ಬೆಂಗಳೂರು: ಕನಸಿನ ಹುದ್ದೆ ಒಲಿದು ಬರುತ್ತಿದ್ದರೂ, ಏನೋ ಅಸಹನೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರನ್ನ ಕಾಡತೊಡಗಿದೆ. ತಮ್ಮ ದಶಕದ ಕನಸು ನನಸಾಗುವ ಹಂತದಲ್ಲಿ ಆ ಒಂದು ಕಾರಣಕ್ಕೆ ಬೇಸರಗೊಂಡಿದ್ದಾರೆ. ಬೇರೆಲ್ಲಾ ವಿಷಯದಲ್ಲಿ ಹೈಕಮಾಂಡ್ ನಿಲುವಿಗೆ ಓಕೆ ಅಂದ ಟ್ರಬಲ್ ಶೂಟರ್ ಕಾರ್ಯಧ್ಯಕ್ಷರ ನೇಮಕಕ್ಕೆ ನನ್ನ ಸಮ್ಮತಿ ಇಲ್ಲಾ ಎಂದು ಉಲ್ಟಾ ಹೊಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಪಟ್ಟಾಭಿಷೇಕ ಖಚಿತವಾದರು. ಅಧ್ಯಕ್ಷರ ಜೊತೆಗೆ ಕಾರ್ಯಾಧ್ಯಕ್ಷರ ನೇಮಕಕ್ಕೆ ಡಿಕೆಶಿಗೆ ಒಲವಿಲ್ಲ. ಕೆಲವು ನಾಯಕರುಗಳು ಒಂದೇ ಕಾರ್ಯಾಧ್ಯಕ್ಷ ಹುದ್ದೆ ಅಂದರೆ ಮತ್ತೆ ಕೆಲವು ನಾಯಕರುಗಳು ಪ್ರದೇಶವಾರು ಹಾಗೂ ಜಾತಿ ಸಮೀಕರಣ ಸರಿದೂಗಿಸಲು 4 ಕಾರ್ಯಾಧ್ಯಕ್ಷ ಹುದ್ದೆ ಬೇಕು ಎನ್ನುತ್ತಿದ್ದಾರೆ.
ಅಧ್ಯಕ್ಷರಾದ ಮೇಲೆ ಪಕ್ಷದ ಮೇಲೆ ಸಂಪೂರ್ಣ ಹಿಡಿತ ಬೇಕು ಅನ್ನೋ ಹಠಕ್ಕೆ ಬಿದ್ದ ಡಿಕೆಶಿ ಮಾತ್ರ ಕಾರ್ಯಾಧ್ಯಕ್ಷ ಸ್ಥಾನ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಕೊನೆ ಗಳಿಗೆಯಲ್ಲಿ ಡಿ.ಕೆ.ಶಿವಕುಮಾರ್ ಹಠಕ್ಕೆ ಹೈಕಮಾಂಡ್ ಮಣಿಯುತ್ತಾ ಅಥವಾ ಕಾರ್ಯಾಧ್ಯಕ್ಷರ ನೇಮಕಾತಿ ಮಾಡಿ ಹೈಕಮಾಂಡ್ ಡಿಕೆಶಿ ಕೈ ಕಟ್ಟಿ ಹಾಕುತ್ತ ಅನ್ನೋದೆ ಸದ್ಯದ ಕುತೂಹಲ.