ಚಿತ್ರದುರ್ಗ: ನಾಲ್ಕು ದಶಕಗಳ ಬಳಿಕ ಹಿಂದೆ ಸಾವನ್ನಪ್ಪಿದ್ದ ವ್ಯಕ್ತಿ ಮರಳಿ ಊರಿಗೆ ಬಂದಿರುವ ಅಚ್ಚರಿಯ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿತ್ರನಾಯಕನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ನಿವಾಸಿಯಾಗಿದ್ದ ಈರಜ್ಜ ತನ್ನ 32 ವಯಸ್ಸಿನಲ್ಲೇ 4 ದಶಕಗಳ ಹಿಂದೆ ಅನಾರೋಗ್ಯದಿಂದ ಸಾವಿಗೀಡಾಗಿದ್ದರು. ಕುಟುಂಬಸ್ಥರು ಈರಜ್ಜರ ಅಂತ್ಯ ಸಂಸ್ಕಾರವನ್ನು ನಡೆಸಿದ್ದರು. ಆದರೆ ಸದ್ಯ ಈಗ ಮತ್ತೆ ಈರಜ್ಜ ಮರಳಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಆಚ್ಚರಿಯನ್ನು ತಂದಿದೆ.
ಈರಜ್ಜ ಆಂಧ್ರಪ್ರದೇಶದ ಯಾಪಲಪರ್ತಿ ಗ್ರಾಮದಲ್ಲಿ ಮತ್ತೊಂದು ಮದುವೆಯಾಗಿದ್ದಾರೆ. ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಯಾಪಲಪರ್ತಿ ಗ್ರಾಮಕ್ಕೆ ಗೊಬ್ಬರ ಕೊಂಡುಕೊಳ್ಳಲೆಂದು ತೆರಳಿದ್ದರು. ಈ ವೇಳೆ ಈರಪ್ಪ ಅವರನ್ನು ಕಂಡ ಚಿತ್ರನಾಯಕನಹಳ್ಳಿ ಗ್ರಾಮಸ್ಥರು ಗುರುತಿಸಿ ಮಾತನಾಡಿದ್ದರು. ಸದ್ಯ ಈರಜ್ಜ ಅವರು ಗ್ರಾಮಕ್ಕೆ ವಾಪಸ್ ಆಗಿದ್ದು, ಪತಿಯನ್ನು ಗುರುತಿಸಿದ ಪತ್ನಿ ಮನೆಗೆ ಸಂಭ್ರಮದಿಂದ ಆಹ್ವಾನಿಸಿದ್ದಾರೆ.
ಈರಜ್ಜ ಗ್ರಾಮಕ್ಕೆ ಮರಳಿ ವಾಪಸ್ ಬಂದಿರುವುದರಿಂದ ಗ್ರಾಮಸ್ಥರು ಹಾಗೂ ಪತ್ನಿ ಸಂತಸ ವ್ಯಕ್ತಪಡಿಸಿದ್ದಾರೆ. ವೈದ್ಯರು ಮಾತ್ರ ಸತ್ತ ವ್ಯಕ್ತಿ ಮರಳಿ ಬರುವುದು ಅಸಾಧ್ಯ. ಹೀಗಾಗಿ ಅವರ ಡಿಎನ್ಎ ಪರೀಕ್ಷೆಯಿಂದ ಸತ್ಯಾಂಶ ತಿಳಿದು ಬರಲಿದೆ ಎಂದಿದ್ದಾರೆ. ಗ್ರಾಮಸ್ಥರು ಮಾತ್ರ ಈರಣ್ಣ ಅವರನ್ನು ನೋಡಲು ಮನೆಗೆ ಆಗಮಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಈರಜ್ಜ ಕೂಡ ನಾನೇ 56 ವರ್ಷಗಳ ಹಿಂದೆ ಸಾವನ್ನಪ್ಪಿದೆ. ಆದರೆ ಮರಳಿ ಜೀವ ಪಡೆದು ಬೇರೆಡೆ ತೆರಳಿದ್ದೆ ಎಂದು ಹೇಳುತ್ತಿದ್ದಾರೆ.