Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Dakshina Kannada

ದೀಪಕ್ ಹತ್ಯೆ ಕೇಸ್: ಪೊಲೀಸರ 27 ಕಿ.ಮೀ ಥ್ರಿಲ್ಲಿಂಗ್ ಚೇಸಿಂಗ್ ಸ್ಟೋರಿ ಓದಿ

Public TV
Last updated: January 4, 2018 1:36 pm
Public TV
Share
4 Min Read
DEEPAK MURDER
SHARE

ಮಂಗಳೂರು: ಸಿನಿಮಾದಲ್ಲಿ ರೌಡಿಗಳನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವುದನ್ನು ನೀವು ನೋಡಿರಬಹುದು. ಈ ದೃಶ್ಯ ಸಿನಿಮಾದಲ್ಲಿ ನೋಡಲು ಎಷ್ಟು ಥ್ರಿಲ್ಲಿಂಗ್ ಆಗಿರುತ್ತದೋ ಅದೇ ರೀತಿಯಾಗಿ ಪೊಲೀಸರು ದೀಪಕ್ ರಾವ್ ಹತ್ಯೆಯಾದ ಮೂರುವರೆ ಗಂಟೆಯ ಒಳಗಡೆ ನಾಲ್ಕು ಆರೋಪಿಗಳನ್ನು ಕಾರಿನಲ್ಲಿ 27 ಕಿ.ಮೀ ಚೇಸಿಂಗ್ ಮಾಡಿ ಬಂಧಿಸಿದ್ದಾರೆ.

ಸುರತ್ಕಲ್ ಸಮೀಪದ ಕಾಟಿಪಳ್ಳ 2 ನೇ ಬ್ಲಾಕ್ ನ ಕೈಕಂಬದಲ್ಲಿ ಬುಧವಾರ ಮಧ್ಯಾಹ್ನ ಸುಮಾರು 1.30ರ ವೇಳೆಗೆ ದೀಪಕ್ ರಾವ್ ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಆರೋಪಿಗಳು ಹತ್ಯೆ ಮಾಡಿದ್ದರು. ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿಗಳು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗುತ್ತಿದ್ದರು.

MNG DEEPAK MURDER 3

ಮಧ್ಯಾಹ್ನ ಹತ್ಯೆಯಾದ ನಂತರ ಸಮೀಪದ ವ್ಯಕ್ತಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಸುತ್ತಮುತ್ತಲಿನ ಎಲ್ಲ ಪೊಲೀಸ್ ಠಾಣೆಗಳಿಗೆ ತುರ್ತು ಸಂದೇಶ ಕಳುಹಿಸಿದರು. ಆರೋಪಿಗಳು ರಕ್ತಸಿಕ್ತ ತಲಾವರುಗಳನ್ನು ಇಟ್ಟುಕೊಂಡು ಕಾಟಿಪಳ್ಳದಿಂದ ಸೂರಿಂಜೆ-ಶಿಬರೂರು ಮೂಲಕ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದಾರೆ ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಈ ಮಾಹಿತಿಯನ್ನು ಕೂಡಲೇ ಕಿನ್ನಿಗೋಳಿಯಲ್ಲಿದ್ದ ಗಸ್ತು ವಾಹನಕ್ಕೆ ತಿಳಿಸಲಾಯಿತು. ವಾಹನಗಳ ತಪಾಸಣೆ ವೇಳೆ ಬಿಳಿ ಬಣ್ಣದ ಸ್ವಿಫ್ಟ್ ಕಾರು ಆಗಮಿಸಿತು. ನಿಲ್ಲಿಸುವಂತೆ ಸೂಚನೆ ನೀಡಿದರೂ ಕಾರನ್ನು ನಿಲ್ಲಿಸದೇ ವೇಗವಾಗಿ ಮುಂದಕ್ಕೆ ಹೋಯಿತು. ಸೂಚನೆ ಧಿಕ್ಕರಿಸಿ ಮುಂದಕ್ಕೆ ಹೋದಾಗ ಕೂಡಲೇ ಪೊಲೀಸರಿಗೆ ಅನುಮಾನ ಬಂತು.

ಚೇಸಿಂಗ್ ಆರಂಭವಾಯ್ತು:
ಕಾರು ನಿಲ್ಲಿಸದೆ ಎರ್ರಾಬಿರ್ರಿ ಓಡಿಸುತ್ತಾ ತಪ್ಪಿಸಿಕೊಂಡು ಹೋಗಿದ್ದನ್ನು ಕಂಡ ಮೂಲ್ಕಿ ಪೊಲೀಸರು ಎಚ್ಚೆತ್ತುಕೊಂಡು ಖಾಸಗಿ ಕಾರೊಂದನ್ನು ಬಾಡಿಗೆಗೆ ಪಡೆದುಕೊಂಡು ದುಷ್ಕರ್ಮಿಗಳ ಕಾರನ್ನು ಬೆನ್ನಟ್ಟುವುದಕ್ಕೆ ಶುರು ಮಾಡಿದರು. ಆ ಮಧ್ಯೆ ಆರೋಪಿಗಳು ಕಿನ್ನಿಗೋಳಿಯಿಂದ ದಾಬಸ್‍ಕಟ್ಟೆ, ಪಟ್ಟೆಕ್ರಾಸ್, ಕದ್ರಿ ಪದವು, ನಿಡ್ಡೋಡಿ ಮಾರ್ಗವಾಗಿ ಸಂಚರಿಸಿ ಧೂಮಚಡವು ಕ್ರಾಸ್‍ಗೆ ಹೋಗಿ ಅಲ್ಲಿಂದ ಮಿಜಾರುಗುತ್ತು ದೋಟದ ಮನೆ ಮೂಲಕ ತಪ್ಪಿಸಿಕೊಳ್ಳುವುದಕ್ಕೆ ಯೋಜನೆ ಮಾಡಿದ್ದರು.

ಕಾರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಪೊಲೀಸರು ಆರೋಪಿಗಳಿಗೆ ಕಾರು ನಿಲ್ಲಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದ ಆರೋಪಿಗಳು ಅತೀವೇಗದಲ್ಲಿ ಸಿಕ್ಕ ಸಿಕ್ಕ ಒಳ ರಸ್ತೆಗಳಲ್ಲಿ ಕಾರನ್ನು ನುಗ್ಗಿಸುತ್ತಿದ್ದರು.

MNG DEEPAK MURDER 2

ಹಲಗೆ ಮೇಲೆ ಕಾರು ಹೋಯ್ತು:
ಆರೋಪಿಗಳು ಎಡಪದವು ಸಮೀಪದ ಮಿಜಾರು ಗುತ್ತು ಗರಡಿ ಹಿಂಭಾಗದಲ್ಲಿರುವ ಒಳದಾರಿಯ ಮೋರಿಯೊಂದರ ಮೂಲಕ ಹಾದು ಹೋಗಲು ಮುಂದಾಗಿದ್ದರು. ಆದರೆ ಈ ಮೋರಿಗೆ ಹಾಕಿದ್ದ ಸೇತುವೆ ಮುರಿದು ಹೋಗಿದ್ದರಿಂದ ತಾತ್ಕಾಲಿಕವಾಗಿ ಜನರ ಓಡಾಟಕ್ಕೆ ಮರದ ಹಲಗೆಯನ್ನು ಹಾಕಲಾಗಿತ್ತು. ಹಿಂದುಗಡೆಯಿಂದ ಪೊಲೀಸರು ಚೇಸಿಂಗ್ ಮಾಡುತ್ತಿರುವುದನ್ನು ನೋಡಿ ಆರೋಪಿಗಳು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲೇಬೇಕೆಂಬ ಯೋಚನೆ ಮಾಡಿ ಹಲಗೆ ಮೇಲೆಯೇ ಕಾರು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಭಾರವನ್ನು ತಾಳಲಾರದೇ ಹಲಗೆ ಮುರಿದು ಕಾರು ಮೋರಿಯೊಳಗೆ ಸಿಲುಕಿಕೊಂಡಿತ್ತು. ಇದರಿಂದಾಗಿ ಕಾರು ಹಿಂದಕ್ಕೂ ಮುಂದಕ್ಕೂ ಓಡಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ಸಿಲುಕಿಕೊಂಡಿತ್ತು.

ಕಾರು ಮುಂದಕ್ಕೆ ಹೋಗುವುದಿಲ್ಲ ಎಂದು ತಿಳಿದ ಆರೋಪಿಗಳು ನಂತರ ಅಲ್ಲಿಂದಲೇ ಓಡಿ ಪರಾರಿಯಾಗಲು ಪ್ರಯತ್ನಿಸಿದ್ದಾರೆ. ಕಿರಿದಾದ ಜಾಗದಲ್ಲಿ ಕಾರು ಸಿಕ್ಕಿಕೊಂಡಿದ್ದ ಕಾರಣ ಅವರಿಗೆ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟರಲ್ಲೇ ಆರೋಪಿಗಳ ಹಿಂದೆಯೇ ಬಂದ ಪೊಲೀಸರ ತಂಡವು ಕಾರಿನ ಮೇಲೆ ಫೈರಿಂಗ್ ಮಾಡಿ ಹೆದರಿಕೆಯನ್ನು ಹುಟ್ಟಿಸಿತ್ತು.

deepak murder 3

ಆರೋಪಿಗಳು ಈ ದಾರಿ ಮೂಲಕ ಪರಾರಿಯಾಗುತ್ತಿದ್ದಾರೆ ಎನ್ನುವ ವಿಚಾರ ತಿಳಿದು ಇನ್ನೊಂದು ಕಡೆಯಿಂದ ಬಜಪೆಯ ಠಾಣೆ ಪೊಲೀಸರು ಕೂಡ ಪ್ರತ್ಯೇಕ ವಾಹನವೊಂದರಲ್ಲಿ ಸ್ಥಳಕ್ಕೆ ದೌಡಾಯಿಸಿದ್ದರು. ಮತ್ತೊಂದು ಕಡೆಯಿಂದ ಮೂಡಬಿದಿರೆ ಠಾಣೆ ಪೊಲೀಸರು ಕೂಡ ಅದೇ ಜಾಗಕ್ಕೆ ಬಂದಿದ್ದಾರೆ. ಕೊನೆಗೆ ಆರೋಪಿಗಳನ್ನು ಪೊಲೀಸರು ಸುತ್ತುವರಿದಿದ್ದಾರೆ. ಈ ವೇಳೆ ಕಾರಿನಿಂದ ಇಳಿದು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದ ನಾಲ್ವರ ಪೈಕಿ ಓರ್ವ ತನ್ನ ಬಳಿಯಿದ್ದ ತಲ್ವಾರಿನಿಂದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಇದರಿಂದ ಇನ್ಸ್ ಪೆಕ್ಟರ್ ಒಬ್ಬರ ಕೈಗೂ ಸಣ್ಣ-ಪುಟ್ಟ ಗಾಯವಾಗಿತ್ತು. ಎರಡು ಬಾರಿ ಪೊಲೀಸರು ಗುಂಡು ಹಾರಿಸಿದ ಪರಿಣಾಮ ಮತ್ತೆ ನಾವು ಸ್ಥಳದಿಂದ ಪರಾರಿಯಾದರೆ ಗ್ಯಾರಂಟಿ ಶೂಟೌಟ್ ಮಾಡುತ್ತಾರೆ ಎಂದು ಭಾವಿಸಿದ ಆರೋಪಿಗಳು ಕೊನೆಗೆ ವಿಧಿಯಿಲ್ಲದೇ ಶರಣಾಗಿದ್ದಾರೆ.

ಬಟ್ಟೆ ಬದಲಾಯಿಸಿದ್ರು:
ದೀಪಕ್ ಹತ್ಯೆ ಮಾಡಿ ಕಾಟಿಪಳ್ಳದಿಂದ ಪರಾರಿಯಾಗಬೇಕಾದರೆ, ದಾರಿ ಮಧ್ಯೆ ರಕ್ತಸಿಕ್ತವಾಗಿದ್ದ ತಮ್ಮ ಬಟ್ಟೆಗಳನ್ನು ಆರೋಪಿಗಳನ್ನು ಬದಲಿಸಿದ್ದಾರೆ. ಕೊಲೆ ಮಾಡುವ ಸಂದರ್ಭದಲ್ಲಿ ದೀಪಕ್ ಮೈ ಮೇಲಿನಿಂದ ರಕ್ತವು ದುಷ್ಕರ್ಮಿಗಳು ಧರಿಸಿದ್ದ ಟಿ-ಶರ್ಟ್ ಮೇಲೆ ಚಿಮ್ಮಿತ್ತು. ಇದರಿಂದ ನೋಡುವವರಿಗೆ ನಮ್ಮ ಮೇಲೆ ಅನುಮಾನ ಬರಬಾರದು ಎಂದು ತಾವು ಧರಿಸಿದ್ದ ಬಟ್ಟೆಯನ್ನು ಕಾರಿನಲ್ಲಿಯೇ ಬದಲಿಸಿದ್ದರು. ವಶಪಡಿಸಿಕೊಂಡಿದ್ದ ಸ್ವಿಫ್ಟ್ ಕಾರಿನೊಳಗೆ ರಕ್ತಸಿಕ್ತವಾಗಿದ್ದ ಬಟ್ಟೆಗಳು ಪತ್ತೆಯಾಗಿತ್ತು.

deepak murder 7

ಕಾರು ಚಾಲಕನ ಸಮಯ ಪ್ರಜ್ಞೆ.
ನಾಲ್ವರು ಆರೋಪಿಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ವ್ಯಕ್ತಿ ಮೂಲ್ಕಿ ಪೊಲೀಸರು ಬಾಡಿಗೆಗೆ ಪಡೆದುಕೊಂಡಿದ್ದ ಖಾಸಗಿ ಕಾರಿನ ಚಾಲಕ. ಏಕೆಂದರೆ ಕಿನ್ನಿಗೋಳಿಯಿಂದ ಮಿಜಾರು ಗುತ್ತು ವರೆಗಿನ ಸುಮಾರು 28 ಕಿಮೀ. ಕಡಿದಾದ ಒಳ ದಾರಿಯಲ್ಲಿ ದುಷ್ಕರ್ಮಿಗಳನ್ನು ಬೆನ್ನಟ್ಟಿಕೊಂಡು ಹೋಗುವುದು ತುಂಬಾ ಕಷ್ಟ ಇತ್ತು. ಕಡಿದಾದ ದಾರಿಯಲ್ಲಿ ಯಾವುದಕ್ಕೂ ಹೆದರದೇ ಧೈರ್ಯವಾಗಿ ಅತೀ ವೇಗದಲ್ಲಿ ಆರೋಪಿಗಳ ಹಿಂದೆಯೇ ಖಾಸಗಿ ಚಾಲಕ ಕಾರನ್ನು ಓಡಿಸಿದ್ದರು. 25 ವರ್ಷದ ಒಳಗಿನ ಯುವ ಚಾಲಕನ ಚಾಣಾಕ್ಷತನ, ಸಮಯ ಪ್ರಜ್ಞೆಯಿಂದ ಕೊನೆಗೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಅಜ್ಞಾತ ಸ್ಥಳದಲ್ಲಿ ವಿಚಾರಣೆ
ಈ ರೀತಿ ಸಿನಿಮೀಯ ಶೈಲಿಯಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಮಿಜಾರು ಗುತ್ತುವಿನಿಂದ ಪೊಲೀಸರ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ದೀಪಕ್ ಕೊಲೆ ವಿಚಾರವಾಗಿ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ದೀಪಕ್ ಹತ್ಯೆಗೆ ನಿಜವಾದ ಕಾರಣ ಏನು ಎಂಬುದು ಕೂಡ ಸದ್ಯದಲ್ಲೇ ಬಹಿರಂಗಗೊಳ್ಳುವ ಸಾಧ್ಯತೆಯಿದೆ.

 MNG DEEPAK MURDER 1

MNG DEEPAK MURDER 4

MNG DEEPAK MURDER 5

MNG MURDER AV 1

MNG MURDER AV 6

MNG MURDER AV 5

 

MNG MURDER AV 2

MNG MURDER AV 3

deepak body 1

deepak body 2

 

 

deepak body 5

deepak body 6

deepak body 7

deepak body 10

deepak body 11

deepak body 13

deepak body 14

deepak body 15

deepak body 16

deepak body 17

deepak body 18

deepak body 20

deepak body 21

 

 

deepak body 24

deepak body 26

TAGGED:deepak raoMangaloreMurderpolicePublic TVಕೊಲೆದೀಪಕ್ ರಾವ್ಪಬ್ಲಿಕ್ ಟಿವಿಪೊಲೀಸ್ಮಂಗಳೂರು
Share This Article
Facebook Whatsapp Whatsapp Telegram

Cinema Updates

pawan kalyan sharmista panoli
ಪುಣೆ ಕಾನೂನು ವಿದ್ಯಾರ್ಥಿನಿ ಪರ ನಿಂತ ಪವನ್‌ ಕಲ್ಯಾಣ್‌ – ದೀದಿ ಹೇಳಿಕೆಗೆ ಖಂಡನೆ
13 minutes ago
Mukhyamantri Chandru
ಶಿವಣ್ಣನ ರೀತಿಯಲ್ಲಿ ಇನ್ಯಾರು ಕಮಲ್‌ ಪರವಾಗಿದ್ದಾರೋ ಅವರೆಲ್ಲ ನಾಡದ್ರೋಹಿಗಳು: ಮುಖ್ಯಮಂತ್ರಿ ಚಂದ್ರು
55 minutes ago
Kamal Haasan Sudha rani
ಕರ್ನಾಟಕ, ಕನ್ನಡ ಭಾಷೆ ಬಗ್ಗೆ ಯಾರೇ ತಪ್ಪಾಗಿ ಮಾತಾಡಿದ್ರೂ ಒಪ್ಪಲ್ಲ: ಸುಧಾರಾಣಿ
2 hours ago
Rachita Ram
ಫೈನಲ್‌ಗೆ ಲಗ್ಗೆಯಿಟ್ಟ ಆರ್‌ಸಿಬಿ – `ಈ ಸಲ ಕಪ್‌ ನಮ್ದೇʼ ಎಂದ ಡಿಂಪಲ್ ಕ್ವೀನ್
3 hours ago

You Might Also Like

nigeria flood
Latest

ರೌದ್ರರೂಪ ತಾಳಿದ ನೈಜೀರಿಯಾ ನದಿಗಳು – ಜಲಪ್ರಳಯಕ್ಕೆ 150ಕ್ಕೂ ಅಧಿಕ ಮಂದಿ ಬಲಿ

Public TV
By Public TV
7 minutes ago
Mandya 4
Latest

ಮಂಡ್ಯದಲ್ಲಿ ಬಾಲಕಿ ಸಾವು ಪ್ರಕರಣ – ಭುಗಿಲೆದ್ದ ಆಕ್ರೋಶ, ತನಿಖೆಗೆ ವೈದ್ಯರ ತಂಡ ರಚನೆ

Public TV
By Public TV
10 minutes ago
Vidhyapeeta
Bengaluru City

ಪಬ್ಲಿಕ್ ಟಿವಿ ವಿದ್ಯಾಪೀಠ – ಮೊದಲ ದಿನವೇ ಬನ್ನಿ ಲ್ಯಾಪ್‌ಟಾಪ್‌ ಗೆಲ್ಲಿ!

Public TV
By Public TV
34 minutes ago
Vidhyapeeta
Bengaluru City

`ಪಬ್ಲಿಕ್ ಟಿವಿ’ ವಿದ್ಯಾಪೀಠಕ್ಕೆ ಬನ್ನಿ – ಗಂಟೆಗೊಂದು ಬೈಸಿಕಲ್ ಗೆಲ್ಲಿ!

Public TV
By Public TV
34 minutes ago
Public TV vidyapeeta
Bengaluru City

ಇಂದಿನಿಂದ `ಪಬ್ಲಿಕ್ ಟಿವಿ ವಿದ್ಯಾಪೀಠʼ – ಕರ್ನಾಟಕದ ಅತಿದೊಡ್ಡ ಶೈಕ್ಷಣಿಕ ಮೇಳಕ್ಕೆ ತಪ್ಪದೇ ಬನ್ನಿ!

Public TV
By Public TV
35 minutes ago
public tv mega education expo
Bengaluru City

ಪಬ್ಲಿಕ್‌ ಟಿವಿಯ ‘ವಿದ್ಯಾಪೀಠ’ ಶೈಕ್ಷಣಿಕ ಮೇಳಕ್ಕೆ ಅದ್ದೂರಿ ಚಾಲನೆ

Public TV
By Public TV
36 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?