ಸಚಿವ ಡಿಕೆಶಿ ಹೆಬ್ಬಾಳ್ಕರ್ ಮಧ್ಯೆ ಚೀಟಿ ವ್ಯವಹಾರ – ವಿಡಿಯೋ

Public TV
2 Min Read
dk Shivakumar Lakshmi hebbalkar 5

ಬೆಂಗಳೂರು: ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಳು ಮಂಡಿಸಿದ್ದ ವಿಶ್ವಾತಮತಯಾಚನೆ ಕುರಿತ ಚರ್ಚೆ ಇಂದು ಮುಂದುವರಿದಿದ್ದು, ಈ ಸಂದರ್ಭದಲ್ಲಿ ಸಚಿವ ಡಿಕೆ ಶಿವಕುಮಾರ್ ಹಾಗೂ ಶಾಸಕಿ ಲಕ್ಷ್ಮಿ ನಡುವಿನ ಚೀಟಿ ಮಾತುಕತೆ ಗಮನ ಸೆಳೆದಿತ್ತು.

ಭೋಜನ ವಿರಾಮ ಹಿನ್ನೆಲೆಯಲ್ಲಿ ಸ್ಪೀಕರ್ ಸದನವನ್ನು 3:30ಕ್ಕೆ ಮುಂದೂಡಿದ್ದರು. ಈ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಎಲ್ಲಿಗೂ ತೆರಳದೆ ಕುಳಿತು ಒಬ್ಬರೆ ಕೆಲ ಅಂಶಗಳನ್ನು ನೋಟ್ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಅವರ ಬಳಿ ಬಂದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಒಂದು ಚೀಟಿ ನೀಡಿ ಅದರಲ್ಲಿದ್ದ ಅಂಶಗಳನ್ನು ವಿವರಿಸಿದ್ದರು. ಚೀಟಿಯನ್ನು ತೆಗೆದುಕೊಂಡ ಶಿವಕುಮಾರ್ ಅದರಲ್ಲಿ ಮತ್ತೆ ಕೆಲ ಅಂಶಗಳನ್ನು ಬರೆದರು.

dk Shivakumar Lakshmi hebbalkar 3 copy

ಆ ಹಂತದಲ್ಲಿ ಅಲ್ಲಿಂದ ತೆರಳುತ್ತಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ವಾಪಸ್ ಕರೆದ ಶಿವಕುಮಾರ್ ಅವರು ಎರಡು ಚೀಟಿಗಳನ್ನ ಕೈಗಿಟ್ಟರು. ಚೀಟಿಗಳನ್ನು ಪಡೆದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಅವುಗಳನ್ನು ಗ್ಯಾಲರಿ ಬಳಿ ಇದ್ದ ವ್ಯಕ್ತಿಗೆ ನೀಡಿದ ಕೆಲ ವಿವರಣೆಗಳನ್ನು ನೀಡಿ ಕಳುಹಿಸಿದರು.

ಸಾಮಾನ್ಯವಾಗಿ ಸದನದಲ್ಲಿ ಕೆಲ ಪ್ರಮುಖ ಪ್ರಮುಖ ವಿಚಾರಗಳನ್ನು ಚೀಟಿಯಲ್ಲಿ ಬರೆದುಕೊಟ್ಟು ಮಾಹಿತಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದೆ. ಈ ಹಿಂದೆಯೂ ಸದನ ಸದಸ್ಯರ ನಡುವೆ ನಡೆದ ಕೆಲ ಚೀಟಿ ಮಾತುಕತೆಗಳು ನೋಡುಗರ ಗಮನ ಸೆಳೆದಿತ್ತು.

dk Shivakumar Lakshmi hebbalkar 2 copy

ಮಧ್ಯಾಹ್ನದ ವಿರಾಮದ ಬಳಿಕ ಆರಂಭವಾದ ಚರ್ಚೆಯಲ್ಲಿ ಭಾರೀ ಆಡಳಿತ ಪಕ್ಷ ಹಾಗೂ ಮೈತ್ರಿ ನಾಯಕರ ನಡುವಿನ ವಾಕ್ ಸಮಯ ಜೋರಾಗಿತ್ತು. ಇದಕ್ಕೂ ಮುನ್ನ ಸದನದ ಹೊರಗೆ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ವಿಶ್ವಾಸ ಮತಯಾಚನೆ ನಾಳೆಗೆ ಮುಂದೂಡುವ ಕುರಿತು ಸುಳಿವು ನೀಡಿದರು. ಸದನದಲ್ಲಿ ಸ್ಪೀಕರ್ ಅವರು ಹೇಳಿದಂತೆ ನಡೆಯುತ್ತಿದೆ. ನಾನು, ಸಿಎಂ ಇಬ್ಬರೂ ಸೋಮವಾರ ವಿಶ್ವಾಸಮತ ನಡೆಸೋದಾಗಿ ಹೇಳಿದ್ವಿ. ಆದರೆ ಈ ನಡುವೆ ಸುಪ್ರೀಂಕೋರ್ಟ್ ನಲ್ಲಿ ಏನೆಲ್ಲಾ ಬೆಳವಣಿಗೆಯಾಗಿದೆ ನೋಡಬೇಕಿದೆ. ಕೆಪಿಜೆಪಿಯ ಶಂಕರ್ ಮತ್ತು ನಾಗೇಶ್ ಸುಪ್ರೀಂ ಕೋರ್ಟಿಗೆ ಹೋಗಿದ್ದಾರೆ. ನಾಳೆ ವಿಚಾರಣೆಗೆ ಬರಬಹುದು, ಅಲ್ಲದೇ ವಿಪ್ ವಿಚಾರವಾಗಿ ಗೊಂದಲವಿದೆ. ಇದು ಕೂಡ ನಾಳೆ ವಿಚಾರಣೆಗೆ ಬರಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವಿಶ್ವಾಸಮತ ಇಂದು ಸಾಧ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *