ಬೆಂಗಳೂರು: ಸಿಎಂ ಕುರ್ಚಿಯ ಕನಸು ಕಾಣುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar,) ಹೆಸರು ಈಗ ಎರಡು ಕ್ಷೇತ್ರಗಳಲ್ಲಿ ಕೇಳಿ ಬರುತ್ತಿದೆ. ನಿರ್ಣಾಯಕ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಅಂತಹ ರಿಸ್ಕ್ ತಗೆದುಕೊಳ್ತಾರಾ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕನಕಪುರ ಬಿಟ್ಟು ಮದ್ದೂರಿಗೆ (Maddur) ಹೋಗುವ ರಿಸ್ಕನ್ನ ಕೆಪಿಸಿಸಿ (KPCC) ಅಧ್ಯಕ್ಷರು ತಗೆದುಕೊಳ್ತಾರಾ? ಕನಕಪುರ ಬಿಟ್ಟು ಬೇರೆ ಕಡೆಯಿಂದ ಸ್ಪರ್ಧಿಸುವ ಡಿಕೆಶಿ ಕುರಿತ ವದಂತಿ ಕೇವಲ ವದಂತಿ ಅಷ್ಟೇನಾ? ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಇದನ್ನೂ ಓದಿ: ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ
ಮದ್ದೂರಿನಿಂದ (Maddur Assembly Constituency) ಸ್ಪರ್ಧೆ ಮಾಡಬೇಕು ಎಂಬ ಒತ್ತಾಯವನ್ನ ಡಿಕೆಶಿ ಬೆಂಬಲಿಗರು ಹೇರತೊಡಗಿದ್ದಾರೆ. ಡಿಕೆಶಿ ಮದ್ದೂರಿನಿಂದ ಸ್ಪರ್ಧೆ ಮಾಡ್ತಾರೆ ಅನ್ನೋದು ಕೇವಲ ವದಂತಿ ಅಷ್ಟೆ. ಕನಕಪುರ ಬಿಟ್ಟು ಬೇರೆ ಕಡೆಯಿಂದ ಡಿಕೆಶಿ ಸ್ಪರ್ಧೆ ಕೇವಲ ವದಂತಿ ಅಷ್ಟೆ. ಬೇರೇನೂ ಇಲ್ಲಾ ಎನ್ನುತ್ತಿದೆ ಆಪ್ತ ವಲಯ. ಜೊತೆಗೆ ತವರು ಕ್ಷೇತ್ರ ಬಿಟ್ಟು ಡಿಕೆಶಿ ಹೊರ ಹೋಗುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ `ಬಾ ನಲ್ಲೆ ಮಧುಚಂದ್ರಕೆ’ ಸಿನಿಮಾ ಶೈಲಿಯಲ್ಲಿ ಮರ್ಡರ್ – ಫ್ಲೈಟ್ ಟಿಕೆಟ್ ಬುಕ್ ಮಾಡಿ ಸಿಕ್ಕಿಬಿದ್ದ ಆರೋಪಿ!
ಈ ಬಾರಿ ಸಿಎಂ ಕುರ್ಚಿ ಮೇಲೆ ಡಿಕೆಶಿ ಕಣ್ಣಿಟ್ಟು ಕುಳಿತಿದ್ದಾರೆ. ಇಂತಹ ನಿರ್ಣಾಯಕ ಹಂತದಲ್ಲಿ ಡಿಕೆಶಿ ಕನಕಪುರದಿಂದ ಹೊರ ಹೋಗುವ ರಿಸ್ಕ್ ತಗೆದುಕೊಳ್ಳುವುದು ಅನುಮಾನ. ಮದ್ದೂರು ಸ್ಪರ್ಧೆ ಡಿಕೆಶಿ ಬೆಂಬಲಿಗರ ಕೂಗೇ ಹೊರತು, ಅದಕ್ಕೆ ಡಿಕೆಶಿ ಸಮ್ಮತಿಯಿಲ್ಲ ಅನ್ನೋದೆ ಸಧ್ಯದ ಬೆಳವಣಿಗೆ ಎನ್ನಲಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k