ಅಪರ ಜಿಲ್ಲಾಧಿಕಾರಿಗೆ 10 ಸಾವಿರ ರೂ. ದಂಡ

Public TV
1 Min Read
rcr deputy collector copy

ರಾಯಚೂರು: ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಹಾಕಿದ್ದ ಅರ್ಜಿದಾರನಿಗೆ ಮಾಹಿತಿ ನೀಡದ್ದಕ್ಕೆ ಜಿಲ್ಲೆಯಲ್ಲಿ ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಗೋವಿಂದರೆಡ್ಡಿಗೆ 10 ಸಾವಿರ ರೂ. ದಂಡ ವಿಧಿಸಿ ರಾಜ್ಯ ಮಾಹಿತಿ ಆಯೋಗ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಬಗ್ಗೆ ಆರ್ ಟಿಐ ಕಾರ್ಯಕರ್ತ ಯಶವಂತ್ ಕೋವಿ ಕೇಳಿದ ಮಾಹಿತಿ ನೀಡದ ಹಿನ್ನೆಲೆ ಕ್ರಮ ಜರುಗಿಸಲಾಗಿದೆ. ಸೂಕ್ತ ಸಮಯಕ್ಕೆ ಮಾಹಿತಿ ನೀಡದಕ್ಕೆ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಮಾಹಿತಿ ಆಯೋಗದ ನೋಟಿಸ್ ಗೂ ಯಾವುದೇ ಉತ್ತರ ನೀಡದೇ ನಿರ್ಲಕ್ಷ್ಯ ಮಾಡಿದ್ದಕ್ಕೆ ರಾಯಚೂರಿನ ಹಿಂದಿನ ಎಡಿಸಿ ಗೋವಿಂದರೆಡ್ಡಿಗೆ ಮಾಹಿತಿ ಆಯೋಗ ದಂಡ ಹಾಕಿದೆ.

ಎರಡು ತಿಂಗಳ ವೇತನದಲ್ಲಿ 10 ಸಾವಿರ ರೂ. ಹಿಡಿಯಲು ಆದೇಶ ಮಾಡಲಾಗಿದೆ. ಅಲ್ಲದೆ ದಂಡ ಕಟ್ಟಿ ಬಳಿಕ ಮಾಹಿತಿ ನೀಡುವಂತೆ ಮಾಹಿತಿ ಆಯೋಗ ಸೂಚಿಸಿದೆ. ಗೋವಿಂದರೆಡ್ಡಿ ಸದ್ಯ ವಿಜಯಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *