Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Cinema

ನೆಲದ ಘಮಲಿನ ಕಥೆಯೊಂದಿಗೆ ‘ಕೆರೆಬೇಟೆ’ಗಿಳಿದ ಡೈರೆಕ್ಟರ್ ರಾಜ್ ಗುರು

Public TV
Last updated: March 14, 2024 5:07 pm
Public TV
Share
2 Min Read
Kerebete 2 4
SHARE

ಒಂದು ಸಿನಿಮಾ ಬಿಡುಗಡೆಯ ಅಂಚಿಗೆ ಬಂದು ನಿಂತಿದೆಯೆಂದರೆ ಅದರ ಹಿಂದೆ ಹತ್ತಾರು ಜನರ ಶ್ರಮ, ಕನಸು, ಶ್ರದ್ಧೆಗಳಿರುತ್ತವೆ. ವಾರವೊಂದಕ್ಕೆ ದಂಡಿ ದಂಡಿ ಸಿನಿಮಾಗಳು ತೆರೆಗಾಣುತ್ತಿರುವ ಈ ಹೊತ್ತಿನಲ್ಲಿ ಅದರ ಭಾಗವಾಗಿರುವವರ ಖಾಸಗೀ ಕಥೆ ಕೇಳಲು, ಬೆನ್ತಟ್ಟಿ ಪ್ರೋತ್ಸಾಹಿಸಲು ಯಾರಿಗೂ ಪುರಸೊತ್ತಿಲ್ಲ. ಸೋಲು ಗೆಲುವುಗಳಾಚೆಗೆ ಒಂದು ಸಿನಿಮಾದ ಹಿಂದೆ ಹತ್ತಾರು ಮನಮುಟ್ಟುವ ಕಥೆಗಳಿರುತ್ತವೆ. ಕಡುಗಷ್ಟ ಸುತ್ತಿಕೊಂಡರೂ ಇಡೀ ಬದುಕನ್ನು ಕನಸಿಗೋಸ್ಕರವೇ ಪಣಕ್ಕಿಟ್ಟಂತೆ ಬದುಕುವ ಅಪರೂಪದ ವ್ಯಕ್ತಿತ್ವಗಳೂ ಸಿನಿಮಾಗಳ ಹಿನ್ನೆಲೆಯಲ್ಲಿರುತ್ತವೆ. ಅಂಥಾದ್ದೊಂದು ಸಿನಿಮಾ ವ್ಯಾಮೋಹವಿಟ್ಟುಕೊಂಡು ಹದಿನೇಳು ವರ್ಷಗಳ ಕಾಲ ಶತಪ್ರಯತ್ನ ನಡೆಸಿ, ಹಂತ ಹಂತವಾಗಿ ಪಳಗಿಕೊಂಡು `ಕೆರೆಬೇಟೆ’ (Kerebete) ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾದವರು ರಾಜ್ ಗುರು.

Kerebete 1 3

ಇದೀಗ ಎಲ್ಲ ದಿಕ್ಕುಗಳಲ್ಲಿಯೂ ಕೆರೆಬೇಟೆಯ ಬಗ್ಗೆ ಸಕಾರಾತ್ಮಕ ವಾತಾವರಣ ಹಬ್ಬಿಕೊಂಡಿದೆ. ಬಿಡುಗಡೆಗೆ ದಿನಗಣನೆ ಶುರುವಾಗಿರುವ ಈ ಹೊತ್ತಿನಲ್ಲಿ ಸಿನಿಮಾ ರಂಗದವರೂ ಕೂಡಾ ನಿರ್ದೇಶಕ ರಾಜ್ ಗುರು ಕಸುಬುದಾರಿಕೆಯ ಬಗ್ಗೆ ಮೆಚ್ಚುಗೆ, ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಇನ್ನು ಪ್ರೇಕ್ಷಕರತ್ತ ಕಣ್ಣು ಹಾಯಿಸಿದರೆ ಅಲ್ಲಿಯೂ ಕೂಡಾ ಕೆರೆಬೇಟೆಯೆಡೆಗಿನ ನಿರೀಕ್ಷೆಯ ಹೊಳಪು ಸ್ಪಷ್ಟವಾಗಿ ಕಾಣಿಸುತ್ತಿದೆ. ಇದೆಲ್ಲದರ ಹಿಮ್ಮೇಳದಲ್ಲಿ ಖುಷಿಗೊಂಡಿರುವ ರಾಜ್ ಗುರು, ತಮ್ಮ ಇಷ್ಟೂ ವರ್ಷಗಳ ಶ್ರಮ, ಕನಸು, ಪಟ್ಟ ಪಡಿಪಾಟಲುಗಳೆಲ್ಲ ಸಾರ್ಥಕವಾಗೋ ಘಳಿಗೆ ಹತ್ತಿರಾದ ಖುಷಿಯಲ್ಲಿದ್ದಾರೆ.

Kerebete 2 3

ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬದವರಾದ ರಾಜ್ ಗುರು (Rajaguru) ಪತ್ರಿಕೋದ್ಯಮ ಪದವೀಧರರೂ ಹಾದು. ಒಂದಷ್ಟು ಕಾಲ ದಿನಪತ್ರಿಕೆಯೊಂದರಲ್ಲಿ ಕಾರ್ಯ ನಿರ್ವಹಿಸಿದ್ದವರಿಗೆ ತನ್ನ ಬದುಕೇನಿದ್ದರೂ ಸಿನಿಮಾಕ್ಕಷ್ಟೇ ಮೀಸಲೆಂಬ ದೃಢ ನಿರ್ಧಾರ ಅಂಟಿಕೊಂಡಿತ್ತು. ಹಾಗೆ ಗಾಂಧಿನಗರದತ್ತ ಬಂದು, ಸಣ್ಣ ಪುಟ್ಟ ಅವಕಾಶಗಳಿಗೆ ಕೈಚಾಚುತ್ತಾ ಅಲೆದಾಡಿದ ದಿನಗಳು, ಅರೆಹೊಟ್ಟೆಯ ಸಂಕಟ, ಕನಿಷ್ಠ ಒಂದು ಸೂರಿಗೂ ದಿಕ್ಕಿಲ್ಲದ ಯಾತನಾಮಯ ಕ್ಷಣಗಳೆಲ್ಲವನ್ನೂ ಕಂಡುಂಡವರು ರಾಜ್ ಗುರು. ಕಡೆಗೂ 2008ರಲ್ಲಿ ತೆರೆಗಂಡಿದ್ದ ಚಮ್ಕಾಯ್ಸಿ ಚಿಂದಿ ಉಡಾಯ್ಸಿ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಅವಕಾಶ ಅವರಿಗೊಲಿದಿತ್ತು. ನಿರ್ದೇಶಕ ಎ ಆರ್ ಬಾಬು ಗರಡಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿದ್ದ ರಾಜ್ ಗುರು ಆ ನಂತರ ಗೆಳೆಯ ಪವನ್ ಒಡೆಯರ್ ಜೊತೆಗೂ ಕಾರ್ಯನಿರ್ವಹಿಸಿದ್ದಾರೆ.

kerebete

ಹೀಗೆ ಹದಿನೇಳು ವರ್ಷಗಳ ಕಾಲ ನಿರ್ದೇಶನ ವಿಭಾಗದಲ್ಲಿ ಪಳಗಿಕೊಂಡಿದ್ದ ರಾಜ್ ಗುರು ಪಾಲಿಗೆ ತಮಿಳಿನ ಖ್ಯಾತ ನಿರ್ದೇಶಕ ವೆಟ್ರಿ ಮಾರನ್ ಅಂದರೆ ಅದೆಂಥಾದ್ದೋ ಸೆಳೆತ. ನೆಲಮೂಲದ ಕಥೆಗಳನ್ನು ಅದ್ಭುತವಾಗಿ ದೃಷ್ಯವಾಗಿಸುವ ವೆಟ್ರಿ ಮಾರನ್ ರಾಜ್ ಗುರುಗೆ ಸಾರ್ವಕಾಲಿಕ ಸ್ಫೂರ್ತಿ. ಅವರ ಹಾದಿಯಲ್ಲಿಯೇ ನೆಲದ ಕಥೆಗಳನ್ನು ಕಮರ್ಶಿಯಲ್ ಚೌಕಟ್ಟಿನಲ್ಲಿ ಹೇಳಬೇಕೆಂಬ ಉದ್ದೇಶದಿಂದಲೇ ಅವರು, ಮಲೆನಾಡು ಸೀಮೆಯ ಕೆರೆಬೇಟೆ ಕಥೆಯನ್ನು ಸಿದ್ಧಪಡಿಸಿದ್ದರು. ಆ ನಂತರ ಮಲೆನಾಡಿನವರೇ ಆದ ಗೌರಿಶಂಕರ್ ಅವರ ತುಂಬು ಸಹಕಾರದಿಂದ ಈ ಚಿತ್ರ ಅಣಿಗೊಂಡಿದೆ. ಈ ಮೂಲಕ ತನ್ನ ವೃತ್ತಿಬದುಕು ದಿಕ್ಕು ಬದಲಿಸುತ್ತೆ, ದೊಡ್ಡ ಮಟ್ಟದ ಗೆಲುವು ಲಭಿಸುತ್ತದೆಂಬ ನಂಬಿಕೆ ರಾಜ್ ಗುರು ಅವರಲ್ಲಿದೆ.

 

ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

TAGGED:GowrishankarKerebeteRajaguruReleaseಕೆರೆಬೇಟೆಗೌರಿಶಂಕರ್ರಾಜಗುರುರಿಲೀಸ್
Share This Article
Facebook Whatsapp Whatsapp Telegram

You Might Also Like

Chhangur Baba
Latest

ಸೈಕಲ್‌ನಲ್ಲಿ ತಾಯತ ಮಾರುತ್ತಿದ್ದ ಧಾರ್ಮಿಕ ಮತಾಂತರ ಗ್ಯಾಂಗ್‌ನ ಜಮಾಲುದ್ದೀನ್‌ ಈಗ 106 ಕೋಟಿ ರೂ. ಒಡೆಯ

Public TV
By Public TV
13 minutes ago
Priyank Kharge
Districts

ಸಿಸಿ ರೋಡ್ ಕಮಿಷನ್ ವಿಚಾರ – ಇಬ್ಬರು ಅಧಿಕಾರಿಗಳ ಅಮಾನತು: ಪ್ರಿಯಾಂಕ್ ಖರ್ಗೆ

Public TV
By Public TV
21 minutes ago
Shubhanshu Shukla ISS
Latest

ಅಂತರಿಕ್ಷದಲ್ಲಿ ಮೊಳಕೆಯೊಡೆದ ಮೆಂತ್ಯ, ಹೆಸರುಕಾಳು – ಭಾರತದ ಶುಭಾಂಶು ಶುಕ್ಲಾ ಪ್ರಯೋಗ ಸಕ್ಸಸ್

Public TV
By Public TV
29 minutes ago
Vijayapura Murder
Crime

ವಿಜಯಪುರ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Public TV
By Public TV
57 minutes ago
Rajasthan Jaguar Fighter Jet Crash
Latest

Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

Public TV
By Public TV
1 hour ago
vadodara bridge collapse
Latest

ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?