ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಹೊಸ ಸಡಗರ ತುಂಬಿಸಿದೆ. ಒಂದೆಡೆ ಪಟಾಕಿ ಕೊಳ್ಳುವವರೇ ಮುಗ್ಗಿಬಿದ್ದಿದ್ರೆ, ಮತ್ತೊಂದೆಡೆ ಸಿಹಿ ತಿನಿಸುಗಳು ಅದ್ರಲ್ಲೂ ಕಜ್ಜಾಯ ಖರೀದಿಯತ್ತ ಮತ್ತಷ್ಟು ಜನ ಬ್ಯುಸಿಯಾಗಿದ್ದಾರೆ.
ದೀಪ ಹಚ್ಚುವ ಹಬ್ಬ ದೀಪಾವಳಿ ಕಾರ್ತಿಕ ಮಾಸದಲ್ಲೂ ಅದ್ಧೂರಿಯಾಗಿ ಆಚರಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಮಿಸ್ ಮಾಡದೇ ಕಜ್ಜಾಯದ ರುಚಿ ನೋಡುತ್ತಾರೆ. ಹಾಗಾದ್ರೆ ಸಮಯ ಇಲ್ಲ ಅಂತ ಅಂಗಡಿಗಳಲ್ಲಿ ಕಜ್ಜಾಯ ಖರೀದಿ ಮಾಡುವವರು ಅದನ್ನು ತಯಾರಿ ಮಾಡುವ ವಿಧಾನವನ್ನು ಒಮ್ಮೆ ನೋಡಲೇಬೇಕಿದೆ.
ಬೆಂಗಳೂರಿನ ಮಾಗಡಿರಸ್ತೆಯಲ್ಲಿರುವ ನೇತಾಜಿ ರಸ್ತೆಯ ಮನೆ ಮನೆಗಳಲ್ಲೂ ಕಜ್ಜಾಯ ಮಾಡುತ್ತಾರೆ. ಆದರೆ ಅವರು ಅಲ್ಲೇ ತಟ್ಟಿ, ಅಲ್ಲೇ ಬೇಯಿಸುತ್ತಾರೆ. ಕಜ್ಜಾಯದ ಪಾಕವನ್ನ ದಾಟಿಯೇ ಹೋಗುತ್ತಾರೆ. ಈ ವೇಳೆ ಕಾಲಿನ ಕಸ ಬಿದ್ದರೂ ಅಚ್ಚರಿ ಇಲ್ಲ. ಒಂದು ಬೌಲ್ಲ್ಲಿ ನೀರು ಇಟ್ಟು ಕೈ ಉಜ್ಜುತ್ತಾರೆ, ಅಡುಗೆ ಮಾಡುತ್ತಾರೆ. ಹೀಗೆ ನಿಮ್ಮ ಸಿಹಿಯಾದ ಕಜ್ಜಾಯ ಸಿದ್ಧವಾಗುತ್ತದೆ. ಇದನ್ನೂ ಓದಿ: ಹಬ್ಬಕ್ಕೆ ಮನೆಯಲ್ಲೇ ಮಾಡಿ ತಿನ್ನಿ ಬಿಸಿಬಿಸಿ ಸಿಹಿ ಕಜ್ಜಾಯ
ವ್ಯಾಪಾರಿ – 48 ರೂ. ರೇಟು ಇದು, ನಮ್ ರೇಟು 30 ರೂ ನೀವು 2 ರೂ. ಗೆ ಮಾರಬೇಕು
ಪ್ರತಿನಿಧಿ – ನೋಡು ಬಾವಾ, ಎಷ್ಟಕ್ಕೆ ಮಾರಬೇಕು
ವ್ಯಾಪಾರಿ – ಒಂದ್ ಪೀಸು 2 ರೂಪಾಯಿ.. 48 ರೂ. ಗೆ ಐಟಂ ಇರುತ್ತೆ. ನಿಮಗೆ 18 ರೂ. ಸಿಗುತ್ತದೆ
ಪ್ರತಿನಿಧಿ – 2,4,6,8 ಪೀಸು ಓ 24 ಪೀಸ್ ಇರುತ್ತದೆ
ವ್ಯಾಪಾರಿ – ಫುಲ್ ನೀವೇ ಮಾರುತ್ತೀರಾ..?
ಪ್ರತಿನಿಧಿ – ಒಂದ್ ಸಲ ಫೋಟೋ ಹಾಕಿದ್ರೆ ನೋಡ್ತಾರೇನೋ
ಕಜ್ಜಾಯ ಕುಟ್ಟಿದ ಅಕ್ಕಿ ಹಿಟ್ಟಿನಿಂದ ತಯಾರು ಮಾಡುವುದು ಎಂದು ಅಂದುಕೊಂಡಿದ್ದೀರಾ. ಇಲ್ಲ ಅದೆಲ್ಲ ಬೇರೆ ಬಳಸುತ್ತಾರೆ ಅನ್ನೊ ಸತ್ಯವನ್ನ ಸ್ವತಃ ಅವೆನ್ಯೂ ರಸ್ತೆಯ ವ್ಯಾಪಾರಿಯೇ ಬಿಚ್ಚಿಟ್ಟಿದ್ದಾರೆ.
ಪ್ರತಿನಿಧಿ – ನೋಡಿ ಮೇಡಂ
ವ್ಯಾಪಾರಿ – ಕಡಿಮೆ ಕೊಡ್ತಾರೆ ಅಂದ್ರೆ ಕ್ವಾಲಿಟಿ ಇರಲ್ಲ
ಪ್ರತಿನಿಧಿ – ಹು
ವ್ಯಾಪಾರಿ – ಕಜ್ಜಾಯ ಮಾಡಲು ಅಕ್ಕಿ ಕುಟ್ಟಿ ಮಾಡ್ಬೇಕು, ಆದ್ರೆ, ಮೈದಾ ಮಿಕ್ಸ್ ಮಾಡ್ತಾರೆ, ನೀವ್ ರೇಟು ಕಡಿಮೆ ಕೇಳ್ತಿರಾ ಅದರ ಬಂಡವಾಳ ಮಾತ್ರ ನಿಮಗೆ ಗೊತ್ತಾಗಲ್ಲ
ಪ್ರತಿನಿಧಿ – ಎಷ್ಟು ದಿನ ಇಟ್ಟು ಬೇಕಾದ್ರೂ ಮಾರಬಹುದಲ್ವ
ವ್ಯಾಪಾರಿ – ಒಂದ್ ತಿಂಗಳು ಬೇಕಾದರೂ ಇಡಿ, ಆಮೇಲೂ ಇರುತ್ತೆ
ಅಂಗಡಿ:
ಪ್ರತಿನಿಧಿ – ಎಷ್ಟು
ವ್ಯಾಪಾರಿ – 800 ರೂ. ಆಗುತ್ತೆ
ಪ್ರತಿನಿಧಿ – ಹೋಲ್ಸೆಲ್ ಬೇಕು
ವ್ಯಾಪಾರಿ – ನೋಡಿ 800 ರೂ. ಆಗುತ್ತೆ ಮೇಡಂ
ಪ್ರತಿನಿಧಿ – ಜಾಸ್ತಿ ಎಣ್ಣೆ ಎಣ್ಣೆ ತರಹ ಆಗಿದೆ
ವ್ಯಾಪಾರಿ – ಇಲ್ಲ ಮೇಡಂ ಅದು ಪ್ಲಾಸ್ಟಿಕ್ಗೆ ಬಿಟ್ಟಿದೆ ಅಷ್ಟೇ
ಪ್ರತಿನಿಧಿ – ಮೈದಾ, ಗೀದಾ ಎಲ್ಲ ಬಳಸಲ್ವ
ವ್ಯಾಪಾರಿ – ಇಲ್ಲ ಮೇಡಂ ಒಂದ್ ಪೀಸ್ ಕೊಡ್ತಿನಿ ತಿಂದು ನೋಡಿ ಇದು ವ್ಯಾಪಾರ ಸಮಾಧಾನವಿದ್ರೆ ಮಾತ್ರ ತಗೊಳ್ಳಿ
ಪ್ರತಿನಿಧಿ – ಲಾಸ್ಟ್ ಎಷ್ಟು ಸರ್ ಇದು
ವ್ಯಾಪಾರಿ – 8 ರೂ. ಕಡಿಮೆ ಇರಲ್ಲ, ಕ್ವಾಲಿಟಿ ಚೆನ್ನಾಗಿದೆ..
ಪ್ರತಿನಿಧಿ – ಇದು ಕಡಿಮೆನಾ ಸರ್
ವ್ಯಾಪಾರಿ – ಇದು ಬೇಕಾದ್ರೆ 6 ರೂ. ಕೊಡ್ತಿನಿ
ಪ್ರತಿನಿಧಿ – ಯಾಕೆ
ವ್ಯಾಪಾರಿ – ಇದಕ್ಕೆ ಎಳ್ಳು, ಗಸಗಸೆ ಹಾಕಿರ್ತಾರೆ ಅದಕ್ಕೆ ಜಾಸ್ತಿ
ಕೆ.ಆರ್ ಮಾರುಕಟ್ಟೆಯಲ್ಲಿ ಟ್ರೆಂಡ್ ಗೆ ತಕ್ಕ ಹಾಗೇ ವ್ಯಾಪಾರ ಮಾಡುತ್ತಾರೆ. ಮಾರುಕಟ್ಟೆ ಮುಂಭಾಗ ತಮಿಳುನಾಡಿನಿಂದ ಕಜ್ಜಾಯ ತಂದು ಮಾರುತ್ತಾ ಇದ್ದಾರಂತೆ. ಅಲ್ಲಿಗೆ ರಸ್ತೆಯ ಸುತ್ತಲಿನ ಧೂಳು, ತಮಿಳುನಾಡಿನಿಂದ ಬೆಂಗಳೂರು ಬರುವಾಗ ಕಜ್ಜಾಯ ಅಧೋಗತಿ.
ಫುಟ್ ಪಾತ್:
ಪ್ರತಿನಿಧಿ – ಎಷ್ಟಿದು
ವ್ಯಾಪಾರಿ – ಒಂದಕ್ಕೆ 5 ರೂ.
ಪ್ರತಿನಿಧಿ – ಎಲ್ಲಿ ಮಾಡೋದು
ವ್ಯಾಪಾರಿ – ಊರಲ್ಲಿ ತಮಿಳುನಾಡಲೇ
ಪ್ರತಿನಿಧಿ – ಸ್ವಲ್ಪ ಜಾಸ್ತಿ ಬೇಕು
ವ್ಯಾಪಾರಿ – ಹೋಲ್ಸೆಲ್ ಅಂಗಡಿಗೆ ಬೇಕು
ಪ್ರತಿನಿಧಿ – ಜಾಸ್ತಿ ತಗೊಂಡ್ರು ಕಡಿಮೆ ಕೊಡಲ್ವ
ವ್ಯಾಪಾರಿ – ಇಲ್ಲ ಆಗಲ್ಲ
ಈ ಸಿಹಿ ತಿನ್ನಿಸುಗಳನ್ನ ತಿಂದ್ರೆ ಸ್ವಚ್ಛತೆ ಅಭಾವದಿಂದ ಆರೊಗ್ಯದಲ್ಲಿ ಬಹಳಷ್ಟು ಏರುಪೇರಾಗಲಿದೆ.. ಈ ಪ್ರಕಾರ ವಾಂತಿ – ಬೇಧಿ, ಜ್ವರ ಹೀಗೆ ಹಲವು ಸಮಸ್ಯೆಗಳು ಕಾಡಲಿದೆ. ಒಟ್ಟಿನಲ್ಲಿ ಮನೆಯಲ್ಲಿ ಸಿಹಿ ತಿನ್ನಿಸು ಕಜ್ಜಾಯ ಮಾಡುವ ತ್ರಾಸು ತಪ್ಪಿಸಿಕೊಂಡರೆ ಹೀಗೆ ತಯಾರು ಮಾಡಿರುವುದನ್ನು ತಿನ್ನಬೇಕಾಗುತ್ತದೆ.