Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ಕಾವೇರಿ ಹೋರಾಟ ಮತ್ತು ಚಿತ್ರೋದ್ಯಮದ ಸಂಕಟ ಬಿಚ್ಚಿಟ್ಟ ನಿರ್ದೇಶಕ ಶಶಾಂಕ್

Public TV
Last updated: September 27, 2023 11:45 am
Public TV
Share
4 Min Read
shashank director
SHARE

ಕಾವೇರಿ (Cauvery) ಹೋರಾಟಕ್ಕೆ ಚಿತ್ರೋದ್ಯಮದವರು ಎಲ್ಲಿ ಎಂದು ಕೇಳುವ ಕೆಲ ಹೋರಾಟಗಾರರಿಗೆ ಚಿತ್ರೋದ್ಯಮಕ್ಕಾಗಿ ನಿಮ್ಮ ಕೊಡುಕೊಳ್ಳುವಿಕೆ ಏನು ಎಂದು ನಟ ದರ್ಶನ್ (Darshan) ಕೇಳಿಸಿದ್ದರು. ಪರಭಾಷಾ ಚಿತ್ರಗಳನ್ನು ಗೆಲ್ಲಿಸುತ್ತಿರುವ ಕುರಿತು ಅವರು ಅಸಮಾಧಾನ ವ್ಯಕ್ತ ಪಡಿಸಿದ್ದರು. ದರ್ಶನ್ ಈ ನಡೆಯನ್ನು ಕನ್ನಡದ ಹೆಸರಾಂತ ನಿರ್ದೇಶಕ ಶಶಾಂಕ್ (Shashank) ಬೆಂಬಲಿಸಿದ್ದರು. ಈ ಕುರಿತು ಶಶಾಂಕ್ ಮತ್ತಷ್ಟು ವಿವರಗಳನ್ನು ಅಕ್ಷರ ರೂಪದಲ್ಲಿ ಬಿಚ್ಚಿಟ್ಟಿದ್ದಾರೆ. ಆ ಬರಹವಿದು.

mysuru darshan

ಅನಾದಿ ಕಾಲದಿಂದಲೂ ಕನ್ನಡ ಚಿತ್ರ ನಿರ್ಮಾಪಕರು, ನಿರ್ದೇಶಕರು ಮತ್ತು ಸೂಪರ್ ಸ್ಟಾರ್ ಗಳಾಗುವ ಮುಂಚೆ ಹೊಸಬರಾಗಿದ್ದ ನಟರು ಬಹಿರಂಗವಾಗಿ ಹೇಳಿದರೆ ಏನಾಗುತ್ತದೋ ಎಂಬ ಭಯದಲ್ಲಿ, ಒಳಗೇ ಅನುಭವಿಸುತ್ತಿದ್ದ ಒಂದು ಸಂಕಟದ ವಿಚಾರವನ್ನು ದರ್ಶನ್ ಸರ್ ಮೊನ್ನೆ ಧೈರ್ಯವಾಗಿ ಹೇಳಿದ್ದಾರೆ ಮತ್ತು ನಾನು ಅದಕ್ಕೆ ಬೆಂಬಲ ವ್ಯಕ್ತಪಡಿಸಿದ್ದೇನೆ. ನಾನು ಇದುವರೆಗೂ ಜನರನ್ನು ಮೆಚ್ಚಿಸಲು ಸಿನಿಮಾ ಮಾಡಿದ್ದೇನೆಯೇ ಹೊರತು, ಯಾವ ನಾಯಕ ನಟರನ್ನು ಮೆಚ್ಚಿಸಲು ಅಲ್ಲ ಎಂಬುದನ್ನು ನನ್ನ ಚಿತ್ರಗಳೇ ಹೇಳುತ್ತವೆ.

Shashank

ದರ್ಶನ್ ಸರ್ ಮಾತಿಗೆ ನಾನು ಬೆಂಬಲ ಸೂಚಿಸಿದ್ದು ಒಬ್ಬ ಕನ್ನಡಿಗನಾಗಿ ಮತ್ತು ಕನ್ನಡ ಸಿನಿಮಾ ಪ್ರೇಮಿಯಾಗಿ ಅಷ್ಟೇ.  ಎಂತದೇ ಪರಿಸ್ಥಿತಿ ಬಂದರೂ, ಎಷ್ಟೇ ಆಮಿಷಗಳಿದ್ದರೂ, ಇದುವರೆಗೂ ರೀಮೇಕ್ ಚಿತ್ರಗಳನ್ನು ಮಾಡದಿರುವುದು ಮತ್ತು ಪ್ರತಿ ಚಿತ್ರದಲ್ಲೂ ಕನ್ನಡದ ಕಲಾವಿದರಿಗೆ ಪ್ರಾಮುಖ್ಯತೆ ನೀಡಿರುವುದೇ, ಕನ್ನಡ ಭಾಷೆಯ ಮೇಲಿನ ನನ್ನ ಬದ್ಧತೆಗೆ ಸಾಕ್ಷಿ.

Shashank

ನನ್ನ ನಿರ್ದೇಶನದ  ‘ಕೌಸಲ್ಯಾ ಸುಪ್ರಜಾ ರಾಮ’ ಸೇರಿದಂತೆ ನನ್ನ ಬಹುತೇಕ ಚಿತ್ರಗಳು ಗೆಲ್ಲಲು ಕಾರಣ, ನಿಜವಾದ ಕನ್ನಡ ಸಿನಿಮಾ ಪ್ರೇಮಿಗಳೇ. ಅವರಿಗೆ ನಾನು ಸದಾ ಚಿರಋಣಿ. ಆದರೆ, ಅಂಥವರ ಸಂಖ್ಯೆ ತುಂಬಾ ಕಡಿಮೆ ಇದೆ ಎನ್ನುವುದು ದುಃಖದ ಸಂಗತಿ. ಒಟ್ಟಾರೆ ಕನ್ನಡ ಚಿತ್ರರಂಗದ ಆರ್ಥಿಕತೆಯ ಅಂಕಿ-ಅಂಶವೇ ಅದಕ್ಕೆ ಸಾಕ್ಷಿ. ಆದರೆ, ಅದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ವಿಚಾರ. ಕಹಿ ಸತ್ಯವೇನೆಂದರೆ, ಈ ವರ್ಷದಲ್ಲಿ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಚಿತ್ರಗಳು ಎನಿಸಿಕೊಂಡ ಡೇರ್ ಡೆವಿಲ್ ಮುಸ್ತಫಾ, ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ, ಕೌಸಲ್ಯಾ ಸುಪ್ರಜಾ ರಾಮ,  ಆಚಾರ್ ಅಂಡ್ ಕೋ,  ಸಪ್ತ ಸಾಗರದಾಚೆ ಎಲ್ಲೋ ಚಿತ್ರಗಳ ಒಟ್ಟು ಕಲೆಕ್ಷನ್ ಒಂದು ತಮಿಳು ಚಿತ್ರದ ಕಲೆಕ್ಷನ್‌ಗೆ ಸಮ. ಐದೂ ಗೆದ್ದ ಚಿತ್ರಗಳೇ. ಆದರೆ, ಇನ್ನೂ ಹೆಚ್ಚಿನ ಗಳಿಕೆಗೆ ಅರ್ಹತೆ ಇದ್ದ ಚಿತ್ರಗಳು.

Kausalya Supraja Rama 2

ನಾವು ಭಾರತೀಯರು, ನಮ್ಮದು ಭಾರತ ಚಿತ್ರರಂಗ, ಈಗ ನಮ್ಮ ಚಿತ್ರಗಳನ್ನು ಬೇರೆ ರಾಜ್ಯದ ಪ್ರೇಕ್ಷಕರು ನೋಡುತ್ತಿದ್ದಾರೆ, ನಾವು ಅವರ ಚಿತ್ರಗಳನ್ನು ನೋಡುವುದು ತಪ್ಪಲ್ಲ ಎಲ್ಲವೂ ನಿಜ. ಆದರೆ ಒಂದು ದೊಡ್ಡ  ವ್ಯತ್ಯಾಸವೇನೆಂದರೆ, ಅವರು ಪರಭಾಷೆಯ ಕೆಲವು ಚಿತ್ರಗಳನ್ನು ಮಾತ್ರ ನೋಡುತ್ತಾರೆ, ತಮ್ಮ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ನೋಡುತ್ತಾರೆ. ಸ್ಟಾರ್ ಸಿನಿಮಾಗಳ ಜೊತೆ ಜೊತೆಗೆ, ಇತರೆ ನಟರ, ಹೊಸಬರ, ಉತ್ತಮ ಕಥಾವಸ್ತುವಿನ  ಚಿತ್ರಗಳನ್ನೂ ದೊಡ್ಡ ಪ್ರಮಾಣದಲ್ಲಿ ನೋಡುತ್ತಾರೆ. ಹಾಗಾಗಿಯೇ, ಆ ಚಿತ್ರರಂಗಗಳ ಆರ್ಥಿಕತೆ ನಮಗಿಂತ 10 ಪಟ್ಟು ಹೆಚ್ಚಾಗಿದೆ. ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾ. ವಾರ್ಷಿಕ ವಹಿವಾಟಿನ ಲೆಕ್ಕದಲ್ಲಿ, ಕರ್ನಾಟಕದಲ್ಲಿ ಕನ್ನಡ ಚಿತ್ರಗಳಿಗಿಂತಲೂ ಪರಭಾಷೆಯ ಚಿತ್ರಗಳ ಗಳಿಕೆಯೇ ಹೆಚ್ಚು.

Kausalya Supraja Rama 2 1

ಕನ್ನಡ ಚಿತ್ರೋದ್ಯಮದ ಸಂಕಟ ಕೇವಲ ಚಿತ್ರಮಂದಿರಕ್ಕಷ್ಟೆ ಸೀಮಿತವಾಗಿಲ್ಲ. OTT ಪ್ಲಾಟ್ ಫಾರ್ಮ್ ಗಳಲ್ಲೂ ಇದೇ ವ್ಯಥೆ. ಎಲ್ಲಾ ಭಾಷೆಯ ಚಿತ್ರಗಳನ್ನು ಕೊಳ್ಳುವ, ಹಾಟ್ ಸ್ಟಾರ್, ಸೋನಿ, ನೆಟ್ ಫ್ಲಿಕ್ಸ್ ನಂತಹ ಪ್ಲಾಟ್ ಫಾರ್ಮ್ ಗಳು, ಕನ್ನಡ ಚಿತ್ರಗಳಿಂದ ವಿಮುಖವಾಗಿರುವುದಕ್ಕೇ, ಕನ್ನಡ ಭಾಷೆಯಲ್ಲಿ ವೆಬ್ ಸೀರೀಸ್ ಗಳು ನಿರ್ಮಾಣವಾಗದಿರುವುದಕ್ಕೆ ಕಾರಣ ಕೂಡ, ಕನ್ನಡ ಪ್ರೇಕ್ಷಕರ ಕೊರತೆ! ಎಲ್ಲಾ ಭಾಷೆಯಲ್ಲೂ  ಚಿತ್ರಗಳನ್ನು ನಿರ್ಮಿಸುವ ದೊಡ್ಡ ದೊಡ್ಡ ಮಲ್ಟಿ ನ್ಯಾಷನಲ್ ಕಂಪನಿಗಳು ಕನ್ನಡದಲ್ಲಿ ಚಿತ್ರ ನಿರ್ಮಿಸಲು ಹಿಂದೇಟು ಹಾಕುವುದಕ್ಕೂ ಇದೇ  ಕಾರಣ.

Kausalya Supraja Rama 1

ಇವೆಲ್ಲವನ್ನು ಅವರು ಸುಮ್ಮನೆ ಹೇಳುವುದಿಲ್ಲ, ಅವರ ಬಳಿ ಇರುವ ಅಂಕಿ-ಅಂಶಗಳ ಆಧಾರದೊಂದಿಗೆ ಹೇಳುತ್ತಾರೆ. ಒಂದು ಊರಿನಲ್ಲಿ ಒಬ್ಬ ಶ್ರೀಮಂತನಿದ್ದರೆ, ಆ ಊರು ಸಮೃದ್ಧವಾಗಿದೆ ಎಂದು ಅರ್ಥವಲ್ಲ, ಒಂದು ಕೆಜಿಎಫ್, ಒಂದು ಕಾಂತಾರ ಕನ್ನಡ ಚಿತ್ರರಂಗಕ್ಕೆ ಅಳತೆ ಗೋಲಾಗಲಾರವು. ಕಾವೇರಿ ಸಮಸ್ಯೆ- ಕನ್ನಡ ಚಿತ್ರೋದ್ಯಮದ ಸಮಸ್ಯೆ ಎರಡೂ  ಬೇರೆ ನಿಜ. ಆದರೆ, ಸಾಮ್ಯತೆ ಇರುವುದು ‘ನಮ್ಮದು’ ಎಂಬ ಭಾವದಲ್ಲಿ.. ಕಾವೇರಿ ನಮ್ಮದು, ನಮಗೇ ಮೊದಲ ಆದ್ಯತೆ ನೀಡಬೇಕು ಎಂಬುದು ಎಷ್ಟು ನ್ಯಾಯವೋ, ಕನ್ನಡ ಭಾಷೆಯ ಚಿತ್ರಕ್ಕೇ ಮೊದಲ ಆದ್ಯತೆ ನೀಡಿ ಎಂಬ ಮನವಿಯು ಅಷ್ಟೇ ನ್ಯಾಯ. ಕಾವೇರಿ ನೀರನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ರೈತರ ಕುಟುಂಬಗಳಂತೆ, ಕನ್ನಡ ಚಿತ್ರೋದ್ಯಮವನ್ನೇ ನಂಬಿ ಬದುಕುತ್ತಿರುವ ಲಕ್ಷಾಂತರ ಕುಟುಂಬಗಳಿವೆ. ಸಮಸ್ಯೆಗಳು ಎದುರಾದಾಗ, ಪರಸ್ಪರರ ನೆರವಿಗೆ ನಿಲ್ಲುವುದೇ ನಿಜವಾದ ಮಾನವೀಯತೆ.

Jawan 2

ನಮ್ಮ ಚಿತ್ರಗಳನ್ನು ಪ್ರೇಕ್ಷಕರಾಗಿ ನೀವು ವಿಮರ್ಶೆ, ಟೀಕೆ ಮಾಡಿದಾಗ, ನಾವು ಅದನ್ನು ಪಾಸಿಟಿವ್ ಆಗಿ ತೆಗೆದುಕೊಂಡು ಮುಂದಿನ ಚಿತ್ರಗಳಲ್ಲಿ ಅದನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲವೆ? ಹಾಗೇ, ನಿಮ್ಮ ತಪ್ಪುಗಳನ್ನು ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ತೋರಿಸಿದಾಗ, ನೀವೂ ಅದನ್ನು ಪಾಸಿಟಿವ್ ಆಗಿ ತೆಗೆದುಕೊಳ್ಳುವುದು ನ್ಯಾಯವಲ್ಲವೇ? ವಿಮರ್ಶೆ- ಪರಾಮರ್ಶೆಗಳು ಎರಡೂ ಕಡೆಯಿಂದ ಇದ್ದರಷ್ಟೇ, ಆರೋಗ್ಯಕರವಾದ ವಾತಾವರಣ ನಿರ್ಮಾಣವಾಗುತ್ತದೆ ಎಂಬುದು ನನ್ನ ಅನಿಸಿಕೆ.

ಕನ್ನಡ ಚಿತ್ರಗಳನ್ನು ನೋಡುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಇರಬಹುದು ಆದರೆ, ನಾವೆಲ್ಲರೂ ಇಂದು ನೆಲೆ ಕಂಡಿರುವುದೇ ಅವರ ಪ್ರೀತಿ ಮತ್ತು ಅಭಿಮಾನದಿಂದ. ಅಂತಹ ಪ್ರೇಕ್ಷಕರಿಗಾಗಿ ನಮ್ಮ ಕಾಯಕ ಮುಂದುವರೆಯುತ್ತದೆ. ಸತ್ಯ ಹೇಳಿದರೂ ಅದನ್ನು ಒಪ್ಪದೇ, ಪರಾಮರ್ಶಿಸದೆ, ಆತ್ಮಾವಲೋಕನ ಮಾಡಿಕೊಳ್ಳದೆ, ಕಾಲು ಎಳೆಯುವುದನ್ನೇ ಕಾಯಕ ಮಾಡಿಕೊಳ್ಳುವ ಜನರಿಗೆ ತಾಯಿ ಭುವನೇಶ್ವರಿ ಸದ್ಬುದ್ಧಿ ನೀಡಲಿ.  ಏನೇ ಸಂಕಟಗಳಿದ್ದರೂ,ಕನ್ನಡ ನಾಡಿನ ಸಮಸ್ಯೆಗಳಿಗೆ ಕನ್ನಡ ಚಿತ್ರರಂಗ ಸದಾ ಧ್ವನಿಯಾಗಿದೆ, ಮುಂದೆಯೂ ಆಗಿರುತ್ತದೆ.

Web Stories

ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!..
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್
ನವಿಲಿನಂತೆ ಕಂಗೊಳಿಸಿದ ಮಲೈಕಾ
ನವಿಲಿನಂತೆ ಕಂಗೊಳಿಸಿದ ಮಲೈಕಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಬೋಲ್ಡ್ ಅವತಾರ ತಾಳಿದ ಪ್ರಣೀತಾ
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್


follow icon

TAGGED:cauverydarshansandalwoodShashankಕಾವೇರಿ ಹೋರಾಟದರ್ಶನ್ಶಶಾಂಕ್ಸ್ಯಾಂಡಲ್ ವುಡ್
Share This Article
Facebook Whatsapp Whatsapp Telegram

You Might Also Like

Iran
Bengaluru City

ಇರಾನ್‌ನಲ್ಲಿ ಸಿಲುಕಿದ್ದಾರೆ ಕರ್ನಾಟಕದ 9 ವಿದ್ಯಾರ್ಥಿಗಳು – ಭಾರತಕ್ಕೆ ಕರೆತರುವಂತೆ ಮನವಿ

Public TV
By Public TV
1 hour ago
flap adjustment failure British Airways flight from London to Chennai returns to Heathrow Airport
Latest

ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್‌ವೇಸ್‌ ಡ್ರೀಮ್‌ಲೈನರ್‌ನಲ್ಲಿ ತಾಂತ್ರಿಕ ದೋಷ – ಮರಳಿ ಲಂಡನ್‌ನಲ್ಲಿ ಲ್ಯಾಂಡಿಂಗ್‌!

Public TV
By Public TV
1 hour ago
How 2 Brothers Duped 70000 People Of Rs 2700 Crore Over Smart City
Crime

ಸ್ಮಾರ್ಟ್‌ಸಿಟಿ ಹೆಸರಲ್ಲಿ 70 ಸಾವಿರ ಜನರಿಗೆ 2,676 ಕೋಟಿ ನಾಮ – ಕಳ್ಳ ಸಹೋದರರು ಅರೆಸ್ಟ್‌!

Public TV
By Public TV
1 hour ago
Karnataka placed first in country for highest wind power capacity Karnataka overtakes Gujarat to take first place Pralhad Joshi KJ George 2
Bengaluru City

ಅಧಿಕ ಪವನ ವಿದ್ಯುತ್‌ ಸಾಮರ್ಥ್ಯ – ಗುಜರಾತ್‌ ಹಿಂದಿಕ್ಕಿ ಕರ್ನಾಟಕಕ್ಕೆ ಪ್ರಥಮ ಸ್ಥಾನ

Public TV
By Public TV
2 hours ago
rain weather
Districts

ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ – ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಣೆ

Public TV
By Public TV
3 hours ago
AI ಚಿತ್ರ
Chikkamagaluru

ಭಾರೀ ಮಳೆ – ಚಿಕ್ಕಮಗಳೂರಿನ 6 ತಾಲೂಕುಗಳ ಶಾಲೆಗಳಿಗೆ ಜೂ.16ರಂದು ರಜೆ ಘೋಷಣೆ

Public TV
By Public TV
3 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್
Welcome Back!

Sign in to your account

Username or Email Address
Password

Lost your password?