ಲಕ್ನೋ: ನವವಿವಾಹಿತೆಯೊಬ್ಬಳು (Bride) ಮದುವೆಯಾದ (Marriage) ಮಾರನೇ ದಿನ ಅತ್ತೆ ಮನೆಯಲ್ಲಿದ್ದ ಎಲ್ಲಾ ನಗದು, ಚಿನ್ನಾಭರಣ ದೋಚಿಕೊಂಡು ಓಡಿಹೋಗಿ ನಂತರ ವರನಿಗೆ ನಾನು ನಿನ್ನನ್ನು ಪ್ರೀತಿಸುತ್ತಿಲ್ಲ, ಇನ್ನು ಮುಂದೆ ನನ್ನನ್ನು ಸಂಪರ್ಕಿಸಬೇಡಿ ಎಂದು ಹೇಳಿದ ಘಟನೆ ಉತ್ತರಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರಪ್ರದೇಶದ ತಕತೌಲಿ ಗ್ರಾಮದ ನಿವಾಸಿ ಅರವಿಂದ್ ಮೋಸ ಹೋದ ನವವಿವಾಹಿತ. ಈತನಿಗೆ ಇಬ್ಬರು ವ್ಯಕ್ತಿಗಳು ಮದುವೆ ಮಾಡಿಸುವುದಾಗಿ ಹೇಳಿ 70,00 ರೂ. ಹಣ (Money) ತೆಗೆದುಕೊಂಡಿದ್ದರು. ಅದಾದ ನಂತರ ಬಿಹಾರದ ಗಯಾಗೆ ಹೋಗಿ ಅಲ್ಲಿ ಹಣ ಪಡೆದು ಮದುವೆಯನ್ನು ನಿಶ್ಚಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಗಯಾದ ದೇವಸ್ಥಾನದಲ್ಲಿ ಅರವಿಂದ್ಗೆ ವಿವಾಹ ನೆರವೆರಿದೆ. ನಂತರ ಅರವಿಂದ್ ಹಾಗೂ ಆತನ ಪತ್ನಿ ತಮ್ಮ ಸ್ವಂತ ನಿವಾಸಕ್ಕೆ ಮರಳಿದ್ದಾರೆ. ಅದಾದ ಬಳಿಕ ಮಾರನೇ ದಿನ ಅರವಿಂದ್ ಎಚ್ಚರಗೊಂಡು ನೋಡಿದಾಗ ಪತ್ನಿ ಇರಲಿಲ್ಲ. ಜೊತೆಗೆ ಮನೆಯಿಂದ ಬಾಕ್ಸ್ನಲ್ಲಿ ಇಟ್ಟಿದ್ದ 30,000 ರೂ. ಮೌಲ್ಯದ ನಗದು, ಆಭರಣ, ಮದುವೆಗೆ ನೀಡಿದ್ದ ಬಟ್ಟೆಗಳು ಕಾಣೆಯಾಗಿದ್ದವು. ಇದನ್ನೂ ಓದಿ: ಆಜಾದ್ ನಗರದಲ್ಲಿ ಕಾರು ಜಖಂ – ಹರ್ಷ ಸಹೋದರಿ ಅಶ್ವಿನಿ ವಿರುದ್ಧ FIR
ಘಟನೆಗೆ ಸಂಬಂಧಿಸಿ ಅರವಿಂದ್ ವಿರುದ್ಧ ಇಬ್ಬರು ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾನೆ. ಘಟನೆಗೆ ಸಂಬಂಧಿಸಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೊಬೈಲ್ ನೋಡ್ತಿದ್ದಕ್ಕೆ ಗದರಿದ ತಾಯಿ – ಮನನೊಂದು ನೇಣಿಗೆ ಶರಣಾದ ಮಗಳು