ದಾವಣಗೆರೆ ತಾಲೂಕಿನ ತ್ಯಾವಣಗಿ, ಉಚ್ಚಂಗಿದುರ್ಗದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡಲಿದ್ದಾರೆ.

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಸಿದ್ದೇಶ್ವರ್ ಪರ ತೇಜಸ್ವಿ ಸೂರ್ಯ ಪ್ರಚಾರ ಮಾಡಲಿದ್ದಾರೆ. ಚನ್ನಗಿರಿ ಹಾಗೂ ಹರಿಹರದಲ್ಲಿ ರೋಡ್ ಶೋ ಮೂಲಕ ತೇಜಸ್ವಿ ಸೂರ್ಯ ಮತಯಾಚನೆ ಮಾಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಎರಡೇ ದಿನ ಬಾಕಿ ಇದ್ದು, ರಾಜಕೀಯ ನಾಯಕರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *