ಆರು ಅಡಿ ಉದ್ದದ ಮೊಸಳೆ ಸೆರೆ

Public TV
1 Min Read
BGK MOSALE copy

ಬಾಗಲಕೋಟೆ: ನದಿ ಒಡಲು ಬತ್ತಿದ್ದರಿಂದ ಆಗಾಗ ನದಿ ಆಚೆ ಬಂದು ಭೀತಿ ಸೃಷ್ಟಿಸಿದ್ದ ಮೊಸಳೆಯನ್ನು ಗ್ರಾಮಸ್ಥರೇ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಮುಧೋಳ ತಾಲೂಕು ಮಾಚಕನೂರುದಲ್ಲಿ ನಡೆದಿದೆ.

ಘಟಪ್ರಭಾ ನದಿಯಲ್ಲಿ ಸೋಮವಾರ ನಸುಕಿನ ಜಾವ ಮಾಚಕನೂರು ಗ್ರಾಮದ ಯುವಕರು ಸೇರಿ ಸುಮಾರು ಆರು ಅಡಿ ಉದ್ದದ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ಮೊಸಳೆ ನೀರು, ಆಹಾರ ಹುಡುಕಿಕೊಂಡು ಬಂದಿದೆ. ಈ ವೇಳೆ ಯುವಕರು ಹಗ್ಗದ ಸಹಾಯದಿಂದ ಅದನ್ನು ಸೆರೆ ಹಿಡಿದು ಬಳಿಕ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಬೇಸಿಗೆ ಬಂತೆಂದರೆ ಘಟಪ್ರಭಾ ನದಿ ಬತ್ತುತ್ತದೆ. ಹೀಗಾಗಿ ನೀರು, ಆಹಾರ ಅರಸಿಕೊಂಡು ನದಿಯಿಂದ ಮೊಸಳೆಗಳು ಹೊರ ಬರುತ್ತವೆ. ಅನೇಕ ಸಂದರ್ಭದಲ್ಲಿ ಮೊಸಳೆ ದಾಳಿಗೆ ಜನ-ಜಾನುವಾರುಗಳ ಪ್ರಾಣ ಹಾನಿಯೂ ಆಗಿದೆ. ಈಗ ಬೇಸಿಗೆ ಆರಂಭವಾಗುತ್ತಿದ್ದಂತೆಯೇ ನದಿಯಾಚೆ ಮೊಸಳೆಗಳು ಬರುತ್ತಿದ್ದು, ಇದರಿಂದ ಮೊಸಳೆ ಕಂಡು ನದಿ ತೀರದ ಜನರು ಆತಂಕಗೊಂಡಿದ್ದಾರೆ ಎಂದು ಅರಣ್ಯ ಸಿಬ್ಬಂದಿ ಹೇಳಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದ ಮೊಸಳೆಯನ್ನ ಆಲಮಟ್ಟಿ ಜಲಾಶಯ ಹಿನ್ನೀರಿಗೆ ಬಿಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *