Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬುರುಡೆ ನೋಡಿ ಕೆಟ್ಟ ಕನಸು, ಭಯಗೊಂಡು ಕಿರುಚಾಡಿದ್ದೆ – ದೆಹಲಿಯಿಂದ ತರಲ್ಲ ಎಂದಿದ್ದೆ: ಜಯಂತ್‌ ಟಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಬುರುಡೆ ನೋಡಿ ಕೆಟ್ಟ ಕನಸು, ಭಯಗೊಂಡು ಕಿರುಚಾಡಿದ್ದೆ – ದೆಹಲಿಯಿಂದ ತರಲ್ಲ ಎಂದಿದ್ದೆ: ಜಯಂತ್‌ ಟಿ

Crime

ಬುರುಡೆ ನೋಡಿ ಕೆಟ್ಟ ಕನಸು, ಭಯಗೊಂಡು ಕಿರುಚಾಡಿದ್ದೆ – ದೆಹಲಿಯಿಂದ ತರಲ್ಲ ಎಂದಿದ್ದೆ: ಜಯಂತ್‌ ಟಿ

Public TV
Last updated: December 29, 2025 12:03 pm
Public TV
Share
4 Min Read
Jayanth T
SHARE

– ಎಸ್‌ಐಟಿಗೆ ಬುರುಡೆ ಬಗ್ಗೆ ಹೇಳಿಕೆ ನೀಡಿದ್ದ ಜಯಂತ್‌
– ತಿಮರೋಡಿ ಮನೆಯಲ್ಲಿ ಗಿರೀಶ್ ಮಟ್ಟಣ್ಣವರ್, ಪುರಂದರ, ವಿಠಲ, ಕುಸುಮಾವತಿ ಸಭೆ
–  ಧರ್ಮಸ್ಥಳದವರ ವಿರುದ್ಧ ಸುಳ್ಳು ಕೇಸ್‌ ನೀಡುವ ಬಗ್ಗೆ ಚರ್ಚೆ

ಮಂಗಳೂರು: ಬುರುಡೆ ನೋಡಿ ನಾನು ಹೆದರಿ ಹೋಗಿದ್ದೆ ಎಂದು ಬುರುಡೆ ಗ್ಯಾಂಗ್‌ನ ಸದಸ್ಯ, ಪ್ರಕರಣದಲ್ಲಿ ಐದನೇ ಆರೋಪಿಯಾಗಿರುವ ಜಯಂತ್ ಟಿ (Jayanth T) ವಿಶೇಷ ತನಿಖಾ ತಂಡಕ್ಕೆ (SIT) ಹೇಳಿಕೆ ನೀಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು. ರೈಲಿನಲ್ಲಿ ಜಯಂತ್‌ ಬುರುಡೆಯನ್ನು ತೆಗೆದುಕೊಂಡು ಹೋಗಿದ್ದರೆ ವಿಮಾನದಲ್ಲಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್ ದೆಹಲಿಗೆ ತೆರಳಿದ್ದರು.

ದೆಹಲಿಯಲ್ಲಿ ರಾತ್ರಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಜೊತೆ ಮಲಗಿದ್ದಾಗ ಜಯಂತ್ ಟಿಗೆ ಭಯಾನಕ ಕನಸು ಬಿದ್ದಿತ್ತು. ಕೆಟ್ಟ ಕನಸು ಬಿದ್ದು ಕಿರುಚಿಕೊಂಡು ಜಯಂತ್‌ ಎದ್ದಿದ್ದರು. ಕೆಟ್ಟ ಕನಸಿನಿಂದಾಗಿ ದೆಹಲಿಯಲ್ಲೇ ಬುರುಡೆಯನ್ನು ಬಿಟ್ಟು ಜಯಂತ್, ಮಟ್ಟಣ್ಣನವರ್, ಸುಜಾತ ಭಟ್ ಬೆಂಗಳೂರಿಗೆ ಮರಳಿದ್ದರು.

ಜಯಂತ್‌ ಹೇಳಿಕೆಯಲ್ಲಿ ಏನಿದೆ?
ರೈಲಿನಲ್ಲಿ ಬರುಡೆಯನ್ನು ತೆಗೆದುಕೊಂಡು ನಾನು ದೆಹಲಿಗೆ ಹೋಗಿದ್ದೆ. ದೆಹಲಿಯಲ್ಲಿ ಸುಜಾತ ಭಟ್, ಗಿರೀಶ್‌ ಮಟ್ಟಣ್ಣನವರ್‌ ವಕೀಲರಾದ ಧನಂಜಯ್ ಬಳಿ ಮಾತನಾಡಿದರು. ನಾನು ವಕೀಲರನ್ನು ಭೇಟಿ ಮಾಡಿದ ನಂತರ ಶಾಂಗ್ರಿಲಾ ಹೋಟೆಲಿನಿಂದ ಕಾರಿನಲ್ಲಿ ವಿಠಲ ಮಂದಿರಕ್ಕೆ ಬಂದೆವು.

ಕಾರಿನಿಂದ ಬುರುಡೆಯನ್ನು ನಾನೇ ತಂದು ಸುಜಾತ ಭಟ್ ರೂಮಿನಲ್ಲಿ ಇಟ್ಟೆನು. ಸುಜಾತ ಭಟ್ ಇದು ಏನು ಎಂದು ಕೇಳಿದಳು. ನಾನು ಏನಿಲ್ಲ ಬಿಡಿ ಎಂದು ಹೇಳಿ ಮಂಚದ ಹಿಂಬದಿಯಲ್ಲಿ ಅದನ್ನು ಇರಿಸಿದೆ. ಆ ದಿನ ರಾತ್ರಿ ಬುರುಡೆ ಸುಜಾತ ಭಟ್ ಕೋಣೆಯಲ್ಲಿ ಇತ್ತು. ನಾನು ಮಟ್ಟಣ್ಣನವರ್‌, ಚಿನ್ನಯ್ಯ ಒಂದು ರೂಮಿನಲ್ಲಿ ಮಲಗಿಕೊಂಡವು. ನನಗೆ ನಿದ್ದೆಯಲ್ಲಿ ಕಟ್ಟ ಕನಸು ಬಿದ್ದಿದ್ದು ನಾನು ಕಿರುಚಿಡಾಡಿದನು ಕನಸಿನಲ್ಲಿ ಕೆಟ್ಟ ಕಟ್ಟದು ಕಾಣುತ್ತಿತ್ತು.

Dharmasthala SIT Report

ಮೇ 5 ರಂದು ಸೋಮವಾರ ನಾವು 4 ಜನ ಬಾಡಿಗೆ ಕಾರು ಮಾಡಿಕೊಂಡು ಬುರುಡೆಯನ್ನು ತೆಗೆದುಕೊಂಡು ಸುಪ್ರೀಂಕೋರ್ಟ್ ಬಳಿ ವಕೀಲ ಕೆ.ವಿ ಧನಂಜಯ ಅವರನ್ನು ಭೇಟಿ ಮಾಡಲು ಹೋದೆವು. ಬುರುಡೆ ಕಾರಿನಲ್ಲೇ ಇತ್ತು. ದ್ವಾರದಲ್ಲೇ ನಮ್ಮನ್ನು ತಡೆದ ಕಾರಣ ಸುಪ್ರೀಂ ಕೋರ್ಟ್‌ ಒಳಗಡೆ ಹೋಗಲು ಸಾಧ್ಯವಾಗಲಿಲ್ಲ.

ಮತ್ತೆ ಧನಂಜಯ ಅವರ ವಕೀಲರು ಮಟ್ಟಣ್ಣನವರಿಗೆ ಫೋನ್ ಮಾಡಿ ಶಾಂಗ್ರೀಲಾ ಹೋಟೆಲ್‌ ಬಳಿ ಬರಲು ತಿಳಿಸಿದರು ಅದೇ ಕಾರಿನಲ್ಲಿ ನಾವು ಹೋಟೆಲಿಗೆ ಹೋದೆವು. ಬುರುಡೆಯನ್ನು ಕಾರಿನಲ್ಲಿಯೇ ಇಟ್ಟು, ಸುಜಾತ ಭಟ್ ಕಾರಿನಲ್ಲಿ ಬಿಟ್ಟು ನಾವು ಮೂವರು ಮೇಲೆ ಹೋದೆವು.  ಇದನ್ನೂ ಓದಿ:  ಧರ್ಮಸ್ಥಳ ಕೇಸ್‌- ತಿಮರೋಡಿ, ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ, ಜಯಂತ್‌ ಪಾತ್ರ ಏನು?

ಈ ಸಂರ್ಭದಲ್ಲಿ ಧನಂಜಯ್ ಅವರು ಯಾವುದೇ ಟೆನ್ಷನ್‌ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಸುಪ್ರೀಂ ಕೋರ್ಟ್ ನಲ್ಲಿ ಇದು ಎಫ್‌ಐಆರ್‌ ಆಗಿದೆಯೇ? ಎಂದು ನಮ್ಮನ್ನು ಕೇಳಿದ್ದಾರೆ. ನೀವು ವಾಪಸ್‌ ಹೋಗಿ ಧರ್ಮಸ್ಥಳದಲ್ಲಿ ಎಫ್‌ಐಆರ್‌ ಮಾಡಿಸಿ ಎಂದು ತಿಳಿಸಿದರು. ಆ ನಂತರ ನಾವು ಅದೇ ಕಾರಿನಲ್ಲಿ ವಾಪಸ್‌ ವಿಠಲ ಮಂದಿರಕ್ಕೆ ಬಂದೆವು.

ನಾವು ಮೂವರು ವಿಮಾನದಲ್ಲಿ ಬೆಂಗಳೂರಿಗೆ ಹೋಗುತ್ತೇವೆ ನೀನು ರೈಲಿನಲ್ಲಿ ಬಾ ಎಂದು ಮಟ್ಟಣ್ಣನವರ್‌ ಹೇಳಿದ್ದರು. ಆದರೆ ನನಗೆ ನಿನ್ನೆ ಕೆಟ್ಟ ಕನಸು ಬಿದ್ದ ಕಾರಣ ನಾನು ರೈಲಿನಲ್ಲಿ ತರಲು ಸಾಧ್ಯವಿಲ್ಲ ಎಂದು ಹೇಳಿದೆ. ನಂತರ ಮಟ್ಟಣ್ಣನವರ್‌ ವಿಠಲ ಮಂದಿರ ಹುಡುಗರಿಗೆ ಹೇಳಿ ಈ ಬಾಕ್ಸ್‌ ಇಲ್ಲಿಯೇ ಇರಲಿ. ನಾವು ವಾಪಸ್‌ ಬಂದು ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿ ನಾವು ಬೆಂಗಳೂರಿಗೆ ವಾಪಸ್‌ ಆದೆವು.  ಇದನ್ನೂ ಓದಿ:  ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಚಿನ್ನಯ್ಯ – ಎಸ್‌ಐಟಿ ವರದಿಯಲ್ಲಿ ಏನಿದೆ?

ದೆಹಲಿಯಿಂದ ಬಂದ ಬಳಿಕ ಆಗಾಗ ಮಹೇಶ್ ತಿಮರೋಡಿ ಮನೆಯಲ್ಲಿ ನಾನು ಗಿರೀಶ್ ಮಟ್ಟಣನವರ್‌, ಪುರಂದರ ಗೌಡ, ವಿಠಲ ಗೌಡ, ಕುಸುಮಾವತಿ ಮುಂತಾದವರು ಪದೇ ಪದೇ ಭೇಟಿಯಾಗಿ ಸಭೆ ನಡೆಸುತ್ತಿದ್ದೆವು. ಧರ್ಮಸ್ಥಳದವರ (Dharmasthala) ವಿರುದ್ಧ ಯಾವ ರೀತಿ ಸುಳ್ಳು ಕೇಸನ್ನು ಪೊಲೀಸ್ ಠಾಣೆಯಲ್ಲಿ ರಿಜಿಸ್ಟರ್ ಮಾಡಿಸಬೇಕೆಂದು ಚರ್ಚೆಯಾಗುತ್ತಿತ್ತು. ತಮಿಳುನಾಡಿನಿನಿಂದ ಚಿನ್ನಯ್ಯನನ್ನು ಕರೆಯಿಸಿ ಬುರುಡೆ ಕೊಟ್ಟು, ದೂರು ದಾಖಲಿಸುವುದು ಎಂದು ತೀರ್ಮಾನವಾಯಿತು.

ಮೇ 25 ರಂದು ನಾನು ಬೆಂಗಳೂರಿನಿಂದ ದೆಹಲಿಗೆ ವಿಮಾನದಲ್ಲಿ ತೆರಳಿದ್ದೆ. ವಿಠಲ ಮಂದಿರಕ್ಕೆ ಹೋಗಿ ರೈಲಿನಲ್ಲಿ ಬುರುಡೆಯನ್ನು ಮಂಗಳೂರಿಗೆ ತಂದೆ. ಮಂಗಳೂರಿನ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಇಳಿದ ಬಳಿಕ ರಿಕ್ಷಾದಲ್ಲಿ ಜ್ಯೋತಿ‌ ಸರ್ಕಲ್‌ ಬಳಿ ಇರುವ ತಮ್ಮಣ್ಣ ಶೆಟ್ಟಿ ಅವರ ಕಚೇರಿಗೆ ಹೋದೆ. ಅಲ್ಲಿ ಊಟ ಮುಗಿಸಿದ ಬಳಿಕ ಪ್ರಮೋದ್‌ ಶೆಟ್ಟಿಗೆ ಫೋನ್‌ ಮಾಡಿದೆ. ನಂತರ ಪ್ರಮೋದ್‌ ಶೆಟ್ಟಿಯೇ ಕ್ರೇಟಾ ಕಾರಿನಲ್ಲಿ ಮಹೇಶ್‌ ಶೆಟ್ಟಿ ತಿಮರೋಡಿ ಮನೆಗೆ ನನ್ನನ್ನು ಕರೆ ತಂದನು. ನಾನು ಈ ಬುರುಡೆಯನ್ನು ತಿಮರೋಡಿಗೆ ನೀಡಿದೆನು.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ (Court) ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.

ಯಾರೆಲ್ಲಾ ಆರೋಪಿಗಳು?
ಎ1 – ಚಿನ್ನಯ್ಯ, ಎ2 – ಮಹೇಶ್‌ ಶೆಟ್ಟಿ ತಿಮರೋಡಿ, ಎ3 – ಗಿರೀಶ್‌ ಮಟ್ಟಣ್ಣನವರ್‌, ಎ4 – ವಿಠಲ ಗೌಡ, ಎ5 – ಜಯಂತ್‌ ಟಿ, ಎ6 – ಸುಜಾತ ಭಟ್‌

TAGGED:dharmasthalaJayanth TsitSupreme Courtಎಸ್‍ಐಟಿಜಯಂತ್‌ ಟಿಧರ್ಮಸ್ಥಳಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories
Bhushan Kumar Vivek Agnihotri 2
ಸೆಟ್ಟೇರುತ್ತಿದೆ ʻಆಪರೇಷನ್‌ ಸಿಂಧೂರʼ ಸಿನಿಮಾ – ಭೂಷಣ್ ಕುಮಾರ್, ವಿವೇಕ್ ಅಗ್ನಿಹೋತ್ರಿ ಅಧಿಕೃತ ಘೋಷಣೆ
Bollywood Cinema Latest Main Post National
Zubeen Garg
ಮದ್ಯಪಾನ ಮಾಡಿ ಈಜಲು ತೆರಳಿದ್ದೇ ಗಾಯಕ ಜುಬೀನ್ ಗಾರ್ಗ್ ಸಾವಿಗೆ ಕಾರಣ: ಸಿಂಗಾಪುರ ಕೋರ್ಟ್‌
Bollywood Cinema Court Latest National Top Stories World

You Might Also Like

Ballary Bear Captured
Bellary

Automatic Mobile App Based Cage locking System ಬಳಿಸಿ ಜಿಂದಾಲ್‌ನಲ್ಲಿದ್ದ ಮೂರು ಕರಡಿ ಸೆರೆ

Public TV
By Public TV
15 minutes ago
ಸಾಂದರ್ಭಿಕ ಚಿತ್ರ
Latest

ಕೇಂದ್ರ ಸರ್ಕಾರದಿಂದ ಗುಡ್‌ ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಮೇಲಿನ ಅಬಕಾರಿ ಸುಂಕ ಭಾರೀ ಇಳಿಕೆ!

Public TV
By Public TV
51 minutes ago
pm modi mann ki baat
Bengaluru City

ಮಧ್ಯಪ್ರಾಚ್ಯ ಬಿಕ್ಕಟ್ಟು: ಇಂದು ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಸಭೆ

Public TV
By Public TV
1 hour ago
Kurubarahalli Accident
Bengaluru City

ಸ್ಟೀಲ್ ಸಾಗಿಸ್ತಿದ್ದ ಲಾರಿ ಕಾರಿಗೆ ಡಿಕ್ಕಿ – ಗುದ್ದಿದ ರಭಸಕ್ಕೆ ಗುಜರಿ ಗೋಡೌನ್ ಬೆಂಕಿಗಾಹುತಿ, ವ್ಯಕ್ತಿ ಸಾವು

Public TV
By Public TV
1 hour ago
Shivamogga
Districts

ಆಗುಂಬೆ ಘಾಟ್‌ನಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಸಂಚಾರ ಬಂದ್

Public TV
By Public TV
2 hours ago
Iran Foreign Minister Abbas Araghchi
Latest

ಶತ್ರುಗಳಿಗೆ ಹಾರ್ಮುಜ್‌ ಜಲಸಂಧಿ ನಿರ್ಬಂಧಿಸುವುದು ಇರಾನ್‌ನ ಕಾನೂನುಬದ್ಧ ಹಕ್ಕು: ವಿಶ್ವಸಂಸ್ಥೆಯಲ್ಲಿ ಅರಘ್ಚಿ ಮಾತು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?