ಬೆಂಗಳೂರು: ಕನ್ನಡ ಚಿತ್ರರಂಗದ ನಟ ಸುದೀಪ್ ಮತ್ತು ನನ್ನ ಸ್ನೇಹದ ಬಗ್ಗೆ ಟ್ವೀಟ್ ಮಾಡಿರುವುದು ನಾನೇ. ನನ್ನ ಟಿಟ್ಟರ್ ಖಾತೆ ಹ್ಯಾಕ್ ಆಗಿಲ್ಲ ಅಂತಾ ನಟ ದರ್ಶನ್ ಮತ್ತೊಂದು ಟ್ವೀಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಕೆಲ ಚಾನೆಲ್ಸ್ ಹೇಳುವಂತೆ ಯಾರೇನು ಹ್ಯಾಕ್ ಮಾಡಿಲ್ಲ. ಇದು ನನ್ನ ಖಾತೆ, ನನ್ನ ಮಾತುಗಳೇ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ಆಲೋಚಿಸಿಯೇ ನಾನು ಹೇಳಲು ಬಯಸುವ ವೇದಿಕೆ
— Darshan Thoogudeepa (@dasadarshan) March 6, 2017
`ಇದು ನನ್ನ ಖಾತೆ, ಇಲ್ಲಿ ಎಲ್ಲವೂ ನಾನು ಹೇಳಿದ ಮಾತುಗಳೇ ಆಗಿವೆ. ನನ್ನ ಗಮನಕ್ಕೆ ಬಂದ ಸಂಗತಿಗಳನ್ನು ತುಂಬಾ ಆಲೋಚಿಸಿಯೇ ನಾನು ಹೇಳಲು ಬಳಸುವ ವೇದಿಕೆ ಇದಾಗಿದೆ ಅಂತಾ ದರ್ಶನ್ ಟ್ವೀಟ್ನಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!
ಭಾನುವಾರ ಸಂಜೆಯ ವೇಳೆಗೆ ಶಶಿಧರ್ ಪಾಟೀಲ್ ಎಂಬವರು ಸುದೀಪ್ ಅವರ ಟ್ವಿಟ್ಟರ್ ಹ್ಯಾಂಡಲ್ಗೆ @ಕಿಚ್ಚ ಸುದೀಪ್ ಸರ್, ನಿಮ್ಮನ್ನು ಹಾಗೂ ದರ್ಶನ್ ಅವರನ್ನು ಜೊತೆಯಾಗಿ ನಾವು ನೋಡಬೇಕು. ಒಂದೇ ವೇದಿಕೆಯಲ್ಲಿ ನೀವಿಬ್ಬರು ಜೊತೆಯಾಗಿರುವುದನ್ನು ನೋಡಿ ತುಂಬಾ ಸಮಯವಾಯಿತು ಎಂದು ಬರೆದಿದ್ದರು. ಬಳಿಕ ಸ್ಟಾರ್ ನಟರಿಬ್ಬರೂ ಪರಸ್ಪರ ಟ್ವೀಟ್ ಮಾಡಿಕೊಂಡಿದ್ದು, ತಮ್ಮಲ್ಲಿರುವ ಮನಸ್ತಾಪವನ್ನು ಹೊರಹಾಕಿದ್ದಾರೆ.
ಇದನ್ನೂ ಓದಿ: ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?