ಹಾಸನ: ನವಜಾತ ಶಿಶುವಿನ ದೇಹವನ್ನು ನಾಯಿಗಳು ಕಿತ್ತು ತಿಂದಿರುವ ಮನಕಲಕುವ ಘಟನೆ ಹಾಸನ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ನಡೆದಿದೆ.
ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪ ನಾಯಿಗಳು ತಿಂದಿರುವ ರುಂಡವಿಲ್ಲದ ಮಗು ಪತ್ತೆಯಾಗಿದೆ. ಇದನ್ನು ಗಮನಿಸಿದ ಸಾರ್ವಜನಿಕರು ತಕ್ಷಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಮೃತಮಗುವಿನ ದೇಹವನ್ನು ವಶಕ್ಕೆ ಪಡೆದಿದ್ದಾರೆ.
ಮಗು ಯಾರದ್ದು, ಇಲ್ಲಿ ಹೇಗೆ ಬಂದು ಬಿದ್ದಿದೆ ಎಂಬುದು ತಿಳಿದು ಬಂದಿಲ್ಲ. ಯಾರೋ ಮಗುವನ್ನು ಹೆತ್ತು ಬಿಸಾಡಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಇದರಿಂದ ನಾಯಿಗಳು ಕಿತ್ತು ತಿಂದು ಕೊಂದು ಹಾಕಿರಬಹುದು ಎನ್ನಲಾಗಿದೆ. ಇದನ್ನೂ ಓದಿ: ಕಾಡು ಪ್ರಾಣಿಗಳಿಗಿಟ್ಟ ನಾಡಬಾಂಬ್ ಸ್ಫೋಟ- ಬಾಲಕಿ ಸಾವು
ಈ ಬಗ್ಗೆ ತನಿಖೆ ನಡೆಸಿ ಮಗು ಯಾರದ್ದು ಎಂದು ಪತ್ತೆ ಹಚ್ಚಬೇಕು. ಇದರಲ್ಲಿ ಹೆತ್ತವರ ತಪ್ಪಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಹಾಸನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಟಾಟಾ ಏಸ್ ವಾಹನಕ್ಕೆ ಗುದ್ದಿದ ಅಪರಿಚಿತ ವಾಹನ – 2 ಸಾವು, 10 ಮಂದಿಗೆ ಗಾಯ