ಸಿಎಂ ಓರ್ವ ರೈತ, ದುಡಿಯೋ-ಕಳ್ಳೆತ್ತು ಯಾವುದೆಂದು ಗೊತ್ತು: ಸಿ.ಟಿ.ರವಿ

Public TV
1 Min Read
ckm ct ravi

– ನನ್ನ ಬಳಿ ಮೂರು ಖಾತೆಗಳಿವೆ

ಚಿಕ್ಕಮಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಓರ್ವ ಅನುಭವಿ ಹಾಗೂ ರೈತ. ಹೀಗಾಗಿ ರೈತನಿಗೆ ದುಡಿಯುವ ಎತ್ತು ಯಾವುದು ಮತ್ತು ಕಳ್ಳೆತ್ತು ಯಾವುದು ಅಂತ ಗೊತ್ತಿರುತ್ತೆ ಎಂದು ಖಾತೆ ಹಂಚಿಕೆ ಬಗ್ಗೆ ಸಿಎಂ ಪರ ಸಿ.ಟಿ.ರವಿ ಬ್ಯಾಟ್ ಬೀಸಿದ್ದಾರೆ.

ನಗರದ ನಗರಸಭೆ ಬಳಿ ಮಾತನಾಡಿದ ಅವರು, ದುಡಿಯುವ ಎತ್ತಿಗೆ ಚೆನ್ನಾಗಿ ಕೆಲಸ ಕೊಡುತ್ತಾರೆ. ಚೆನ್ನಾಗಿ ಮೇವು ಹಾಕಿದರೆ ಹೆಚ್ಚು ಕಾಲ ದುಡಿಯುತ್ತೆ. ಕಳ್ಳೆತ್ತಿಗೆ ಏನ್ ಕೊಟ್ರು ಹೆಗಲ ಮೇಲೆ ನೊಗ ಹಾಕುತ್ತಿದ್ದಂತೆ ಸೈಡಿಗೆ ಎಳೆದುಕೊಂಡು ಹೋಗಿ ನಿಲ್ಲುತ್ತೆ. ದುಡಿಯೋ ಎತ್ತಿಗೆ ಹೆಚ್ಚು ಕೆಲಸ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ ಎಂದರು.

C.T.RAVI

ನನ್ನ ಬಳಿ ಮೂರು ಖಾತೆಗಳಿವೆ. ನಾನು ಮೊದಲೇ ತೀರ್ಮಾನಿಸಿಕೊಂಡಿದ್ದೇನೆ. ಯಾವುದನ್ನ ಕೊಟ್ಟರು ಚೆನ್ನಾಗಿ ಕೆಲಸ ಮಾಡಬೇಕು. ಯೋಜನಾಬದ್ಧವಾಗಿ ಕೆಲಸ ಮಾಡಬೇಕು. ಸಕ್ಕರೆ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂರು ಖಾತೆಯಲ್ಲೂ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇವೆ. ಖಾತೆ ಹಂಚಿಕೆಯಲ್ಲಿ ಕಂಗಟ್ಟು ಅಂತ ಯಾವುದು ಇಲ್ಲ. ಕಗ್ಗಂಟಿನಾ ಪ್ರಶ್ನೆಯೇ ಇಲ್ಲ. ನೂತನ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ನನಗೆ ಯಾವ ಖಾತೆ ಕೊಟ್ಟರು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಸಿ.ಟಿ. ರವಿ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *