ತುಮಕೂರು: ಡಿಕೆ ಬ್ರದರ್ಸ್ ಹಾಗೂ ದೇವೇಗೌಡ ಕುಟುಂಬ ಎರಡೂ ಸೇರಿ ತುಮಕೂರಿಗೆ ಬರುವ ಹೇಮಾವತಿಗೆ ನೀರಿಗೆ ಅಡ್ಡ ಹಾಕುವ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ವಿಷಯದಲ್ಲಿ ಡಿಸಿಎಂ ಜಿ. ಪರಮೇಶ್ವರ್ ಅವರು ಅಮೂಲ್ ಬೇಬಿ ತರಹ ಆಗಿದ್ದಾರೆ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ಟೀಕಿಸಿದ್ದಾರೆ.
ಜಿಲ್ಲೆಗೆ ಬರುವ ನೀರನ್ನು ರಾಮನಗರ ತಾಲೂಕಿಗೆ ತೆಗೆದುಕೊಂಡ ಹೋಗಲಾಗುತ್ತಿದೆ. ತುಮಕೂರು ಜಿಲ್ಲೆಗೆ ಇದು ಮರಣ ಶಾಸನವಾಗಲಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕಾದ ಜಿಲ್ಲೆಯ ರಾಜಕಾರಣಿಗಳು ನಿದ್ದೆ ಮಾಡ್ತಿದ್ದಾರೆ. ಸಂಸದ ಮುದ್ದಹನುಮೇಗೌಡ ಜಿಲ್ಲೆಯಿಂದ ನೀರು ಬಿಟ್ಟು ಕೊಡಲ್ಲ ಅಂತ ಕಳೆದ ವಾರ ಹೇಳಿದ್ದಾರೆ. ಈಗ ಈ ವಿಚಾರವಾಗಿ ಕ್ರಮ ತೆಗೆದುಕೊಂಡು ಪುರುಷತ್ವ ತೋರಿಸಬೇಕು. ಈ ಕುರಿತು ಹೋರಾಟ ಮಾಡಬೇಕಿದ್ದ ಡಿಸಿಎಂ ಸುಮ್ಮನಿದ್ದಾರೆ. ಪರಮೇಶ್ವರ್ ಅವರು ನಮ್ಮ ದೃಷ್ಟಿಯಲ್ಲಿ ಅಮೂಲ್ ಬೇಬಿ. ಡಿಸಿಎಂಗೆ ಸಮ್ಮಿಶ್ರ ಸರ್ಕಾರದಲ್ಲಿ ಹಾಯಲ್ಲ, ಒದೆಯಲ್ಲ, ಒಳ್ಳೆಯದು ಮಾಡೋಕೆ ಆಗುತ್ತಿಲ್ಲ ಎಂದು ವ್ಯಂಗ್ಯವಾಡಿದರು.
ಜಿಲ್ಲೆಯಲ್ಲಿ ಮೂವರು ಸಚಿವರಿದ್ದಾರೆ. ಇವರು ಕ್ಯಾಬಿನೇಟ್ನಲ್ಲಿ ಈ ಯೋಜನೆ ವಿರೋಧ ವ್ಯಕ್ತಪಡಿಸಬೇಕಾದವರ್ರು ಸುಮ್ಮನ್ನಿದ್ದಾರೆ. ಈಗಿನ ಸರ್ಕಾರಕ್ಕೆ ಮೂರು ಜಿಲ್ಲೆಗಳು ಮಾತ್ರ ಗೊತ್ತು ಬೇರೆ ಜಿಲ್ಲೆಗಳು ಗೊತ್ತಿಲ್ಲ. ರೇವಣ್ಣ ಅವರಿಗಂತೂ ಹೊಳೆನರಸೀಪುರ ಕರ್ನಾಟಕ ಇದ್ದಹಾಗೆ, ಹಾಸನ ಜಿಲ್ಲೆ ಇಂಡಿಯಾ ಇದ್ದಹಾಗೆ. ಅವರಿಗೆ ಅವರ ಜಿಲ್ಲೆ ಮಾತ್ರ ಗೊತ್ತಿರುವುದು. ಹಾಸನ ಜಿಲ್ಲೆಯ ಪಕ್ಕದವರ ನೋವು ಗೊತ್ತಿಲ್ಲ. ಕುಮಾರಸ್ವಾಮಿಯವರು ಸಿಎಂ ಸ್ಥಾನದಲ್ಲಿದ್ದಾರೆ. ಎಲ್ಲರನ್ನು ಕರೆದು ನೀರಿನ ವಿಚಾರವಾಗಿ ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಜಿ.ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv