ಮಲಯಾಳನಲ್ಲಿ (Malyalam) ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ವೇಣುಗೋಪನ್ (Venugopan) ಇಂದು (ಜೂನ್ 21) ಬೆಳಗ್ಗೆ ನಿಧನರಾಗಿದ್ದಾರೆ. ಅವರು ಸಾವನ್ನಪ್ಪಿದ ಸುದ್ದಿ ಕೇಳಿ ಫ್ಯಾನ್ಸ್ಗೆ ಆಘಾತವಾಗಿದೆ. ಇದನ್ನೂ ಓದಿ:ದರ್ಶನ್ ಪ್ರಕರಣದ ಬಗ್ಗೆ ಶ್ರೀಲೀಲಾ ಹೇಳಿದ್ದೇನು?
ಕೇರಳದ ಚೇರ್ತಲದಲ್ಲಿರುವ ತಮ್ಮ ನಿವಾಸದಲ್ಲಿ ವೇಣುಗೋಪನ್ ವಿಧಿವಶರಾಗಿದ್ದಾರೆ. ಅವರಿಗೆ ಸಾವಿನ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಸದ್ಯ ಅವರ ಸಾವಿನ ಸುದ್ದಿಯನ್ನು ನಟ ಅನೂಪ್ ಮೆನನ್ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ. 67ನೇ ವಯಸ್ಸಿನ ವೇಣುಗೋಪನ್ ನಿಧನಕ್ಕೆ ಮಾಲಿವುಡ್ ನಟ, ನಟಿಯರು ಸಂತಾಪ ಸೂಚಿಸಿದ್ದಾರೆ.
ಮಲಯಾಳಂ ನಟ ಜಯರಾಮ್ ನಟನೆಯ ‘ಶಾರ್ಜಾ ಟು ಶಾರ್ಜಾ’ ಸಿನಿಮಾಗೆ ವೇಣು ನಿರ್ದೇಶನ ಮಾಡಿದ್ದರು. ಸಾಕಷ್ಟು ಸಿನಿಮಾಗಳಿಗೆ ಡೈರೆಕ್ಷನ್ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.