ಆಯುಧಪೂಜೆ, ಜಂಬೂಸವಾರಿ: ಮೈಸೂರು ಅರಮನೆಯಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಪೂರ್ಣ ಪಟ್ಟಿ ಇಲ್ಲಿದೆ

Public TV
2 Min Read
DASARA LIST

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಎರಡು ದಿನ ಬಾಕಿ ಇದ್ದು, ಇದಕ್ಕಾಗಿ ಮೈಸೂರಿನಲ್ಲಿ ಸಕಲ ರೀತಿಯ ಸಿದ್ಧತೆ ನಡೆಯುತ್ತಿದೆ.

ಗುರುವಾರ ಮೈಸೂರು ಅರಮನೆಯಲ್ಲಿ ಸಾಂಪ್ರದಾಯಿಕ ಆಯಧ ಪೂಜೆ ನಡೆಯಲಿದೆ. ಇದಕ್ಕಾಗಿ ಇಂದು ಅರಮನೆಯಲ್ಲಿದ್ದ ಬೆಳ್ಳಿರಥವನ್ನ ಹೊರತೆಗೆದು ಸ್ವಚ್ಛಗೊಳಿಸಲಾಯಿತು.

Ayuda pooje mysore palace 2

ಗುರುವಾರದ ಕಾರ್ಯಕ್ರಮಗಳು
– ಬೆಳಗ್ಗೆ 5.30ಕ್ಕೆ ಚಂಡಿ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಆರಂಭವಾಗಲಿದೆ.
– ಬೆಳಗ್ಗೆ 7ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮನ.
– ಬೆಳಗ್ಗೆ 7.45ಕ್ಕೆ ಖಾಸ್ ಆಯುಧಗಳು ಅರಮನೆಯಿಂದ ಜಯ ಮಾರ್ತಾಂಡ ದ್ವಾರದ ಮಾರ್ಗವಾಗಿ ಕೋಡಿ ಸೋಮೇಶ್ವರ ದೇವಾಲಯಕ್ಕೆ ಕಳುಹಿಸಿ ಪೂಜೆ. ಆಯುಧಗಳೊಂದಿಗೆ ಹೆಜ್ಜೆ ಹಾಕಲಿರುವ ಪಟ್ಟದ ಆನೆ, ಕುದುರೆ, ಹಸು.
– ಬೆಳಗ್ಗೆ 8.15ರಿಂದ 8.30ಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಅರಮನೆಯ ಕಲ್ಯಾಣ ಮಂಟಪಕ್ಕೆ ಆಯುಧಗಳ ಆಗಮನ.
– ಬೆಳಗ್ಗೆ 9ಕ್ಕೆ ಚಂಡಿಕಾ ಹೋಮದ ಕೊಠಡಿಯಲ್ಲಿ ಚಂಡಿಕಾ ಹೋಮ ಪೂರ್ಣಾಹುತಿ.
– ಬೆಳಗ್ಗೆ 10ರಿಂದ 10.25 ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ. ಕತ್ತಿ, ಖಡ್ಗ, ಗುರಾಣಿ, ಯುದ್ಧೋಪಕರಣ, ವಾಹನ ಸೇರಿದಂತೆ ಅರಮನೆಯ ಆಯುಧಗಳಿಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಂದ ಪೂಜೆ.
– ಸಾಯಂಕಾರ ಅಂಬಾವಿಲಾಸ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ವಿಸರ್ಜನೆ.
– ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ.

jambu savari mysuru 6

ಶುಕ್ರವಾರದ ಕಾರ್ಯಕ್ರಮಗಳು
– ಬೆಳಗ್ಗೆ 8.45 ಕ್ಕೆ ಅರಮನೆಗೆ ಪಟ್ಟದ ಆನೆ, ಕುದುರೆ, ಹಸು, ಆಗಮನ ಮತ್ತು ಪೂಜೆ
– 9.10 ರಿಂದ 10.15 ರ ಒಳಗೆ ವಜ್ರಮುಷ್ಠಿ ಕಾಳಗ
– ಕಾಳಗ ಮುಗಿದ ಮೇಲೆ ಬೆಳ್ಳಿ ರಥದಲ್ಲಿ ಯದುವೀರ್ ವಿಜಯಯಾತ್ರೆ
– ಅರಮನೆಯ ಒಳಗಿನ ಭುವನೇಶ್ವರಿ ದೇವಾಲಯದಲ್ಲಿ ಯದುವೀರ್ ಪೂಜೆ
– ಪೂಜೆ ನಂತರ ಮೆರವಣಿಗೆ ಮೂಲಕ ಯದುವೀರ್ ಅರಮನೆಗೆ ವಾಪಸ್
– ಅಲ್ಲಿಗೆ ಖಾಸಗಿ ದರ್ಬಾರ್ ಮುಕ್ತಾಯ.
– ಮಧ್ಯಾಹ್ನ 2.30 ರಿಂದ 3.16 ರ ಕುಂಭ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ.
– 3.40 ರಿಂದ 4.10 ರ ಲಗ್ನದಲ್ಲಿ ವಿಜಯದಶಮಿಯ ಮೆರವಣಿಗೆಗೆ ಪುಷ್ಪಾರ್ಚನೆ.
– ಮೆರವಣಿಗೆ ಮುಗಿದ ಮೇಲೆ 7ಕ್ಕೆ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಆರಂಭ.

jambu savari mysuru 3

ಇಂದು ಶಸ್ತ್ರ ಸಹಿತ ಪೊಲೀಸ್ ಸಿಬ್ಬಂದಿಗಳು, ಗಜಪಡೆ ಹಾಗೂ ಅಶ್ವಪಡೆಗಳು ಕೊನೆ ಹಂತದ ತಾಲೀಮಿನಿಲ್ಲಿ ಭಾಗಿಯಾಗಿದ್ದವು. ಆನೆಗಳಿಗೆ ಪುಷ್ಪರ್ಚನೆ ಮಾಡಿ ಗೌರವ ವಂದನೆ ಸ್ವೀಕರಿಸಿದ ನಗರ ಪೊಲೀಸ್ ಆಯುಕ್ತರು, ಶುಕ್ರವಾರ ನಡೆಯಲಿರುವ ಜಂಬೂಸವಾರಿಗೆ ಎಲ್ಲ ಸಿದ್ಧತೆ ನಡೆದಿದೆ. ಯಶಸ್ವಿ ಜಂಬೂಸವಾರಿಗೆ ಪೊಲೀಸ್ ಇಲಾಖೆ ಸಜ್ಜಾಗಿದೆ. ಜಂಬೂಸವಾರಿ ಸಮಯದಲ್ಲಿ ಪಾರಂಪರಿಕ ಹಳೆ ಕಟ್ಟಡಗಳ ಮೇಲೆ ಹತ್ತಬಾರದು ಅಂತ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಸೂಚನೆ ನೀಡಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಹೇಳಿದ್ದಾರೆ.

170921kpn88

ಜಂಬೂಸವಾರಿಯಲ್ಲಿ ಗಮನ ಸೆಳೆಯುವ ಸ್ತಬ್ಧ ಚಿತ್ರಗಳಿಗೆ ಕೊನೆ ಹಂತದ ಸ್ಪರ್ಶ ನೀಡಲಾಗುತ್ತಿದೆ. ಈ ಬಾರಿ 42 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಭಾಗಿಯಾಗುತ್ತಿವೆ. 30 ಜಿಲ್ಲೆಗಳ ಜೊತೆ 12 ಇಲಾಖೆಯ ಸ್ತಬ್ಧ ಚಿತ್ರಗಳು. ಭಿನ್ನ ವಿಭಿನ್ನ ಸಂದೇಶ ಸಾರುತ್ತಿದ್ದು ಈ ಬಾರಿ ಜನರಿಗೆ ಸ್ತಬ್ಧ ಚಿತ್ರಗಳು ಮುದ ನೀಡಲಿದೆ ಎಂದು ಹಾವೇರಿ ಸ್ತಬ್ಧ ಚಿತ್ರ ಅಧಿಕಾರಿ ಪ್ರಕಾಶ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article