ನವದೆಹಲಿ: ಕೇರಳವನ್ನು ಕೇರಳಂ(Keralam) ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ ಬೆನ್ನಲ್ಲೇ ದೆಹಲಿಯನ್ನು ಇಂದ್ರಪ್ರಸ್ಥ(Indraprastha) ಎಂದು ಮರುನಾಮಕರಣ ಮಾಡುವಂತೆ ಕೂಗು ಎದ್ದಿದೆ.
ಈ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾಗೆ ದೆಹಲಿಯ (Delhi) ಚಾಂದಿನಿಚೌಕ್ನ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್ವಾಲ್ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ, ದೆಹಲಿ ಎಂಬ ಹೆಸರು ಐತಿಹಾಸಿಕ ಹಂತವನ್ನು ಮಾತ್ರ ಬಿಂಬಿಸುತ್ತದೆ. ಆದರೆ ಇಂದ್ರಪ್ರಸ್ಥ ನಗರವನ್ನು ಅದರ ಪ್ರಾಚೀನ ನಾಗರಿಕತೆಯ ಬೇರುಗಳೊಂದಿಗೆ ಸಂಪರ್ಕಿಸುತ್ತದೆ. ಇದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸ್ಥಾನವು ಮಾನವೀಯತೆಯ ಅತ್ಯಂತ ಹಳೆಯ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಒಂದರ ಪರಂಪರೆಯ ಮೇಲೆ ನಿಂತಿದೆ ಎಂಬುದನ್ನು ಸಂಕೇತಿಸುತ್ತದೆ ಎಂದಿದ್ದಾರೆ.
Delhi: BJP MP Praveen Khandelwal says, “I believe the name of any city reflects its culture. Historically, Delhi was known as Indraprastha, dating back to the time of the Pandava, long before the current era. Today, I have written a letter to the Union Home Minister, requesting… pic.twitter.com/8rouGjgh6p
— IANS (@ians_india) February 25, 2026
ಹಳೆ ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಮತ್ತು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡುವಂತೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಕೇರಳ ಇನ್ನು ಮುಂದೆ ಕೇರಳಂ – ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ
ಮಹಾಭಾರತದಲ್ಲಿ ಪಾಂಡವರು ಹಸ್ತಿನಾಪುರದಿಂದ ಬೇರ್ಪಟ್ಟ ಬಳಿಕ ಇಂದ್ರಪ್ರಸ್ಥವು ಪಾಂಡವರ ರಾಜಧಾನಿಯಾಗಿತ್ತು. ದ್ರೌಪದಿಯ ಸ್ವಯಂವರದ ನಂತರ ಧೃತರಾಷ್ಟ್ರನು ಪ್ರಾಂಡವರಿಗೆ ನೀಡಿದ್ದ `ಖಾಂಡವಪ್ರಸ್ಥ’ ಎಂಬ ಪಾಳುಭೂಮಿಯನ್ನು ಶ್ರೀಕೃಷ್ಣನ ಮಾರ್ಗದರ್ಶನದಲ್ಲಿ ಮಾಯಾನಗರಿಯಾಗಿ ನಿರ್ಮಿಸಲಾಗಿತ್ತು. ಅದುವೇ ದೆಹಲಿಯ ಹಳೇಭಾಗ ಎನ್ನಲಾಗುತ್ತಿದೆ. ಯಮುನಾ ನದಿ ತೀರದಲ್ಲಿ ದೇವಲೋಕದ ಶಿಲ್ಪಿಗಳಾದ ವಿಶ್ವಕರ್ಮ & ಮಯಾಸುರನಿಂದ ನಿರ್ಮಿತವಾದ ವೈಭವೋಪೇತ ಪ್ರಾಚೀನ ನಗರ ಎಂಬ ಪ್ರತೀತಿ ಇದೆ.

