ಚಿಕ್ಕಮಗಳೂರು: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್ & ಕ್ರಿಮಿನಲ್ ಪಾರ್ಟಿ (Criminal Party) ಎಂದು ಮಾಜಿ ಸಚಿವ ಸಿ.ಟಿ.ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯ ಕಚೇರಿ (Lok Sabha Elections Office) ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಹುಂಡಿಯ ಹಣಕ್ಕೂ ಕೈ ಹಾಕಿದ್ದಾರೆ. ಇವರು ನಿಜವಾಗಿಯೂ ಜಾತ್ಯತೀತರಾ? ಕಾಂಗ್ರೆಸ್ ನಿಜವಾಗಿಯೂ ಜಾತ್ಯತೀತವಾಗಿದ್ದರೆ ಹುಂಡಿ ಕಳ್ಳರಾಗುತ್ತಿರಲಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಬಶೀರ್ ಸ್ಪಿನ್ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್ಗೆ 134 ರನ್ಗಳ ಮುನ್ನಡೆ
ತಮ್ಮ ಹೆಸರಲ್ಲಿ ರಾಮ-ಕೃಷ್ಣ-ಶಿವ ಇದ್ದಾನೆ ಅನ್ನೋದು ನಿಜವಾದರೆ ಭಕ್ತರ ಹುಂಡಿಗೆ ಕೈ ಹಾಕುತ್ತಿರಲಿಲ್ಲ. ಜಾತ್ಯತೀತರೇ ಆಗಿದ್ದರೆ ಮಸೀದಿ, ಚರ್ಚ್ ಎಲ್ಲದರಲ್ಲೂ 10% ಎಂದು ಹೇಳುತ್ತಿದ್ದರು. ಮಸೀದಿ-ಚರ್ಚ್ ಬಿಟ್ಟು ಕೇವಲ ಮಂದಿರದ ಹಣಕ್ಕೆ ಮಾತ್ರ ಕೈ ಹಾಕಿದ್ದಾರೆ. ಇವರು ಕಮ್ಯುನಲ್ ಮತ್ತು ಕ್ರಿಮಿನಲ್ ಅಲ್ಲದೇ ಮತ್ತೇನು ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ಸಿಗರಿಗೆ ಸೋಲು ಕಟ್ಟಿಟ್ಟ ಬುತ್ತಿ ಅಂತ ಚೆನ್ನಾಗಿ ಗೊತ್ತಿದೆ. ಸೋಲೋದಕ್ಕೆ ಏಕೆ ಚುನಾವಣೆಗೆ ನಿಲ್ಲುತ್ತಾರೆ? ಮೊದಲು ಮಕ್ಕಳು-ಮಂತ್ರಿಗಳನ್ನ ನಿಲ್ಲಿಸೋದಕ್ಕೆ ಯೋಚನೆ ಮಾಡುತ್ತಿದ್ದರು. ಈಗ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ರಣಜಿಯಲ್ಲಿ ದ್ವಿಶತಕ ಸಿಡಿಸಿ ಸರ್ಫರಾಜ್ ಖಾನ್ ಸಹೋದರ ಶೈನ್; ಕ್ರಿಕೆಟ್ ಲೋಕದಲ್ಲಿ ಅಣ್ತಮ್ಮ ಕಮಾಲ್!
ಇದೇ ವೇಳೆ ಬರ ಪರಿಸ್ಥಿತಿ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಬರ ಇದೆ. ಬರದಿಂದ ಜನ ಕಂಗಾಲಾಗಿದ್ದಾರೆ. ಕುಡಿಯೋಕೆ ನೀರಿಲ್ಲ. ಹಾಗಾಗಿ ಅವನು ಸಿಎಂ, ಇವನು ಸಿಎಂ ಅನ್ನೋದ ಬಿಟ್ಟು ಜನರಿಗೆ ಕುಡಿಯೋಕೆ ನೀರು ಕೊಡಿಸುವ ಕೆಲಸ ಮಾಡಲಿ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ. ಮೊದಲು ಅದನ್ನ ತಡೆಯಿರಿ. ದನ-ಕರುಗಳಿಗೆ ಕುಡಿಯೋಕೆ ನೀರಿಲ್ಲ, ಮೇವಿಲ್ಲ ಅದನ್ನ ನಿರ್ವಹಿಸುವ ಕೆಲಸ ಮಾಡಿಲಿ. ರಾಜ್ಯದ ಜನ ಕಷ್ಟದಲ್ಲಿರುವಾಗ ನಾನ್ ಸಿಎಂ, ನೀನ್ ಸಿಎಂ ಅಂತ ಕಿತ್ತಾಡೋಕೆ ಆಗುತ್ತಾ? ಎಂದು ಕಿಡಿ ಕಾರಿದ್ದಾರೆ.