ಬೆಂಗಳೂರು: ದ್ವೇಷ ಭಾಷಣ ಯಾರೇ ಮಾಡಿದ್ರು ಸರ್ಕಾರ ಸುಮ್ಮನೆ ಇರೋದಕ್ಕೆ ಆಗುವುದಿಲ್ಲ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಷಣಕ್ಕೆ ಸರ್ಕಾರ ನೊಟೀಸ್ ನೀಡಿದ ಕ್ರಮವನ್ನು ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಸಮರ್ಥನೆ ಮಾಡಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಭಾಷಣಕ್ಕೆ ಸರ್ಕಾರದಿಂದ ತಡೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ದ್ವೇಷ ಭಾಷಣ ಮಾಡಿದ್ರೆ ಸುಮ್ಮನೆ ಇರೋಕೆ ಆಗುತ್ತಾ? ಯಾರೇ ದ್ವೇಷ ಭಾಷಣ ಮಾಡಿದ್ರು ನೊಟೀಸ್ ಜಾರಿ ಆಗುತ್ತದೆ. ನಾನೇ ದ್ವೇಷ ಭಾಷಣ ಮಾಡಿದ್ರು ನನಗೂ ನೋಟೀಸ್ ಜಾರಿ ಆಗುತ್ತದೆ ಎಂದಿದ್ದಾರೆ. ಇದನ್ನೂ ಓದಿ: ಇಡೀ ದೇಶದಲ್ಲಿ ಭ್ರಷ್ಟಾಚಾರ ಇದೆ, ಇಲ್ಲ ಅಂತ ಹೇಳಲು ಸಾಧ್ಯವೇ ಇಲ್ಲ: ದಿನೇಶ್ ಗುಂಡೂರಾವ್
ಕಾನೂನು ಬಾಹಿರವಾಗಿ ಯಾರು ನಡೆದುಕೊಳ್ಳಬೇಕು. ಅವರ ಭಾಷಣ ಸರಿಯಿಲ್ಲ. ಅವರು ತಪ್ಪಾಗಿ ಭಾಷಣ ಮಾಡಿದ್ರೆ ನಾವೇನು ಮಾಡೋಣ. ನೆಹರು, ಇಂದಿರಾಗಾಂಧಿಯನ್ನ ನಿತ್ಯವೂ ಸೂಲಿಬೆಲೆ ಟೀಕೆ ಮಾಡ್ತಾರೆ. ದ್ವೇಷ ಭಾಷಣದ ಹೇಳಿಕೆ ಕೊಟ್ಟಾಗ ಕ್ರಮ ತೆಗೆದುಕೊಳ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಮೀರ್ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ – ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ: ಈಶ್ವರ್ ಖಂಡ್ರೆ
ರಾಹುಲ್ ಗಾಂಧಿಯವರು ಯಾವುದೇ ತಪ್ಪು ಮಾಡದೇ ಹೋದ್ರು, ಕೇಸ್ ಬುಕ್ ಮಾಡಿ ಅವರ ಎಂಪಿ ಸ್ಥಾನ ಕಿತ್ತುಕೊಂಡಿದ್ದರು. ರಾಹುಲ್ ಅವರೇನು ದ್ವೇಷ ಭಾಷಣ ಮಾಡಿದ್ರಾ? ಆದರೂ ಅವರ ಮೇಲೆ ಕ್ರಮ ಮಾಡಿದ್ರಿ. ಯಾರು ದ್ವೇಷ ಭಾಷಣ ಮಾಡಬಾರದು. ಸಾಮರಸ್ಯವಾಗಿ ಇರಬೇಕು ಎಂದು ತಿರುಗೇಟು ನೀಡಿದ್ದಾರೆ.