ಬಾಗಲಕೋಟೆ: ಆಸ್ತಿ ಹಂಚಿಕೆ ಮಾಡಿಲ್ಲವೆಂದು ಮಕ್ಕಳೇ ಹೆತ್ತ ತಂದೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆಯೊಂದು ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ನಿಂಗಾಪುರ ಗ್ರಾಮದಲ್ಲಿ ನಡೆದಿದೆ.
ಶೇಕಪ್ಪ ಮನಗುಳಿ ಎಂಬ 80 ವರ್ಷದ ವ್ಯಕ್ತಿಯೇ ಹಲ್ಲೆಗೊಳದ ತಂದೆ. ಶೇಕಪ್ಪ 6 ಕೂರಗಿ ಜಮೀನನ್ನು ಹೊಂದಿದ್ದಾರೆ. ಇದೀಗ ಇವರ ಮಕ್ಕಳಾದ ಕನಕಪ್ಪ ಹಾಗೂ ಯಲ್ಲಪ್ಪ ನಮಗೆ ಆಸ್ತಿ ಪಾಲು ಮಾಡು ಎಂದು ಪೀಡಿಸುತ್ತಿದ್ರು. ಆದ್ರೆ ತಂದೆ ಶೇಕಪ್ಪ ಮಾತ್ರ ಮಕ್ಕಳ ಮಾತಿಗೆ ಒಪ್ಪಿರಲಿಲ್ಲ. ಹೀಗಾಗಿ ಆಕ್ರೋಶಗೊಂಡ ಮಕ್ಕಳಾದ ಕನಕಪ್ಪ ಹಾಗೂ ಯಲಪ್ಪ ಬಡಿಗೆ ಹಾಗೂ ಕಲ್ಲಿನಿಂದ ಕೈ, ಕಾಲುಗಳಿಗೆ ಹೊಡೆದು ಮನಬಂದಂತೆ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಗಂಭೀರ ಗಾಯಗೊಂಡಿರುವ ಶೇಕಪ್ಪ ಸದ್ಯ ಬಾಗಲಕೋಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಕನಕಪ್ಪ ಹಾಗೂ ಯಲ್ಲಪ್ಪನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.